ಹೊನ್ನಾವರ :
ಪಟ್ಟಣದ ಕೆ.ಎಸ್,ಆರ್,ಟಿ,ಸಿ, ಬಸ್*ನಿಲ್ದಾಣ ಆವರಣದಲ್ಲಿ ಬಿದ್ದ ಕಸವನ್ನು ಸ್ವಚ್ಛಗೊಳಿಸಿ ಬೇರೆಡೆ ಸ್ಥಳಾಂತರಿಸದೇ, ನಿಲ್ದಾಣದ ಆವರಣದೊಳಗೆ ರಾಶಿ ಹಾಕುತ್ತಿರುವುದರಿಂದ ಕೊಳೆತು ದುರ್ವಾಸನೆ ಬೀರುತ್ತಿದ್ದು ಮೂಗು ಮುಚ್ಚಿಕೊಂಡು ಬಸ್ಸಿನಲ್ಲಿ ಕುಳಿತಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಬಸ್ನಿಲ್ದಾಣದ ಮೇಲಿನ ಸಿಮೇಂಟಿನ ಛಾವಣಿ ತೆಗೆದು ಬಸ್ನಿಲ್ದಾಣದ ಆವರಣದಲ್ಲಿ ಎಸೆದಿದ್ದು ಮಳೆಯ ನೀರು ಹೋಗದೆ ಮಣ್ಣಿನ ರಾಶಿ ಹಾಗೂ ಕಸ-ಕಡ್ಡಿಗಳು ಅಲ್ಲೇ ಎಸೆದು ಪ್ರಯಾಣಿಕರು ಮಳೆ ಬಂದರೆ ಹರಸಾಹಸ ಮಾಡಿ ಬಸ್ ಹತ್ತಬೇಕಾಗುತ್ತದೆ.
ಪ್ರಯಾಣಿಕರು ಬಸ್ನಿಲ್ದಾಣದ ಅಂಗಡಿಯಿಂದ ತಿಂಡಿ-ತಿನಿಸುಗಳು ತಿಂದಿ ಬಿಸಾಡಿದ ತ್ಯಾಜ್ಯವನ್ನು ಆಯಾ ದಿನದಂದೆ ಸ್ವಚ್ಛಗೊಳಿಸಿ ನಗರ ಸಭೆಯ ವಾಹನಕ್ಕೆ ಇಲ್ಲವೇ ಬೇರೆಡೆ ಸಾಗಿಸುವ ಬದಲು ನಿಲ್ದಾಣದ ಆವರಣದೊಳಗೆ ಕಸದ ರಾಶಿ ಹಾಕಲಾಗುತ್ತಿದ್ದು, ಕಸದ ರಾಶಿ ಹಾಗೂ ಸಿಮೇಂಟ್ ಛಾವಣಿ ಮತ್ತು ಮಣ್ಣಿನ ರಾಶಿ ಅಲ್ಲೇ ಕಂಪೌಡ್ ಒಳಗಡೆ ಎತ್ತರವಾದ ಗುಡ್ಡೆ ತರ ರಾಶಿ ಹಾಕಲಾಗಿದೆ.
ತ್ಯಾಜ್ಯವನ್ನು ತಂಗುದಾಣದೊಳಗೆ ರಾಶಿ ಹಾಕುತ್ತಿದ್ದರೂ ಆರೇಳು ದಿನಕೊಮ್ಮೆ ಸುಡುತ್ತಿದ್ದರಿಂದ ಅಷ್ಟಾಗಿ ಕಸ ಕಾಣುತ್ತಿರಲಿಲ್ಲ. ಆದರೆ ಮಳೆಗಾಲದಲ್ಲಿ ನೆಂದಿರುವ ಕಸವನ್ನು ಸುಡಲು ಆಗದಿರುವುದರಿಂದ ಕೊಳೆತು ಗಬ್ಬು ವಾಸನೆ ಬೀರುತ್ತಿದ್ದು ಸೊಳ್ಳೆಗಳಿಗೆ ಆಶ್ರಯ ತಾಣವಾಗಿ ಪರಿಣಮಿಸಿದೆ. ಪ್ರಯಾಣಿಕರು ನರಕಯಾತನೆ ಅನುಭವಿಸುವಂತಾಗಿದೆ.
ಬಸ್ನಿಲ್ದಾಣದ ಸ್ವಚ್ಛತೆ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಕಿಂಚಿತ್ತೂ ತಲೆಕೆಡಿಸಿಕೊಳ್ಳುತ್ತಿಲ್ಲ ಸೊಳ್ಳೆಗಳ ಕಾಟವೂ ವಿಪರೀತವಾಗಿದೆ.ಆದ್ದರಿಂದ ಅಧಿಕಾರಿಗಳು ಸ್ವಚ್ಛತೆಯ ಬಗ್ಗೆ ಹೆಚ್ಚಿನ ನಿಗಾವಹಿಸಿ ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
Leave a Comment