ಹೊನ್ನಾವರ:
ರೊಟರಿ ಕ್ಲಬ್ ಹೊನ್ನಾವರ ಇದರ 2017-2018 ನೇ ಸಾಲಿನ ರೋಟರಿ ಪರಿವಾರದ ಪಧಗ್ರಹಣ ಕಾರ್ಯಕ್ರಮ ಕರ್ನ್ಲ್ ಹಿಲ್ನ ನೂತನ ರೋಟರಿ ಪಾರ್ಕ ಹೌಸ್ನಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಡಾ||ಅನಂತಮೂರ್ತಿ ಎಸ್ ಶಾಸ್ತ್ರೀ, ಕಾರ್ಯದರ್ಶಿಯಾಗಿ ಮುನವೆಲ್ ಸ್ಟೆಪನ್ ರೊಡ್ರಿಗಸ್ ಮತ್ತು ಖಜಾಂಚಿಯಾಗಿ ವಸಂತ ಕರ್ಕಿಕರ ಅಧಿಕಾರ ವಹಿಸಿಕೊಂಡರು.
ರೋಟರಿ ಪಾರ್ಕ ಹೌಸ್ನಲ್ಲಿ ನಡೆದ ಸಮಾರಂಬದಲ್ಲಿ ರೊಟರಿಯನ್ ಎಸ್ ಎಮ್ ಭಟ್ ರವರು ನೂತನ ಪದಾಧಿಕಾರಿಗಳಿಗೆ ರೊಟರಿ ಪಿನ್ ತೊಡಿಸುವ ಮೂಲಕ ಪದಗ್ರಹಣ ಮಾಡಿದರು.
ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಡಾ||ಅನಂತಮೂರ್ತಿ ಎಸ್ ಶಾಸ್ತ್ರೀ ಮಾತನಾಡಿ ನಮ್ಮ ಸಂಘದಲ್ಲಿ ಅನೇಕ ಸಾಧಕರಿದ್ದಾರೆ. ಸಾಧಕರು ನನ್ನೊಂದಿಗಿರುವಾಗ ಭಯವಿಲ್ಲ. ಅವರ ಸಹಕಾರದೊಂದಿಗೆ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೊತ್ತುನೆ. ಪ್ರಸ್ತುತ ವರ್ಷ ಶಿಕ್ಷಣ, ಆರೋಗ್ಯ ಮತ್ತು ಪರಿಸರ ಖಾಳಜಿ ಇವುಗಳಿಗೆ ಹೆಚ್ಚಿನ ಒತ್ತು ನೀಡಲಿದ್ದೇವೆ. ರೋಟರಿ ಪ್ರತಿ ವಷ್ ಎರ್ಪಡಿಸುವ ಕಾರ್ಯಕ್ರಮಗಳಲ್ಲದೆ .ಈ ವರ್ಷವು ರಾಜ್ಯ ಮಟ್ಟದ ಚದುರಂಗ ಸ್ಪರ್ದೇ ನಡೆಸಲಿದ್ದೆವೆ ಎಂದು ಕಾರ್ಯಕ್ರಮಗಳ ವಿವರ ನೀಡಿದರು.
ಅಧ್ಯಕ್ಷತೆಯನ್ನು ವಹಿಸಿದ ಅಸಿಷ್ಟೆಂಟ್ ರೊಟರಿ ಪಬ್ಲಿಕ್ ಇಮೆಜ್ ಕೊ-ಆರ್ಡಿನೇಟ್ ಆದ ಪಿಡಿಜಿ ರೊಟರಿಯನ್ ಗಣೇಶ ಭಟ್ ವಹಿಸಿ ಅತಿ ಬೆರಳಣಿಕೆಯಲ್ಲಿ ಸ್ವಂತ ಕಟ್ಟಡವನ್ನು ಹೊಂದಿರುವ ನಮ್ಮ ರೊಟರಿ ಸಂಘದಲ್ಲಿ ಹೊನ್ನಾವರು ಒಂದಾಗಿದ್ದು ನನಗೆ ತುಂಬಾ ಹರ್ಷವೆನಿಸುತ್ತಿದೆ. ಇ ಸಾಧನೆ ತೋರಿದ ಹಿಂದನ ಅಧ್ಯಕ್ಷರಾದ ವಿ ಜಿ ನಾಯ್ಕ ಹಾಗೂ ಕಾರ್ಯದರ್ಶಿ ಸೂರ್ಯಕಾಂತ ಸಾರಂಗ ಅವರಿಗೆ ಅಭಿನಂದಿಸಿದರು. ಇದೇ ಸಂದರ್ಬದಲ್ಲಿ ವಿಜಿನಾಯ್ಕ ಹಾಗೂ ಸೂರ್ಯಕಾಂತ ದಂಪತಿಗಳನ್ನು ಸನ್ಮಾನಿಸಲಾಯಿತು,
ಸಮಾರಂಭದಲ್ಲಿ ಎಸ್ ಎಲ್ ಸಿ ಯಲ್ಲಿ ತಾಲೂಕಿನಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಧನ ಸಹಾಯದ ಚೆಕ್ ವಿತರಿಸಲಾಯಿತು
ರೋಟರಿ ದತ್ತು ಪಡೆದ ಸಿಂಧೂ ಮೇಸ್ತ ಎಂಬನ ಪುಟ್ಟ ಬಾಲಕಿಗೆ ವಿದ್ಯಾಬ್ಯಾಸಕ್ಕೆ ಪಟ್ಯಪುಸ್ತಕಗಳನ್ನು ನೀಡಲಾಯಿತು.
ಕುಮಟಾ ರೋಟರಿ ಬಂದುಗಳು ಹೊನ್ನಾವರ ಲಯನ್ಸ ಬಂದುಗಳು ಶುಭ ಕೋರಿದರು.
ವಿ ಜಿ ನಾಯ್ಕ ಪ್ರಸ್ತಾವಿಕ ಮಾತುಗಳನ್ನಾಡಿ ಎಲ್ಲರನ್ನು ಸ್ವಾಗತಿಸಿದರು, ಸೂರ್ಯಕಾಂತ ಸಾರಂಗ ವರದಿ ವಾಚಿಸಿದರು. ನೂತನ ಕಾರ್ಯದರ್ಶಿ ಸ್ಟೇಫನ್ ರೋಡ್ರಿಗೀಸ್ ವಂದಿಸಿದರು. ದಿನೇಶ ಕಾಮತ್ ಮತ್ತು ಸತೀಶ ಭಟ್ ಕಾರ್ಯಕ್ರಮನೀರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ಭರತನಾಟ್ಯ ಕಾರ್ಯಕ್ರಮ ನಡೆಯಿತು.
Leave a Comment