ದಾಂಡೇಲಿ:
ದಾಂಡೇಲಿ ನಗರಸಭೆಯಲ್ಲಿ ಹೊರಗುತ್ತಿಗೆಯ ಮೇಲೆ ಬೀದಿ ಗುಡಿಸುವ ಮತ್ತು ಮನೆ ಮನೆ ಕಸ ಸಂಗ್ರಹಿಸುವ ಟೆಂಡರನಲ್ಲಿ ಅವ್ಯವಹಾರ ನಡೆದಿದ್ದು ಈ ಬಗ್ಗೆ ತನಿಖೆ ನಡೆಸಿ ಸಂಬಂದಪಟ್ಟವರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನಗರಸಭಾ ಸದಸ್ಯ ಡಿ. ಸ್ಯಾಮಸನ್ರವರು ಲೋಕಾಯುಕ್ತರಿಗೆ ಲಿಖಿತ ದೂರು ನೀಡಿದ್ದಾರೆ.
ಹೊರಗುತ್ತಿಗೆ ಆಧಾರದಸಲ್ಲಿ ಬೀದಿ ಗುಡಿಸುವ ಮತ್ತು ಮನೆ ಮನೆ ಕಸ ಸಂಗ್ರಹಿಸುವ ಕೆಲಸಕ್ಕೆ ಸಂಬಂದಿಸಿ ಇ ಪ್ರೊಕ್ಯರಮೆಂಟ್ ಮೂಲಕ ಅಂದಾಜು ವೆಚ್ಚ 88.78 ಲಕ್ಷ ರೂ.ಗಳದ್ದಾಗಿದೆ. ಈ ಅಂದಾಜು ಪತ್ರಿಕೆಗೆ ಪೌರಾಡಳಿತ ನಿರ್ದೇಶನಾಲಯದ ಅಧೀಕ್ಷಕ ಅಭಿಯಂತರಿಂದ 81.60 ಲಕ್ಷ ರು.ಗಳಿಗೆ ತಾಂತ್ರಿಕ ಅನುಮೋದನೆ ಪಡೆದುಕೊಂಡಿದ್ದಾರೆ. ಇವರ ಆದೇಶದ ಶರತ್ತು 1 ರ ಪ್ರಕಾರ ಜಿಲ್ಲಾಧಿಕಾರಿಗಳಿಂದ ಆಡಳಿತಾತ್ಮಕ ಅನುಮೋದನೆ ಪಡೆದುಕೊಳ್ಳಬೇಕಾಗಿರುತ್ತದೆ. ಆದರೆ ಇಲ್ಲಿ ಜಿಲ್ಲಧಿಕಾರಿಗಳ ಅನುಮೋದನೆ ಪಡೆದುಕೊಂಡಿರುವುದಿಲ್ಲ.
ಮಂಜೂರಾದ ಅಂದಾಜು ಪತ್ರಿಕೆಯಂತೆ ಟೆಂಡರ್ ಮಾಡಬೇಕಾಗಿತ್ತು. ಆದರೆ ಅಂದಾಜು ಮೊತ್ತ 88.78 ಲಕ್ಷ ರು.ಗಳಿಗೆ ಶೆಡ್ಯುಲ್ ಬಿ ಇಟ್ಟು ಟೆಂಡರ್ ಮಾಡಲಾಗಿದೆ. ಈ ಟೆಂಡರ್ಗೆ ಹುಬ್ಬಳ್ಳಿಯ ಶ್ರೀ ಕ್ಲೀನಿಂಗ್ ಸರ್ವಿಸನ ಶ್ರೀಧರ ಎಸ್. ಕಣ್ಮಕ್ಕಲ್ ಇವರು 7,361023.99 ದರ ಸಲ್ಲಿಸಿದ್ದರು. ಈ ದರಕ್ಕೆ ಅನುಮೋದನೆ ನೀಡದೇ ಅಂದಾಜು ಪತ್ರಿಕೆ ದರಕ್ಕೆ ಎಂದು ಜಿಲ್ಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ, ಇದಕ್ಕೆ 2016ರ ಡಿಸೆಂಬರ 26 ರಂದು ಅನುಮೋದನೆ ನೀಡಲಾಗಿದೆ.
ಈ ಗುತ್ತಿಗೆದಾರನಿಗೆ ಕೇವಲ 8 ಜನ ಕೂಲಿಗಳನ್ನು ನೇಮಿಸಿಕೋಳ್ಳಲು ಕಾರ್ಮಿಕ ಇಲಾಖೆಯಿಂದ 2018ರ ತನಕ ಲೈಸನ್ಸ್ ಇರುತ್ತದೆ. ಆದರೆ ಅಂದಾಜು ಪತ್ರಿಕೆಯಂತೆ 35 ಕೂಲಿಗಳ ಲೈಸನ್ಸ್ ಅವಶ್ಯಕತೆಯಿರುತ್ತದೆ. ಹೀಗಿರುವಾಗಲೂ ಟೆಂಡರ್ ನಿಯಮವನ್ನು ಸಂಪೂರ್ರ್ಣವಾಗಿ ಉಲ್ಲಂಘಿಸಿ ನಗರಸಭೆಯ ಬೊಕ್ಕಸಕ್ಕೆ ಆರ್ಥಿಕ ನಷ್ಠವನ್ನುಂಟು ಮಾಡಲಾಗಿದೆ.
ಅಂತೆಯೇ ಜಿಲ್ಲಾಧಿಕಾರಿಗಳ ಆಡಳಿತಾತ್ಮಕ ಅನುಮೋದನೆ ಪಡೆದುಕೊಳ್ಳದೇ, 56 ಲಕ್ಷ ರು.ಗಳಿಗೆ ಇಪ್ರೊಕ್ಯುಮೆಂಟ ಪ್ರಕಾರ ಟೆಂಡರ್ ಕರೆದು ಶೆಡ್ಯುಲ್ ಬಿ ಪ್ರಕಾರ 56 ಲಕ್ಷ ರು.ಗಳಿಗೆ ಮಾಡದೇ 88.78 ಲಕ್ಷ ರು.ಗಳ ಶೆಡ್ಯುಲ್ ಲಗತ್ತಿಸಿ ಟೆಂಡರರ ಕರೆದಿರುತ್ತಾರೆ. ಇದಕಕ್ಕೆ ಶ್ರೀ ಕ್ಲಿನಿಂಗ್ ಸರ್ವೀಸನವರು ಹಾಕಿದ್ದ 7,15,715 ಲಕ್ಷ ರು.ಗಳಿಗೆ ಅನುಮೋದನೆ ನೀಡಲಾಗಿದೆ. ಇಲ್ಲಿ ಗುತ್ತಿಗೆದಾರರ ಜೊತೆ ಮಾತುಕತೆ ನಡೆದಿರುವ ಸಂಶಯವಿದೆ. ಇಲ್ಲಿಯೂ ನಗರಸಭೆ ಬೊಕ್ಕಸಕ್ಕೆ ಹಾನಿಯಾಗುತ್ತದೆ.
ಈ ಎರಡೂ ಕಾಮಗಾರಿಗಳಲ್ಲಿ ಕ್ರಮವಾಗಿ 7,36,023 ಲಕ್ಷ ರೂ ಹಾಗೂ 7,15,715 ಲಕ್ಷ ರೂ ಗಳಿಗೆ ಅನುಮೋದನೆ ನೀಡದೇ 81.60 ಲಕ್ಷ ರೂ ಹಾಗೂ 56 ಲಕ್ಷ ರು.ಗಳ ಅಂದಾಜು ಪತ್ರಿಕೆ ರಕಂ ಗೆ ಅನುಮೋದನೆ ನೀಡಿದ್ದು ನಿಯಮ ಬಾಹಿರವಾಗಿರುತ್ತದೆ. ಇಪ್ರೊಕ್ಯರ್ಮೆಂಟ್ನಲ್ಲಿ ಸಲ್ಲಿಸಿದ್ದ ದರಕ್ಕೆ ಅನುಮೋದನೆ ನೀಡದೇ ಹೆಚ್ಚುವರಿ ದರಕ್ಕೆ ಅನುಮೋದನೆ ನೀಡಲಾಗಿರುವುದರಿಂದ ನಗರಸಭೆಗೆ ಆರ್ಥಿಕ ನರ್ಷವಾಗುತ್ತದೆ.
ಕಾಮಗಾರಿಯನ್ನೂ ಸಹ ಅಂದಾಜು ಪತ್ರಿಕೆಯ ಪ್ರಕಾರ ಕೂಲಿಯಾಳು, ಅವರ ಹಾಜರಾತಿ, ಬಯೋಮೆಟ್ರಿಕ್ ವ್ಯವಸ್ಥೆ ಬಳಸದೇ ಕೈಬರಹ ಕೊಟ್ಟು ಸೃಷ್ಠಿಸಿಕೊಂಡು 2017 ರಿಂದ ಇಲ್ಲಿಯವರತೆಗೂ ಲಕ್ಷಾಂತರ ರೂಗಳ ಬಿಲ್ ಸೃಷ್ಠಿಸಿ, ಮೆನ್ಯವಲ್ ಆದಾರದಲ್ಲಿಯೇ ಬಿಲ್ ಜಮಾ ಮಾಡಿದ್ದಾರೆ. ಇದರ ಜೊತೆಗೆ ಕಾರ್ಮಿಕರಿಗೆ ನೀಡಬೇಕಾಗಿದ್ದ ಪಿ.ಎಪ್., ಇ.ಎಸ್.ಐ., ಅಧಿಕೃತ ಕೂಲಿಯನ್ನು ಅವರ ಖಾತೆಗೆ ಜಮಾ ಮಾಡಿ, ಮರಳಿ ವಸೂಲಿ ಮಾಡಿರುತ್ತಾರೆ. ಈ ಬಗ್ಗೆ ಕೇಳಿದಾಗ ದಲಿತ ಕಾರ್ಮಿಕರನ್ನು ಅವಮಾನಿಸಿದ ಸಂದರ್ಭಗಳು ನಡೆದಿವೆ.
ಇದರ ಜೊತೆಗೆ ನಗರಸಭೆಯ ಹಲವು ಟೆಂಡರ್ ಮತ್ತು ವಾಹನ ಖರೀದಿ ಪ್ರಿಯೆಯಲ್ಲಿಯೂ ನಿಯಮ ಉಲ್ಲಂಘನೆ ಮತ್ತು ಗೋಲಮಾಲ ನಡೆದಿರುವುದು ಬೆಳಕಿಗೆ ಬಂದಿದೆ. ನಗರಸಭೆಯ ಸಾಮಾನ್ಯ ಸಭೆಯಲ್ಲಿ ಟೆಂಡರ್ ಪ್ರಕ್ರಿಯೆಗೆ ಪೂರಕವಾಗಿ ಕಾಗದ ಪತ್ರಗಳನ್ನು ನೀಡದೇ ಮೌಖಿಕವಾಗಿ ವಿವರಿಸಿ ಸಾಮಾನ್ಯ ಸಭೆಗೆ ತಪ್ಪು ಮಾಹಿತಿ ನೀಡಿ, ನಿಯಮ ಬಾಹಿರವಾಗಿ ಟೆಂಡರ್ಗೆ ಅನುಮೋದನೆ ಪಡೆದುಕೊಳ್ಳುವಲ್ಲಿ ಇಲ್ಲಿಯ ಕೆಲ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಈ ಎಲ್ಲದರ ಬಗ್ಗೆ ನಗರಸಭೆಯಲ್ಲಿ ಕಾಗದ ಪತ್ರಗಳಿದ್ದು, ಪ್ರಕರಣಗಳನ್ನು ತನಿಕೆ ನಡೆಸಿ ಕ್ರಮ ಕೈಗೊಳ್ಳುವಂತೆ ಡಿ. ಸ್ಯಾಮಸನ್ ಲೋಕಾಯುಕ್ತರಲ್ಲಿ ಮನವಿ ಮಾಡಿದ್ದಾರೆ.
Leave a Comment