18 ವರ್ಷತುಂಬಿದವರುಕಡ್ಡಾಯವಾಗಿಚುನಾವಣಾಗುರುತಿನಚೀಟಿ ನೋಂದಣಿ ಕೈಗೊಳ್ಳುವ ನಿಟ್ಟನಲ್ಲಿಬಿಜೆಪಿ ವತಿಯಿಂದ ಬೂತ್ ಮಟ್ಟದಕಾರ್ಯಾಗಾರ ಹಾಗೂ ವಿಚಾರ ಸಂಕಿರಣಕಾರ್ಯಕ್ರಮವನ್ನುಕುಮಟಾದ ಬಿಜೆಪಿ ಕಛೇರಿಯಲ್ಲಿಹಮ್ಮಿಕೊಳ್ಳಲಾಗಿತ್ತು.
ಬಿ.ಎಲ್.ಎ. 1 ಶ್ರೀಯುತ ಎಸ್.ಜಿ.ಗುನಗಾಅವರು ಸಭೆಯನ್ನುದ್ದೇಶಿಸಿ ಮಾತನಾಡುತ್ತ ಬೂತ್ ಮಟ್ಟದಲ್ಲಿ ಬಿ.ಎಲ್.ಎ. 2ಗಳು ಕಾರ್ಯನಿರತವಾಗಿ 18ವರ್ಷ ಪೂರ್ಣಗೊಂಡವರು ಹೊಸ ನೋಂದಣಿ, ಬೇರೆ ಬೂತ್ಗಳಿಂದ ನಮ್ಮ ಬೂತ್ಗಳಿಗೆ ಬರುವವರ ವಿಳಾಸ ಬದಲಾವಣೆ, ಸಾವನ್ನಪ್ಪಿರುವಜನರ ಹೆಸರನ್ನು ಮತದಾರರ ಪಟ್ಟಯಿಂದತೆಗೆದುಹಾಕುವ ಕೆಲಸವನ್ನುಅತ್ಯಂತ ಮುತುವರ್ಜಿಯಿಂದ ಮಾಡುವಂತೆಕರೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ನಾಗರಾಜ ನಾಯಕತೊರ್ಕೆಅವರು ಮಾತನಾಡಿ ಮತದಾನ ಪ್ರತಿಯೊಬ್ಬರ ಹಕ್ಕಾಗಿದೆ. ಹಾಗಾಗಿ ಎಲ್ಲರೂಖಡ್ಡಾಯವಗಿ ಮತದಾನ ಮಾಡಬೇಕುಮತ್ತು 18ವರ್ಷತುಂಬಿದವರುಚುಣಾವಣಾಗುರುತಿನಚೀಟಿ ಪಡೆಯಲುಅರ್ಹರಾಗಿದ್ದುಅಂಥವರುಗುರುತಿನಚೀಟಿ ಪಡೆಯಲುತಮ್ಮ ಹೆಸರು ನೊಂದಾಯಿಸಿಕೊಳ್ಳಬೇಕು. ಸೂಕ್ತ ಅಭ್ಯರ್ಥಿಗಳು ಕೇವಲ ಅಲ್ಪ ಮತಗಳ ಅಂತರದಿಂದ ಸೋತ ಉದಾಹರಣೆಗಳಿವೆ. ಹಾಗಾಗಿ ಅಭ್ಯರ್ಥಿಗಳಿಗೆ ಒಂದೇಒಂದು ಮತಕೂಡ ಅತ್ಯಮೂಲ್ಯವಾಗಿದೆ. ಈ ಬಾರಿಕುಮಟಾಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನುಗೆಲ್ಲಿಸುವ ನಿಟ್ಟಿನಲ್ಲಿ ಮುಖಂಡರು, ಕಾರ್ಯಕರ್ತರುಒಗ್ಗಟ್ಟಿನಿಂದ ಶ್ರಮಿಸಬೇಕುಎಂದರು.
Leave a Comment