ಟಿ ಎಸ್ ಎಸ್ ಶಿರಸಿಯ ವ್ಯಾಪಾರಿ ಅಂಗಳವು ಅಡಿಕೆ ಬೆಳೆಗಾರರ ಹಾಗು ವ್ಯಾಪಾರಸ್ಥರ ನೆಚ್ಚಿನ ಹಾಗು ಪೂಜ್ಯ ಸ್ಥಳವಾಗಿದ್ದು, ಪ್ರತಿದಿನದ ಅಡಿಕೆ ಮಾರುಕಟ್ಟೆಯ ಟ್ರೆಂಡ್ ಅನ್ನು ನಿರ್ಧರಿಸುವ ಹಾಗು ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಅತಿದೊಡ್ಡ ಹಣಕಾಸು ವ್ಯವಹಾರ ನಡೆಸುವ ಮಾರುಕಟ್ಟೆಯಾಗಿದೆ.
*ಏನಿದು ಪ್ರತಿದಿನ ವ್ಯಾಪಾರ?*
ರವಿವಾರ ಹಾಗು ಕೆಲವೇ ಕೆಲ ಸರ್ಕಾರಿ ರಜೆ ಹೊರತು ಪಡಿಸಿದಂತೆ ವಾರದ ಉಳಿದೆಲ್ಲ ದಿನ / ವರ್ಷದ ಬಹುತೇಕ ದಿನ ನಿರಂತರ ಅಡಿಕೆ ವ್ಯಾಪಾರ ನಡೆಯುವ ಅಧಿಕೃತ ಸ್ಥಳವನ್ನು ಇಡೀ ನಮ್ಮ ದೇಶದ ಅಡಿಕೆ ಮಾರುಕಟ್ಟೆಗಳಲ್ಲಿ ಹುಡುಕಿದಾಗ ಸಿಗುವುದು ಬಹುಶಃ TSS ಶಿರಸಿಯ ಅಡಿಕೆ ಮಾರುಕಟ್ಟೆ ಮಾತ್ರ.
*ಸದಸ್ಯರೇ ಇಲ್ಲಿಯ ಆಸ್ತಿ*
ನಮ್ಮ ನಿರಂತರ ಸುಸಜ್ಜಿತ ಮಾರುಕಟ್ಟೆಯ ವ್ಯವಹಾರಕ್ಕೆ ಸದಾ ಸಕಾರಾತ್ಮಕವಾಗಿ ಸ್ಪಂದಿಸುವ ಇಲ್ಲಿನ ಸುಸಂಸ್ಕೃತ, ಪ್ರಾಮಾಣಿಕ ಹಾಗು ವಿಚಾರವಂತ ಸಸದಸ್ಯ ರೈತರೇ ಕಾರಣ ಮತ್ತು ಇವರೇ ನಮ್ಮ ನಿಜವಾದ ಆಸ್ತಿ.
ಸದಾ ಕ್ರಿಯಾಶೀಲವಾಗಿರುವ ಇಲ್ಲಿನ ಮಾರುಕಟ್ಟೆಯು ಸಕಲ ಅಡಿಕೆ ಮಾರುಕಟ್ಟೆಗಳಿಗೆ ಮಾದರಿ.
*ಇನ್ನೂ ಹೆಚ್ಚಿನ ಉತ್ತಮ ಸೇವೆ*
ಉತ್ತಮ ಸೇವೆಯೇ ನಮ್ಮ ವ್ಯಾಪಾರಿ ಅಂಗಳದ ಉದ್ದೇಶವಾಗಿದ್ದು, ರೈತರು ಯಾವುದೇ ದಿನ ವ್ಯಾಪಾರದ ಸಮಯಕ್ಕಿಂತ ಮುಂಚಿತವಾಗಿ ಮಹಸೂಲು ತಂದರೂ ಬಹುತೇಕ ಅಂದೇ ವ್ಯಾಪಾರ ಗ್ಯಾರಂಟಿ. ಎಂತಹ ವ್ಯಾಪಾರದ ಒತ್ತಡ ಪರೀಸ್ಥಿತಿಯಲ್ಲೂ ರೈತರಿಗೆ ಅನಾನುಕೂಲವಾಗದಹಾಗೆ ನೊಡಿಕೊಂಡು ಹಣಕಾಸಿನ ವ್ಯವಹಾರವನ್ನೂ ಅತ್ಯಂತ ಸರಳವಾಗಿಸಿ, ತಂದ ಮಹಸೂಲಿಗೂ ಉತ್ತಮ ಮಾರುಕಟ್ಟೆ ದರ ಒದಗಿಸುತ್ತಿದ್ದೇವೆಯೆಂಬುದನ್ನು ಹೆಮ್ಮೆಯಿಂದಲೇ ಹೇಳಬಯಸುತ್ತೇವೆ.
ಶಿಲ್ಕು ಗೋದಾಮುಗಳಲ್ಲಿನ ಮಹಸೂಲುಗಳನ್ನೂ ಅತಿಹೆಚ್ಚಿನ ಕಾಳಜಿವಹಿಸಿ ನೋಡಿಕೊಳ್ಳಲಾಗುತ್ತಿದೆ. ಕಾಲಕಾಲಕ್ಕೆ ಔಷಧೋಪಚಾರವನ್ನು ಚಾಚೂ ತಪ್ಪದೇ ಮಾಡಲಾಗುತ್ತಿದೆ. ಇದಕ್ಕೆ ಕಳೆದ ಮೂರು ನಾಲ್ಕು ವರ್ಷಗಳಿಂದ ರೈತರು ನಮ್ಮ ಗೋದಾಮುಗಳ ಮೇಲೆ ನಿರಾಳವಾಗಿ ಇಟ್ಟಿರುವ ವಿಶ್ವಾಸಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ.
*ಮತ್ತೊಂದು ಹೆಜ್ಜೆ ಮುಂದೆ*
ಶಿಲ್ಕು ತಂದ ಕೂಡಲೇ ರೈತರ ಎದುರಲ್ಲೆ ಕಚ್ಚಾತೂಕ (ತಂದ ದಿನವೇ ತೂಕ)ಮಾಡಿಕೊಡಲು ಪ್ರತ್ಯೇಕ ಹಮಾಲರನ್ನು ನೇಮಿಸಲಾಗಿದ್ದು ಇದರಿಂದ ಸದಸ್ಯರಿಗೆ ಮತ್ತೂ ಸಾಕಷ್ಟು ಅನುಕೂಲವಾಗಿದೆ.
ವಿಶ್ವಾಸಾರ್ಹ ಹಾಗು ಪ್ರಾಮಾಣಿಕ ವ್ಯವಹಾರಕ್ಕೆ ಸದಸ್ಯ ರೈತರಿಂದ ಸಿಗುತ್ತಿರುವ ಪ್ರೋತ್ಸಾಹ ಹಾಗು ಬೆಂಬಲವು ಅಡಿಕೆ ಬೆಳೆಗಾರರಿಗೆ ಅನುಕೂಲವಾಗುವಂತಹ ಇನ್ನಷ್ಟು ಮಾದರೀ ಕೆಲಸ ಮತ್ತು ಯೋಜನೆಗಳನ್ನು ಮಾಡಲು ಪ್ರೆರೇಪಿಸುತ್ತದೆ ಹಾಗು ಪ್ರೇರೇಪಿಸುತ್ತಿದೆ.
TSS Sirsi
Leave a Comment