ದಾಂಡೇಲಿ :
ನಗರದಲ್ಲಿ ಸರಕಾರಿ ಆಸ್ಪತ್ರೆಯ ವ್ಯೆದ್ಯರು ಹಾಗು ಬೆಂಗಳೂರಿನ ಕೋಟ್ಪಾ ಕಾಯ್ದೆಯ ಅನುಷ್ಠಾನ ವ್ಯೆದ್ಯಾಧಿಕಾರಿ ಹಾಗೂ ಸ್ಥಳೀಯ ಆಸ್ಪತ್ರೆಯ ಸಿಬ್ಬಂದಿಗಳು, ಸಿಗರೇಟ್ ಹಾಗೂ ಇತರ ತಂಬಾಕು ಉತ್ಪನ್ನಗಳ ಜಾಹೀರಾತು ನಿಷೇಧ ಹಾಗೂ ವ್ಯಾಪಾರ, ವಾಣ ಜ್ಯ, ಉತ್ಪಾದನೆ ಪೂರೈಕೆ ಹಾಗೂ ಹಂಚಿಕೆಯ ಮಸೂದೆ-2003(ಕೋಟ್ಪಾ ಕಾಯ್ದೆ) ಅನಷ್ಟಾನ ಗೊಳಿಸುವಂತೆ ಅಂಗಡಿಕಾರರಲ್ಲಿ ಜಾಗೃತಿ ಮುಡಿಸಲು ಬೀಡಿ, ಸಿಗರೇಟ್, ಗುಟಕಾ ಮಾರಾಟ ಮಾಡುವ ಅಂಗಡಿಗಳಿಗೆ ಭೇಟಿಯಾಗಿ ವಿಶೇಷ ಕಾರ್ಯಾಚರಣೆ ನಡೆಸಿದರು.
ಕಾರ್ಯಚರಣೆಯ ವೇಳೆಯಲ್ಲಿ ಈ ಕಾಯ್ದೆಯ ಪ್ರಕಾರ 18 ವರ್ಷದ ಒಳಗಿನ ವಯಸ್ಸಿನ ಒಳಗಿನ ಮಕ್ಕಳಿಗೆ ತಂಬಾಕು ಹಾಗು ತಂಬಾಕು ಉತ್ಪನ್ನಗಳ ವಸ್ತುಗಳನ್ನು ಮಾರಾಟ ಮಾಡುವದನ್ನು ಶೈಕ್ಷಣ ಕ ಸಂಸ್ಥೆಗಳಿರುವ 100 ಮೀಟರ ಒಳಗೆ ತಂಬಾಕು ಹಾಗು ತಂಬಾಕು ಉತ್ಪನ್ನಗಳ ವಸ್ತುಗಳನ್ನು ಮಾರಾಟ ನೀಷೇಧಿಸಿರುವ ಬಗ್ಗೆ, ಸಿಗರೇಟು ಹಾಗು ತಂಬಾಕು ಉತ್ಪನ್ನಗಳ ಮಾರಟ ಮಾಡುವ ಪ್ರತಿ ಪೊಟ್ಟಣಗಳ ಮೇಲೆ ಆರೋಗ್ಯದ ಎಚ್ಚರಿಕೆ ಪ್ರಕಟಗೊಳಿಸುವದು ಕಡ್ಡಾಯಗೊಳಿಸಲಾಗಿದೆ ಇ ನಿಯಮ ಉಲ್ಲಂಘಿಸಿದವರಿಗೆ ಎರಡು ವರ್ಷ ಜೈಲು ಅಥವಾ 5000 ರೂಪಾಯಿ ದಂಡ ವಿಧಿಸಲಾಗುತ್ತದೆ ಎಂಬ ಎಚ್ಚರಿಕೆಯನ್ನು ಅಂಗಡಿಕಾರರಿಗೆ ನೀಡಲಾಯಿತು.
ಬೆಂಗಳೂರಿನ ಕೋಟ್ಪಾ ಕಾಯ್ದೆಯ ಅನುಷ್ಠಾನದ ವಿಶೇಷ ನೊಡೆಲ್ ಅಧಿಕಾರಿ ಚಂದ್ರಶೇಖರಹಳಿಯಾಳ ತಾಲುಕಿನ ವ್ಯೆದಾಧಿಕಾರಿ ಡಾ ಕದಂ, ಸ್ಥಳೀಯ ಸರ್ಕಾರಿ ವೈದ್ಯಾಧಿಕಾರಿ ಡಾ. ವಿಜಯಕುಮಾರ, ಹಿರಿಯ ಸಿಬ್ಬಂದಿಗಳಾದ ಪ್ರಕಾಶ ಮಾನೆ, ವಸಂತ ಕಾಳದಪ್ಪನವರ, ನಗರ ಪಿ.ಎಸ್.ಐ ಉಲ್ಲಾಸ ಪರಿವಾರ ಹಾಗೂ ಪೋಲಿಸ ಸಿಬ್ಬಂದಿಗಳು ಈ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.
Leave a Comment