ಕಾರವಾರ:
ನಂದನಗದ್ದಾ ಮೀನು ಮಾರುಕಟ್ಟೆಯ ಅವ್ಯವಸ್ಥೆಯ ಕುರಿತು ಬಂದ ದೂರಿನನ್ವಯ ಶಾಸಕ ಸತೀಶ ಸೈಲ್ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದರು.ಮೀನು ಮಾರುಕಟ್ಟೆ ನವೀಕರಿಸಿ ಹೆಚ್ಚಿನ ಸೌಲಭ್ಯ ಒದಗಿಸಬೇಕೆಂದು ಮೀನು ಮಾರಾಟ ಮಹಿಳೆಯರು ಶಾಸಕರನ್ನು ಒತ್ತಾಯಿಸಿದರು.ಮೀನು ಮಾರುಕಟ್ಟೆಯನ್ನು ಎಲ್ಲಾ ಸೌಕರ್ಯಗಳೊಂದಿಗೆ ಅಭಿವೃದ್ಧಿ ಪಡಿಸುವ ರೂಪರೇಷೆಗಳನ್ನು ಸದ್ಯದಲ್ಲಿಯೇ ಸಿದ್ದಪಡಿಸಲಾಗುವದು ಎಂದು ಶಾಸಕ ಸತೀಶ ಸೈಲ್ ಮೀನುಗಾರ ಮಹಿಳೆಯನ್ನು ಸಂತೈಸಿದರು. ಶಾಸಕರೊಂದಿಗೆ ಕೆಡಿಎ ಅಧ್ಯಕ್ಷ ಸಂದೀಪ ತಳೇಕರ, ಜಿಲ್ಲಾ ಪಂಚಾಯತ ಸದಸ್ಯ ಕೃಷ್ಣಾ ಮೇಥಾ, ಕೆಡಿಎ ಮಾಜಿ ಅಧ್ಯಕ್ಷ ಅಶೋಕ ನಾಯ್ಕ, ಕೆ ಶಂಭು ಶೆಟ್ಟಿ, ತಾಲೂಕಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಸ್ವಾತಿ ಸೂರಜ ದೇಸಾಯಿ, ಕಾಂಗ್ರೇಸ್ ಮುಖಂಡರಾದ ಉದಯ ಬಾಂದೇಕರ, ಸೂರಜ ದೇಸಾಯಿ, ಮೀನುಗಾರರ ಮುಖಂಡರಾದ ಗಜಾನನ ತಾರೇಕರ ಮುಂತಾದವರಿದ್ದರು.ಮೀನುಗಾರರ ಮಹಿಳೆಯರ ಪರವಾಗಿ ಸುಮಿತ್ರಾ ಪೋಸೆ, ಪೊರಿ ಮಾಳ್ಸೇಕರ,ವಿದ್ಯಾ ಮೊರ್ಜೆ ,ಅಚಿಜನಿ ಮೇಥಾ, ಮನಿಷಾ ಪಡಾಲಕರ, ಮನವಿ ಸಲ್ಲಿಸಿದರು.
Leave a Comment