ಕಾರವಾರ:
ಶಿರವಾಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿನ ಶೇಜವಾಡದಲ್ಲಿ ಶಾಸಕರ ನಿಧಿ ಬಳಸಿ ರಸ್ತೆ ಪಕ್ಕದಲ್ಲಿಯೇ ಕೊಳವೆ ಬಾವಿ ಕೊರೆದು ಹಣ ದುರುಪಯೋಗ ಮಾಡಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಈ ಬಗ್ಗೆ ಶುಕ್ರವಾರ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿರುವ ಊರ ನಾಗರಿಕರು, ಶೇಜವಾಡದಲ್ಲಿ ಉಪಯೋಗಕ್ಕೆ ಬಾರದ ಕೊಳವೆ ಬಾವಿ ನಿರ್ಮಿಸಲಾಗಿದೆ. ರಸ್ತೆ ನಿಯಮಗಳನ್ನು ಗಾಳಿಗೆ ತೂರಿ ಕೆಲಸ ನಡೆದಿದೆ. ರಸ್ತೆ ಅಗಲೀಕರಣದ ವೇಳೆ ಕೊಳವೆ ಬಾವಿಯನ್ನು ಮುಚ್ಚಬೇಕಾಗಿದ್ದು, ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಿದಂತಾಗುತ್ತದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಸ್ಥಳೀಯ ಜನರ ಮನೆ ನಿರ್ಮಾಣಕ್ಕೆ ತೊಂದರೆ ನೀಡುವ ಗ್ರಾಮ ಪಂಚಾಯತವೂ ಕೊಳವೆ ಬಾವಿ ನಿರ್ಮಾಣಕ್ಕೆ ಯಾವದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ರಸ್ತೆಯಿಂದ 2ಮೀಟರ್ಗಿಂತಲೂ ಕಡಿಮೆ ಅಂತರದಲ್ಲಿ ಕೊಳವೆ ಬಾವಿ ತೋಡಿರುವದು ಜನರಿಗೂ ತೊಂದರೆಯಾಗಿದೆ ಎಂದು ವಿವರಿಸಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಎಲ್ಲಡೆ ವ್ಯಾಪಕವಾಗಿ ನೀರಿನ ತೊಂದರೆ ಇತ್ತು. ಆಗ ಕೊಳವೆ ಬಾವಿ ಅವಷ್ಯಕತೆ ಇದ್ದರೂ ತೆರೆಯಲಿಲ್ಲ. ಸದ್ಯ ಮಳೆಯಾಗುತ್ತಿದ್ದು, ನೀರಿನ ಅಭಾವ ಕಡಿಮೆಯಾಗಿದೆ. ಹೀಗಿದ್ದರೂ ಹಣ ಪೋಲು ಮಾಡುವ ಉದ್ದೇಶದಿಂದ ಕೊಳವೆ ಬಾವಿ ತೆರೆಯಲಾಗಿದೆ ಎಂದು ದೂರಿದರು. ತಕ್ಷಣ ಈ ಬಗ್ಗೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು ಸತೀಶ್ ಅರ್ಗೇಕರ್, ಸಂತೋಷ ನಾಯ್ಕರ, ಸಂಜಯ ಲೋಲೇಕರ, ಶ್ರೀಕಾಂತ ಶೇಜವಾಡಕರ, ಪ್ರದೀಪ ಶೇಜವಾಡಕರ, ದೀರಜ ಶೇಡವಾರಕರ್ ಇತರರು ದೂರು ನೀಡಿದರು.
Leave a Comment