ಹಳಿಯಾಳ:
ಕೇಂದ್ರ ಸರ್ಕಾರದ ಉಜ್ವಲಾ ಯೋಜನೆಯು ಅಡುಗೆ ಅನಿಲ ಸಂಪರ್ಕ ಇಲ್ಲದವರಿಗೆ ಉಚಿತವಾಗಿ ಸಂಪರ್ಕ ನೀಡಲಾಗುತ್ತದೆ ಎಂದು ಬಿಜೆಪಿ ಪಕ್ಷದವರು ಸುಳ್ಳು ಹೇಳುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದು ಯೋಜನೆಯಲ್ಲಿನ ನೀಜಾಂಶವನ್ನು ಜನರಿಗೆ ತಿಳಿಸಿ ಹೊರತು ಸತ್ಯಾಂಶವನ್ನು ಮುಚ್ಚಿಟ್ಟು ಜನರ ಕಣ್ಣಿಗೆ ಮಂಕುಬೂದಿ ಎರಚಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಶನಿವಾರ ಸಾಯಂಕಾಲ ಇಲ್ಲಿಯ ದೇಶಪಾಂಡೆ ಭವನದಲ್ಲಿ ಕರೆದ ತುರ್ತು ಪತ್ರಿಕಾಗೊಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ರಾಜ್ಯ ಸರ್ಕಾರ ಬಡವರಿಗೆ ಗ್ಯಾಸ್ ಸಿಲಿಂಡರ್ ಜೊಡಣೆ ಇಲ್ಲದವರಿಗೆ ಉಚಿತವಾಗಿ ನೀಡಿದೆ ಆದರೇ ಕೇಂದ್ರ ಸರ್ಕಾರ ಮಾತ್ರ ಉಜ್ವಲಾ ಯೋಜನೆಯ ಮೂಲಕ ಸಾಲದ ರೂಪದಲ್ಲಿ ಅಡುಗೆ ಅನಿಲ ಸಂಪರ್ಕ ನೀಡುತ್ತಿದ್ದು 1000ರೂ ಒಲೆಗೆ ಹಾಗೂ 600ರೂ ಅಡುಗೆ ಅನಿಲ ಭರಣ ಮಾಡಲು ಸಾಲ ನೀಡುತ್ತಿದ್ದು ಇದು ಯೋಜನೆಯ ಫಲಾನುಭವಿಯ ಪ್ರತಿ ತಿಂಗಳ ಸಬ್ಸಿಡಿಯಿಂಡ ಕಡಿತವಾಗಲಿದ್ದು ಈ ಹಣ ಮರುಪಾವತಿಯಾಗುವವರೆಗೂ ಜನರಿಗೆ ಅಡುಗೆ ಅನಿಲ ಸಬ್ಸಿಡಿ ದೊರಕದು ಎಂದು ದಾಖಲೆ ಸಮೇತ ವಿವರಿಸಿದ ಸಚಿವ ದೇಶಪಾಂಡೆ ತಾವು ಯೋಜನೆಯ ವಿರೋಧಿಗಳಲ್ಲ ಆದರೇ ಕ್ಷೇತ್ರದ ಬಿಜೆಪಿ ಮುಖಂಡರು ಯೋಜನೆಯ ಸತ್ಯಾಂಶವನ್ನು ಜನರಿಗೆ ತಿಳಿಸಿದರೇ ಒಳಿತು ಎಂದರು.
ರಾಜ್ಯ ಸರ್ಕಾರ ರೈತರ ಪರವಾಗಿದೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ರಾಜ್ಯದಲ್ಲಿ ರೈತರ 50 ಸಾವಿರರೂ ಸಾಲ ಮನ್ನಾ ಮಾಡಲಾಗಿದೆ.ಕೇಂದ್ರ ಸರಕಾರಕ್ಕೆ ಪತ್ರ ಬರೆದುರಾಷ್ಟ್ರೀಕೃತ ಮತ್ತುಗ್ರಾಮೀಣ ಬ್ಯಾಂಕ್ಗಳಲ್ಲಿರುವ ರೈತರ ಸಾಲ ಮನ್ನಾಗಾಗಿ ಪತ್ರ ಬರೆಯಲಾಗಿದೆ.ಆದರೆ ವಿತ್ತ ಸಚಿವರು ಈ ರೀತಿಯ ಪ್ರಸ್ತಾ¥ Àಕೇಂದ್ರ ಮುಂದೆ ಇಲ್ಲ ಎಂದು ಹೇಳುವುದರ ಮೂಲಕ ತಾತ್ಸಾರ ಮನೋಭಾವನೆಯನ್ನು ವ್ಯಕ್ತ ಪಡಿಸಿದ್ದು ರೈತರು ಇದನ್ನು ಅರಿಯಬೇಕು ಎಂದ ಅವರು ಹಳಿಯಾಳ ಮತ್ತುಜೋಯಿಡಾ ತಾಲೂಕುಗಳಿಗೆ ಸೇರಿ ಬಸವಾ ವಸತಿಯೋಜನೆಯಲ್ಲಿಒಟ್ಟೂ 759 ಮನೆಗಳನ್ನು ಮಂಜೂರು ಮಾಡಲಾಗಿದೆ. ಮತ್ತುಗ್ರಾಮ ವಿಕಾಸ ಯೋಜನೆಯಲ್ಲಿಒಟ್ಟೂ 6 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆಎಂದು ಸೃಷ್ಟ ಪಡಿಸಿದರು.
ಜಿಲ್ಲೆಯ ಹಳಿಯಾಳ ತಾಲೂಕಿಗೆ 27.58 ಕೋಟಿ ರೂಗಳ ಬೆಳೆವಿಮೆ ಮಂಜೂರಿ ಮಾಡಲಾಗಿದ್ದುಇದರಿಂದಒಟ್ಟೂ 21210 ರೈತರಿಗೆ ಲಾಭವಾಗಲಿದೆ. ಮುಂಡಗೋಡತಾಲೂಕಿನಲ್ಲಿ 8537 ರೈತರಿಗೆಒಟ್ಟೂ 13.78 ಕೋಟಿರೂ ಮತ್ತು ಶಿರಶಿ ತಾಲೂಕಿಗೆ 6.75 ಕೋಟಿರೂ ಮೂಲಕ 3908 ರೈತರಿಗೆ ಹಾಗೂ ಯಲ್ಲಾಪೂರತಾಲೂಕಿನ 686 ರೈತರಿಗೆ 26.82 ಲಕ್ಷ ರೂಗಳ ಬೆಳೆವಿಮೆ ಮಂಜೂರು ಮಾಡಲಾಗಿದ್ದುಜಿಲ್ಲೆಯಒಟ್ಟೂ 34341 ರೈತರಿಗೆ 48.39ಕೋಟಿ ಬೆಳೆವಿಮೆ ಮಂಜೂರು ಮಾಡಲಾಗಿದೆ. ಸದ್ಯದಲ್ಲಿಯೇ ಬೆಳೆವಿಮೆ ಹಣವುರೈತರ ಖಾತೆಗಳಿಗೆ ನೇರವಾಗಿ ಜವೆ ುಆಗಲಿz Éಎಂದರು.
ಬಾಕ್ಸ್ ಐಟಮ್ :- ತಾಲೂಕಿನ ರೈತರ ಬಹುದಿನದ ಕನಸಾದ 203 ಕೋಟಿರೂ ಮೊತ್ತದ ಕಾಳಿ ಎತ ನೀರಾವರಿಯೋಜನೆಗಾಗಿಜುಲೈ 19 ರಂದು ಟೆಂಡರ್ಕರೆಯಲಾಗಿದ್ದು ಮುಂದಿನ ಒಂದು ತಿಂಗಳ ಅವಧಿಯಲ್ಲಿಟೆಂಡರ್ ಅಂತಿಮಗೊಂಡು ಮುಂದಿನ ಕೆಲವೇ ದಿನಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದೆಂದು ಜಿಲ್ಲಾಉಸ್ತುವಾರಿ ಸಚಿವಆರ್.ವಿ.ದೇಶಪಾಂಡೆ ಹೇಳಿದರು.
ಶಿರಶಿ ಶೈಕ್ಷಣಿಕಜಿಲ್ಲೆಯಲ್ಲಿ ಶಾಲಾ ಕೊಠಡಿಗಳ ನಿರ್ಮಾಣ ಸೇರಿದಂತೆ ದುರಸ್ಥಿಗಾಗಿ 58.90 ಲಕ್ಷರೂಗಳನ್ನು ಮಂಜೂರು ಮಾಡಲಾಗಿದ್ದು, ಉಳವಿ ಮತ್ತುರಾಮನಗರದಲ್ಲಿ ಶಾಧೀ ಮಹಲ್ ನಿರ್ಮಾಣಕ್ಕೆತಲಾ 25 ಲಕ್ಷರೂ ಮಂಜೂರು ಮಾಡಲಾಗಿದೆ.ಅಲ್ಲದೇಜಿಲ್ಲೆಯ ಹಾಲಕ್ಕಿ ಒಕ್ಕಲಿಗ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಒತ್ತಾಯಿಸಿ ಕೇಂದ್ರ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಮ್.ಎಲ್.ಸಿ ಎಸ್.ಎಲ್.ಘೋಟ್ನೆಕರ, ಜಿಪಂಉಪಾಧ್ಯಕ್ಷ ಸಂತೋಷರೇಣಕೆ, ಜಿಲ್ಲಾ ಬ್ಲಾಕ್ಕಾಂಗ್ರೇಸ್ಅಧ್ಯಕ್ಷ ಭೀಮಣ್ಣಾ ನಾಯ್ಕ, ಬ್ಲಾಕ್ಅಧ್ಯಕ್ಷ ಸುಭಾಶಕೋರ್ವೆಕರ, ಪುರಸಭೆಅಧ್ಯಕ್ಷ ಉಮೇಶ ಬೋಳಶೆಟ್ಟಿ, ಸತ್ಯಜಿತ ಗಿರಿ, ಸಂತೋಷ ಹುಂಡೆಕರ ಇತರರು ಇದ್ದರು.
Leave a Comment