ದಾಂಡೇಲಿ :
ಪ್ರತಿಯೊಬ್ಬನ ಜೀವನದ ಉನ್ನತಿಗೆ ಮತ್ತು ಸುಸಂಸ್ಕøತ ಸಮಾಜ ನಿರ್ಮಾಣಕ್ಕೆ ಗುರುವಿನ ಮಾರ್ಗದರ್ಶನ ಅತ್ಯವಶ್ಯ. ಯಾರು ಗುರುವನ್ನು ಶೃದ್ದಾ ಮನೋಭಾವನೆಯಿಂದ ಗೌರವಿಸುರೋ ಅವರು ತ್ತಾಜೀವನದಲ್ಲಿ ಸಫಲತೆಯನ್ನು ಸಾಧಿಸಲು ಸಾಧ್ಯ ಎಂದು ದಾಂಡೇಲಿ ಪತಾಂಜಲಿ ಯೋಗ ಸಮಿತಿಯ ಪ್ರಭಾರಿ ದೇವಿದಾಸ ಥಾಮ್ಸೆ ಹೇಳಿದರು.
ಅವರು ಪತಾಂಜಲಿ ಯೋಗ ಸಮಿತಿಯ ಆಶ್ರಯದಲ್ಲಿ ನಗರದ ಹಿಂದಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಗುರುಪೂರ್ಣಿಮಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಶಿಷ್ಯನಿಗೆ ತನ್ನನ್ನು ತಾನು ಅರ್ಥೈಸಿಕೊಳ್ಳಲು ಗುರುವಿನ ಮಾರ್ಗದರ್ಶನ ಅಗತ್ಯ. ಸನಾತನ ಪರಾಂಪರೆಯಿಂದಲೆ ನಮ್ಮ ದೇಶದಲ್ಲಿ ಗುರುವಿಗೆ ಪ್ರಮುಖ ಸ್ಥಾನ ಮತ್ತು ಗೌರವವನ್ನು ನೀಡುತ್ತಾ ಬರಲಾಗಿದೆ. ಕಲಿಸಿದ ಗುರು, ಹೆತ್ತು ಹೊತ್ತು ಸಾಕಿ ಸಲಹಿದ ತಂದೆ, ತಾಯಿಗಳೆ ನಮ್ಮ ಬದುಕಿಗೆ ಪ್ರೇರಕಶಕ್ತಿ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಹಿರಿಯ ಯೋಗ ಶಿಕ್ಷಕಿ ರೇವತಿ ಪರಾಂಜಪೆ ಗುರುವಿನ ಮಾರ್ಗದರ್ಶನವಿಲ್ಲದೆ ಯಾವುದೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಗುರುಪೂರ್ಣಿಮೆಯ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರಾದ ಎನ್.ಬಿ.ಪತ್ತಾರ, ಮಲ್ಲಿಕಾರ್ಜುನ, ವರ್ಷಾ, ಸುರೇಶ ಬಾಂದೇಕರ, ವಿಶ್ವನಾಥ ಕಲ್ಗುಟ್ಕರ, ಅಪ್ಪಣ್ಣಾ, ಬಿಂದು ದುಬೆ, ಕವಿತಾ ಪೂಜಾರ ಮೊದಲಾದವರು ಉಪಸ್ಥಿತರಿದ್ದರು.
Leave a Comment