ಕಾರವಾರ:
ಅತ್ಯಾಚಾರ ಹಾಗೂ ಕೊಲೆ ಪ್ರಕರಣವೊಂದರಲ್ಲಿ ಆರುವರೆ ವರ್ಷಗಳ ಕಾಲ ಕಾರಾಗೃಹವಾಸ ಅನುಭವಿಸಿದ್ದ ಭಟ್ಕಳದ ವೆಂಕಟೇಶ್ ಹರಿಕಂತ್ರ ಎಂಬಾತರನ್ನು ನ್ಯಾಯಾಲಯ ದೋಷಮುಕ್ತ ಎಂದು ಪರಿಗಣಿಸಿ ಬಿಡುಗಡೆ ಮಾಡಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ತನ್ನನ್ನು ದೋಷಮುಕ್ತಗೊಳಿಸಿ ಬಿಡುಗಡೆ ಮಾಡಿದೆ. ಆರುವರೆ ವರ್ಷಗಳಲ್ಲಿ ಸಾಕಷ್ಟು ಅವಮಾನಗಳನ್ನು ಸಹಿಸಿಕೊಂಡಿದ್ದು, ತನ್ನ ಕುಟುಂಬವೂ ಬೀದಿಗೆ ಬಂದಿದೆ ಎಂದು ಹೇಳಿದರು. ಭಟ್ಕಳದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಹಾಗೂ ಸಾವಿನ ಪ್ರಕರಣ ಹೆಚ್ಚಿದ್ದು, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಶ್ರೀರಾಮ ಸೇನೆ ಪದಾದಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು. ವೆಂಕಟೇಶ್ ಹರಿಕಂತ್ರ ಪರವಾಗಿ ರವಿಕಿರಣ ಮುರ್ಡೇಶ್ವರ ವಾದ ಮಂಡಿಸಿದ್ದು, ಹಿಂದೂ ಹಾಗೂ ಮುಸ್ಲಿಂ ನಡುವೆ ಸಂಭವಿಸಬಹುದಾದ ಕೋಮು ಗಲಬೆಯನ್ನು ತಪ್ಪಿಸಲು ಪೊಲೀಸರು ಅಮಾಯಕರೊಬ್ಬರನ್ನು ಶಿಕ್ಷಿಸಿದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು. ಅಮಾಯಕನಿಗೆ ಚಿತ್ರಹಿಂಸೆ ನೀಡಿದಲ್ಲದೇ ಆರುವರೆ ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಅನುಭವಿಸುವಂತೆ ಮಾಡಿದ್ದ ಪೊಲೀಸರ ವಿರುದ್ದ ಹೂಕೋರ್ಟನಲ್ಲಿ ದಾವೆ ಹೂಡುವದಾಗಿ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಜಯಂತ ನಾಯ್ಕ ಗುರುವಾರ ಸುದ್ದಿಗೊಷ್ಟಿಯಲ್ಲಿ ತಿಳಿಸಿದರು. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಕೂಡಲೇ ನೈಜ ಆರೋಪಿಗಳನ್ನು ಬಂಧಿಸಬೇಕು ಎಂದು ಅವರು ಆಗ್ರಹಿಸಿದರು. ಇಬ್ಬರು ಮುಸ್ಲಿಂ ಯುವಕರು ಯಮೂನಾ ನಾಯ್ಕ ಎಂಬಾತರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದು, ಈ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸರು ಯತ್ನಿಸಿದ್ದರು. ಈ ಪ್ರಕರಣದಲ್ಲಿನ ಸತ್ಯತೆ ಹೊರ ಬಂದರೆ ಕೋಮು ಗಲಬೆ ನಡೆಯುತ್ತದೆ ಎಂಬ ಕಾರಣದಿಂದ ಅಮಾಯಕನಾದ ನನ್ನನ್ನು ಆರೋಪಿಯನ್ನಾಗಿ ಮಾಡಲಾಯಿತು ಎಂದು ಘಟನೆಯ ಬಗ್ಗೆ ವೆಂಕಟೇಶ್ ಹರಿಕಂತ್ರ ವಿವರಿಸಿದರು,ಸಂದೀಪ ನಾಯ್ಕ, ಶ್ರೀಧರ ನಾಯ್ಕ, ಅಣ್ಣಪ್ಪ ನಾಯ್ಕ, ಪ್ರಶಾಂತ ನಾಯ್ಕ ಇದ್ದರು.
Leave a Comment