ಹೊನ್ನಾವರ:
ಶ್ರಂಗೇರಿ ಜಗದ್ಗರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಗಳವರ ಹಾಗೂ ತತ್ಕಮಲ ಸಂಜಾತ ಜಗದ್ಗರು ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರ ಭಾರತೀಮಹಾಸ್ವಾಮಿಗಳವರ ಮಾರ್ಗದರ್ಶನದಂತೆ ಕೊಂಕಣಿಖಾರ್ವಿಸಮಾಜದ ಗುರುದರ್ಶನ ಸಮತಿಯ ಆಶ್ರಯದಲ್ಲಿ ಕೊಂಕಣಖಾರ್ವಿಸಮಾಜದ ಸಾಮೂಹಿಕ ಗುರುದರ್ಶನ ಕಾರ್ಯಕ್ರಮವು ಜುಲೈ 16ರಂದು ಶ್ರಂಗೇರಿಗುರುಭವನದಲ್ಲಿ ನಡೆಯಲಿದೆ.
ಕೊಂಕಣ ಖಾರ್ವಿ ಸಮಾಜವು ಅನಾದಿ ಕಾಲದಿಂದಲೂ ಶೃಂಗೇರಿ ಗುರು ಪೀಠವನ್ನು ನೆನೆಯುತ್ತಾ ಬಂದಿದ್ದು, ಕಳೆದ 17 ವರ್ಷಗಳಿಂದ ಗುರುದರ್ಶನ ಸಮಿತಿಯ ಆಶ್ರಯದಲ್ಲಿ ಜಗದ್ಗುರುಗಳ ಪವಿತ್ರಚಾರ್ತುರ್ಮಾಸ್ಯದ ಸಂಧರ್ಭದಲ್ಲಿ ಸಾಮೂಹಿಕ ಗುರುದರ್ಶನ ಮಾಡುತ್ತಾ ಬಂದಿದ್ದಾರೆ. ಜಗದ್ಗುರುಗಳ ಅನುಗ್ರಹ, ಮಾರ್ಗದರ್ಶನ, ಪಾದಸ್ಪರ್ಶದಿಂದ ಇಂದಿನ ದಿನಗಳಲ್ಲಿ ನಮ್ಮ ಸಮಾಜವು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಮದುತ್ತಿರುವುದನ್ನು ಕಾಣಬಹುದಾಗಿದ್ದು, ಅನೇಕ ದೇವಸ್ಥಾನಗಳು ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾಪನೆಗೊಂಡಿವೆ.
ಆದ್ದರಿಂದ ಜಗದ್ಗುರುಗಳ ಆದೇಶದಂತೆ ಧರ್ಮಾಧಿಕಾರಿ ಡಾ. ಎಚ್.ವಿ. ನರಸಿಂಹ ಮೂರ್ತಿಯವರ ಮಾರ್ಗದರ್ಶನದಲ್ಲಿ ಜುಲೈ 16 ರವಿವಾರರಂದು ಬೆಳಿಗ್ಗೆ 10 ಗಂಟೆಗೆ ಶೃಂಗೇರಿ ಗುರು ಪೀಠದಲ್ಲಿ ಕೊಂಕಣಿ ಖಾರ್ವಿಸಮಾಜದವರಿಂದ ಜಗದ್ಗುರುಗಳ ಪವಿತ್ರ ಚಾತುರ್ಮಾಸ್ಯದ ಗುರುದರ್ಶನ ಕಾರ್ಯಕ್ರಮ ನಡೆಯಲಿದೆ. ಶ್ರಂಗೇರಿ ಜಗದ್ಗರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಗಳವರ ಹಾಗೂ ತತ್ಕಮಲ ಸಂಜಾತ ಜಗದ್ಗರು ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರ ಭಾರತೀಮಹಾಸ್ವಾಮಿಗಳವರು ಅಂದು ಸಮಾಜಭಾಂದವರಿಗಾಗಿ ಅನುಗ್ರಹ ಭಾಷಣಮಾಡಲಿದ್ದಾರೆ.
ಕೊಂಕಣಿಖಾರ್ವಿಸಮಾಜದ ಗುರುದರ್ಶನ ಸಮಿತಿ ಆಶ್ರಯದಲ್ಲಿ ಈ ವರ್ಷ ಯಶಸ್ವಿ 18ನೇ ವರ್ಷದ ಕಾರ್ಯಕ್ರಮ ನಡೆಯಲಿದ್ದು, ಮುಂಬೈ, ಗೋವಾ, ಬೆಂಗಳೂರು, ಶಿವಮೊಗ್ಗ, ಉತ್ತರಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಳ್ಳಲಿದ್ದಾರೆ.
ಸಮಾರಂಭಕ್ಕೆ ಎಲ್ಲಾ ಸಮಾಜ ಬಾಂಧವರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ಶ್ರೀಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕೊಂಕಣ ಖಾರ್ವಿ ಸಮಾಜ ಗುರುದರ್ಶನ ಸಮಿತಿ ಅಧ್ಯಕ್ಷ ವಸಂತ ಖಾರ್ವಿ ಭಟ್ಕಳ, ಹಾಗೂ ಉಪಾಧ್ಯಕ್ಷ ಉಮೇಶ ಜಿ. ಮೇಸ್ತ,ಪ್ರಧಾಣ ಕಾರ್ಯದರ್ಶೀ ವೆಂಕಟೇಶ ಮೇಸ್ತ ಹೊನ್ನಾವರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment