ಹೊನ್ನಾವರ:
ತಾಲೂಕಿನ ಮಾವಿನಕುರ್ವಾದಲ್ಲಿ ಶುಕ್ರವಾರ ರಾತ್ರಿ ಒಸಿ ಮಟ್ಕಾ ದಂಧೆ ನಡೆಸುತ್ತಿದ್ದ ವೇಳೆ ದಾಳಿ ನಡೆಸಿದ ಹೊನ್ನಾವರ ಪೋಲಿಸರು ಜನಾರ್ಧನ ನಾರಾಯಣ ಗೌಡನನ್ನು ಬಂಧಿಸಿದ್ದಾರೆ.
ಮಾವಿನಕುರ್ವಾದ ಜನಾರ್ಧನ ನಾರಾಯಣ ಗೌಡ ಹಾಗೂ ಸಹೋದರ ಗಣಪತಿ ನಾರಾಯಣ ಗೌಡ ಇವರ ಮನೆಯಲ್ಲಿ ಮಟಕಾ ದಂಧೆ ನಡೆಯುತ್ತಿತ್ತು. ಬಂಧಿತನಿಂದರಿಂದ ನಗದು 3100ರೂ. ನಗದು ಮತ್ತು ಓ.ಸಿ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ಸಂಧರ್ಭದಲ್ಲಿ ಮಾವಿನಕುರ್ವಾ ಗ್ರಾಮಪಂಚಾಯತ್ ಸದಸ್ಯ ಗಣಪತಿ ನಾರಾಯಣ ಗೌಡ ಪರಾರಿಯಾಗಿದ್ದಾನೆ ಈ ಕಾರ್ಯಾಚರಣೆ ಮಧ್ಯರಾತ್ರಿ ನಡೆದಿದೆ. ಇಬ್ಬರು ಆರೋಪಿಗಳು ಹಾಲಿ ಜಿಲ್ಲಾಪಂಚಾಯತಿ ಸದಸ್ಯೆ ಸವಿತಾ ಕೃಷ್ಣ ಗೌಡ ಇವರ ಸಹೋದರರು. ಈ ಬಗ್ಗೆ ಹೊನ್ನಾವರ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊನ್ನಾವರ ಪಿ.ಎಸ್.ಆಯ್. ಆನಂದಮೂರ್ತಿ, ಸಿಬ್ಬಂದಿಗಳಾದ ಗಿರೀಶ ನಾಯ್ಕ, ಶಿವಾನಂದ ಚಿತ್ರಗಿ, ಕೆ.ಟಿ. ಗೌಡ ಮತ್ತು ಬೀಟ್ ಹವಲ್ದಾರ್, ಬಾಬು ಪಟಗಾರ್ ತಂಡ ದಾಳಿ ನಡೆಸಿತ್ತು.
Leave a Comment