ಕಾರವಾರ:
ನಗರದಲ್ಲಿ ಎಲ್ಲಡೆ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿದೆ.ಹಬ್ಬುವಾಡ ರಸ್ತೆಗೆ ಹೊಂದಿಕೊಂಡಂತೆ ಇರುವ ಹೈ ಚರ್ಚಗೆ ತೆರಳುವ ರಸ್ತೆ ಸಂಪೂರ್ಣವಾಗಿ ಹೊಂಡಮಯವಾಗಿದೆ.ಎಲ್ಲೆಂದರಲ್ಲಿ ಮಳೆ ನೀರು ನಿಲ್ಲುವದರಿಂದ ಈ ರಸ್ತೆಯಲ್ಲಿನ ಸಂಚಾರ ಕಷ್ಟಕರವಾಗಿದೆ. ಈ ರಸ್ತೆ ಅಭಿವೃದ್ದಿ ಮಾಡುವಂತೆ ಸ್ಥಳೀಯರು ನಗರಸಭೆಗೆ ಬೇಡಿಕೆ ಸಲ್ಲಿಸಿದರೂ ಯಾವದೇ ಪ್ರಯೋಜನವಾಗಿಲ್ಲ.ತ್ರಿಶಂಕು ಸ್ಥಿತಿಯಲ್ಲಿರುವ ಈ ರಸ್ತೆ ಅಭಿವೃದ್ದಿಗೆ ಅಧಿಕಾರಿಗಳು ಮನಸ್ಸು ಮಾಡಿಲ್ಲ. ಜನಪ್ರತಿನಿಧಿಗಳಿಗೂ ಆಸಕ್ತಿಯಿಲ್ಲ. ಕಾರಣ ಮೂವರು ನಗರಸಭೆ ಸದಸ್ಯರಿಗೆ ಈ ಭಾಗ ಹಂಚಿ ಹೋಗಿದ್ದು, ಯಾರೊಬ್ಬರೂ ರಸ್ತೆ ದುರಸ್ಥಿಗೆ ಆಸಕ್ತಿ ತೋರುತ್ತಿಲ್ಲ. ಹೈ ಚರ್ಚ ರಸ್ತೆಯ ಆರಂಭದಲ್ಲಿ ನಗರಸಭೆ ಸದಸ್ಯರ ವಾರ್ಡ ಇದ್ದರೆ ಅಂತ್ಯದಲ್ಲಿ ಇನ್ನೊಬ್ಬ ಸದಸ್ಯರ ವಾರ್ಡ ಇದೆ. ನಡುವೆ ಮತ್ತೊಮ್ಮ ಸದಸ್ಯರ ವಾರ್ಡ ಬರುತ್ತದೆ. ಹೀಗಾಗಿ ಈ ರಸ್ತೆ ಅಭಿವೃದ್ದಿಗೆ ಯಾವ ಜನಪ್ರತಿನಿಧಿಗಳಿಗೂ ಆಸಕ್ತಿ ಇಲ್ಲ. ಈಡಿ ರಸ್ತೆ ಒಬ್ಬ ಸದಸ್ಯರ ವಾರ್ಡಗೆ ಸಂಬಂಧಿಸಿದ್ದಾಗಿದ್ದರೆ ಅವರನ್ನು ಒತ್ತಾಯಿಸಿ ಮರುಡಾಂಬರಿಕರಣ ಮಾಡಬಹುದಾಗಿತ್ತು. ಆದರೆ, ಮೂವರು ಸದಸ್ಯರನ್ನು ಒಗ್ಗೂಡಿಸಿ ಅವರಿಗೆ ರಸ್ತೆ ಅವ್ಯವಸ್ಥೆಯ ಬಗ್ಗೆ ಮನವರಿಕೆ ಮಾಡಲು ಸ್ಥಳೀಯ ಸಾರ್ವಜನಿಕರಿಂದಲೂ ಸಾದ್ಯವಾಗಿಲ್ಲ. ನಿತ್ಯ ಇದೇ ರಸ್ತೆಯಲ್ಲಿ ಓಡಾಡುವ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿಲ್ಲ. ಮಳೆಗಾಲ ಪೂರ್ವದಲ್ಲಿ ಗುಂಡಿ ಮುಚ್ಚುವ ಕೆಲಸ ಸರಿಯಾಗಿ ನಡೆಯದ ಕಾರಣ ಜನ ತೊಂದರೆ ಅನುಭವಿಸುವಂತಾಗಿದೆ. ಹೃದಯಭಾಗವಾದ ಹೈ ಚರ್ಚ ರಸ್ತೆ ವಾರ್ಡಗೆ ಸರಿಯಾದ ಜನಪ್ರತಿನಿಧಿ ಇಲ್ಲದ ಕಾರಣ ಈ ರಸ್ತೆ ಅಭಿವೃದ್ದಿಗೊಂಡಿಲ್ಲ. ಇಲ್ಲಿ ಸಂಚರಿಸುವ ಪ್ರಯಾಣಿಕರು ಭಯದಿಂದಲೇ ತೆರಳಬೇಕಾದ ಪರಿಸ್ಥಿತಿ ಬಂದಿದೆ.
Leave a Comment