ಹೊನ್ನಾವರ ತಾಲೂಕು ಮಡಿವಾಳ ಸಮಾಜದವತಿಯಿಂದ ಮತೀಯ ಕಾರಣಕ್ಕಾಗಿ ಮತಾಂದ ದೇಶದ್ರೋಹಿಗಳು ವಿನಾಕಾರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಶರತ್ ಮಡಿವಾಳ ಇವರ ಹತ್ಯೆಯನ್ನು ಖಂಡಿಸಿ ಹೊನ್ನಾವರ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಮಂಗಳೂರು ಜಿಲ್ಲಾ ಬಂಟ್ವಾಳ ತಾಲೂಕಿನ ಕಾರ್ಯಕರ್ತ ಮತ್ತು ಸಮಾಜದ ಸದಸ್ಯ ಶರತ್ ಮಡಿವಾಳನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೆಲವು ದಿನ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿ ಮೃತಪಟ್ಟಿರುತ್ತಾನೆ. ಈ ನೋವು ಇಡೀ ರಾಜ್ಯಕ್ಕೆ ಮತ್ತು ಸಮಾಜಕ್ಕೆ ಸುತಕದ ವಾತಾವರಣವನ್ನು ಮೂಡಿಸಿದೆ. ಸಮಾಜದ ಓರ್ವ ಸದಸ್ಯನನ್ನು ಕಳೆದುಕೊಂಡ ನಾವು ಇವರ ಮೇಲೆ ಹಲ್ಲೆ ನಡೆಸಿರುವ ದುಷ್ಕರ್ಮಿಗಳನ್ನು ಕೂಡಲೇ ಬಂದಿಸಬೇಕೆಂದು ಮತ್ತು ಕಠೀಣ ಶಿಕ್ಷೆಯನ್ನು ವಿಧಿಸಬೇಕಾಗಿ ಮನವಿಸಲ್ಲಿಸುತ್ತಾ ತನಿಖೆ ದಾರಿ ತಪ್ಪಿದ್ದಲ್ಲಿ ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದರು, ಈ ಸಮಯದಲ್ಲಿ ಸಮಾಜದ ಮುಖಂಡರಾದ ನಾಗೇಶ ಮಡಿವಾಳ, ಅನಿಲ ಮಡಿವಾಳ, ವಿನಾಯಕ ಮಡಿವಾಳ, ಉಲ್ಲಾಸ ಮಡಿವಾಳ ಇತರರು ಉಪಸ್ಥಿತರಿದ್ದರು.
Leave a Comment