ದಾಂಡೇಲಿ:
ನಗರದ ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಯವರು ಪ್ರತಿವರ್ಷದಂತೆ ಈವರ್ಷವೂ ಸಹ ನಗರದ ಹಾಗೂ ಸುತ್ತ ಮುತ್ತಲ ಗ್ರಾಮೀಣ ಭಾಗದ ಎಲ್ಲ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಿಯಾಯತಿ ದರದಲ್ಲಿ ನೋಟಬುಕ್ ವಿತರಿಸುವ ಮೂಲಕ ತಮ್ಮ ಶೈಕ್ಷಣಿಕ ಕಾಳಜಿಯನ್ನು ಮೆರೆದಿದ್ದಾರೆ.
ಕಳೆದ ಆರೇಳು ವರ್ಷಗಳಿಂದ ಕಾಗದ ಕಾರ್ಖಾನೆಯವರು ಈ ನೋಟಬುಕ್ ವಿತರಣೆ ಮಾಡುತ್ತಿದ್ದು ಪ್ರತೀವರ್ಷ ಶಾಲೆ ಆರಂಭವಾಗುತ್ತಿದ್ದಂತೆಯೆ ಆಯಾ ಶಾಲೆಗಳ ಎಲ್ಲ ವಿದ್ಯಾರ್ಥಿಗಳಿಗೆ ಕೂಪನ್ ನೀಡಿ, ಅಚ್ಚುಕಟ್ಟಾಗಿ ಹಂಚಿಕೆ ಮಾಡುವುದು ನಿಜಕ್ಕೂ ಒಂದು ಸೇವಾ ಕಾರ್ಯವೇ ಆಗಿದೆ. ಕಂಪನಿ ನೀಡುವ ಎಲ್ಲ ರೀತಿಯ ನೋಟಬುಕ್ಗಳೂ ಕೂಡಾ ಗುಣಮಟ್ಟದಿಂದ ಕೂಡಿದ್ದು, ವಿದ್ಯಾರ್ಥಿಗಳ ಬಳಕೆಗೆ ಅನುಕೂಲವಾಗುತ್ತಿವೆ. ಕಾಗದ ಕಾರ್ಖಾನೆಯವರು ಈ ರೀತಿ ರಿಯಾಯತಿ ದರದಲ್ಲಿ ನೋಟಬುಕ್ ನೀಡುತ್ತಿರುವ ಬಗ್ಗೆ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಪಾಲಕರು ಸಂತಸ ವ್ಯಕ್ತ ಪಡಿಸುವ ಜೊತೆಗೆ ಕಂಪನಿಯ ಶೈಕ್ಷಣಿಕ ಸೇವಾ ಕಾರ್ಯವನ್ನು ಶ್ಲಾಗಿಸುತ್ತಿದ್ದಾರೆ.
ಈ ಬಾರಿ 100 ಪೇಜಿನ 47 ಸಾವಿರ ನೋಟಬುಕ್, 200 ಪೇಜಿನ 55 ಸಾವಿರ ನೋಟಬುಕ್, 80 ಪೇಜ್ ಕಿಂಗ್ ಸೈಜನ್ 88 ಸಾವಿರ ನೋಟಬುಕ್, 160 ಪೇಜ್ ಕಿಂಗ್ ಸೈಜ್ನ 1,39,000 ನೋಟಬುಕ್ಗಳನ್ನು ಉತ್ಪಾದಿಸಲಾಗಿದ್ದು, ಒಟ್ಟೂ 13 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ. 50 ಟನ್ ಪೇಪರ್ ಹಾಗೂ 20 ಟನ್ ಡುಪ್ಲೆಕ್ಸ್ ಪೇಪರ್ನಿಂದ ತಯಾರಿಸಿಸಲ್ಪಟ್ಟ ನೋಟಬುಕ್ಗಳ ಒಟ್ಟೂ ಉತ್ಪಾದನಾ ವೆಚ್ಚ 75 ಲಕ್ಷ ರೂ.ಗಳಷ್ಠಗುತ್ತದೆ. ಇದರಲ್ಲಿ ಕಾಗದ ಕಾರ್ಖಾನೆಯ ಕಾಗದವನ್ನೇ ಬಳಸಿರುವುದರಿಂದ ಖರ್ಚು ಕಡಿಮೆ ಬಂದಿದೆಯಾದರೂ, ನೋಟಬುಕ್ ತಯಾರಿಕೆಗೆ ತಗಲುವ ವೆಚ್ಚಕ್ಕಿಂತ ಕಡಿಮೆ ದರದಲ್ಲಿ, ಅಂದರೆ ರಿಯಾಯತಿ ದರದಲ್ಲಿ ನೋಟಬುಕ್ ಹಂಚಿರುವುದರಿಂದ ಕಾಗದ ಕಾರ್ಖಾನೆಗೆ ಸರಿ ಸುಮಾರು 5 ಲಕ್ಷ ರೂ.ಗಳಷ್ಟು ಹೆಚ್ಚುವರಿ ಖರ್ಚು ಬರುತ್ತದೆ.
ಶೇ. 40ರಷ್ಟು ಕಡಿಮೆ ದರದಲ್ಲಿ ಬಡವರು ಹಾಗೂ ಶ್ರೀಮಂತ ವಿದ್ಯಾರ್ಥಿಗಳು ಎಂಬ ಬೇಧಭಾವ ಮಾಡದೇ ವಿತರಿಸಲಾಗುತ್ತಿದೆ. ದಾಂಡೇಲಿ ನಗರದ 1ನೇ ತರಗತಿಯಿಂದ ಪದವಿವರೆಗಿನ ಹಾಗೂ ವೃತ್ತಿ ಶಿಕ್ಷಣ ಮತ್ತು ತಾಂತ್ರಿಕ ತರಗತಿ ಕಾಲೆಜುಗಳ ಸುಮಾರು 13 ಸಾವಿರದಷ್ಟು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.
ನೋಟ್ಬುಕ್ಗಳ ಮೇಲೆ ದಾಂಡೇಲಿಯ ದಂಡಕಾರಣ್ಯ ಇಕೋ ಪಾರ್ಕಿನೊಳಗಿರುವ ವಿವಿಧ ಪ್ರಾಣಿ, ಪಕ್ಷಿ ಹಾಗೂ ಕಾರ್ಟೂನ್ ಸೇರಿದಂತೆ ಆಕರ್ಷಕ ಪೋಟೋಗಳನ್ನು ಮುದ್ರಿಸಿ ಪರಿಸರ ಕಾಳಜಿಯನ್ನೂ ತೋರಿಸಲಾಗಿದೆ. ಕಾಗದ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನ್ರವರ ಮಾರ್ಗದರ್ಶನದಲ್ಲಿ ಕಂಪನಿಯ ಹಿರಿಯ ಅಧಿಕಾರಿಗಳಾಗಿರುವ ಎಸ್.ಬಿ. ನಾಯಕ, ಸಾರ್ವಜನಿಕ ಸಂಪರ್ಕಾದಿಕಾರಿಗಳಾದ ಕೆ.ಜಿ. ಗಿರಿರಾಜ, ರಾಜೇಶ ತಿವಾರಿ ಯವರು ನೋಟ್ಬುಕ್ ವಿತರಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
.
Leave a Comment