ಹೊನ್ನಾವರ :
ಹಡಿನಬಾಳದ ರಾಗಶ್ರೀ ಸಂಗೀತ ಮತ್ತು ಸಾಂಸ್ಕøತಿಕ ಸಂಸ್ಥೆಯ ಶಿಷ್ಯವೃಂದ ಪರಿಷತ್ತಿನಿಂದ ಗುರುಪೂಣ ್ಮೆಯನ್ನು ಶ್ರೀ ವೆಂಕಟರಮಣ ಸಭಾಭವನದಲ್ಲಿ ಇದೇ 9ನೇ ದಿನಾಂಕ ರವಿವಾರ ಅಪರಾಹ್ನ 4.30 ಕ್ಕೆ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಎಸ್. ಶಂಭು ಭಟ್ಟ, ಕಡತೋಕಾ ಇವರು ವಹಿಸಲಿದ್ದು ಮುಖ್ಯ ಉಪನ್ಯಾಸಕರಾಗಿ ವಿದ್ವಾನ್ ಮಂಜುನಾಥ ಎನ್. ಭಟ್ಟ, ಮಹಾರಾಜ ಸಂಸ್ಕøತ ಕಾಲೇಜು ಮೈಸೂರು ಇವರು ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವೆಂಕಟರಮಣ ದೇವಾಲಯದ ಅಧ್ಯಕ್ಷರಾದ ಜಿ. ಜಿ. ಶೆಟ್ಟಿ, ಹಡಿನಬಾಳ ಹಾಗೂ ಪಂ. ಅಶೋಕ ಹುಗ್ಗಣ್ಣವರ, ಎಸ್.ಡಿ.ಎಂ. ಕಾಲೇಜ ಸಂಗೀತ ಗುರುಗಳು, ಪಂ. ಎನ್. ಎಸ್. ಹೆಗಡೆ, ಹಿರೇಮಕ್ಕಿ, ತಬಲಾ ಗುರುಗಳು ವೇದಿಕೆಯಲ್ಲಿ ಉಪಸ್ಥಿತರಿರುವರು. ನಂತರ ಇವರುಗಳಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು, ರಾಗಶ್ರೀ ಸಂಗೀತ ಗುರುಗಳಾದ ಪ್ರಾಚಾರ್ಯ ವಿದ್ವಾನ್ ಶಿವಾನಂದ ಭಟ್ಟ, ವಿದ್ವಾನ್ ಎನ್. ಜಿ. ಹೆಗಡೆ, ಕಪ್ಪೆಕೇರಿ ಇದಕ್ಕೆ ಹೆಚ್ಚಿನ ಸಂಗೀತಾಭಿಮಾನಿಗಳು ಬರುವಂತೆ ರಾಗಶ್ರೀ ಶಿಷ್ಯ ಪರಿಷತ್ತಿನ ವಿನಾಯಕ ಭಟ್ಟ, ಹರಡಸೆ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment