ಕಾರವಾರ:
ಅವರ್ಸಾದ ಉರಗ ತಜ್ಞ ಮಹೇಶ ನಾಯ್ಕ ಒಂದೇ ದಿನದಲ್ಲಿ ಬೇರೆ ಬೇರೆ ಕಡೆ 4 ಹೆಬ್ಬಾವುಗಳನ್ನು ಹಿಡಿದು ಅರಣ್ಯ ಇಲಾಖೆಯ ಸಹಾಯದಿಂದ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ಅಂಕೋಲಾದ ಕಣಗಿಲ್ನ ಆನಂದು ಗೌಡ ಅವರ ಮನೆಯ ಕೋಳಿ ಗೂಡಿಗೆ ನುಗ್ಗಿದ ಹೆಬ್ಬಾವು 1 ಕೋಳಿಯನ್ನು ನುಂಗಿತ್ತು. ವಿಷಯ ತಿಳಿದ ಮಹೇಶ ನಾಯ್ಕ ಸ್ಥಳಕ್ಕೆ ತೆರಳಿ ಹೆಬ್ಬಾವನ್ನು ಹಿಡಿದರು. ಬಳಿಕ ಇಲ್ಲಿನ ಬೆಲೆಕೇರಿಯಲ್ಲಿ ಉದಯ ನಾಯ್ಕ ಅವರ ಮನೆಯ ಬಳಿ ಹೆಬ್ಬಾವು ಕಾಣಿಸಿಕೊಂಡಿರುವ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿ ಅದನ್ನು ಹಿಡಿದಿದ್ದಾರೆ. ಅಷ್ಟರಲ್ಲಿ ಹಾರವಾಡ ಗ್ರಾಮದ ಸೋಮೇಶ್ವರ ಪುತ್ತು ನಾಯ್ಕ ಎಂಬುವವರ ಮನೆಯ ಬಳಿ ಕಟ್ಟಿಗೆ ರಾಶಿಯಲ್ಲಿ ಹೆಬ್ಬಾವು ಇರುವ ಬಗ್ಗೆ ವಿಷಯ ತಿಳಿದ ಅಲ್ಲಿ ತೆರಳಿ ಅದನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹಟ್ಟಿಕೇರಿಯ ಈಶ್ವರ ನಾಯ್ಕ ಎಂಬುವವರ ಮನೆಯ ಕೋಳಿ ಗೂಡಿಗೆ ನುಗ್ಗಿದ ಹೆಬ್ಬಾವು 3 ಕೋಳಿಗಳನ್ನು ನುಂಗಿ ಕೋಳಿಯನ್ನು ಕೊಂದು ಹಾಕಿತ್ತು. ಮನೆಯವರು ಮಹೇಶ ಅವರಿಗೆ ವಿಷಯ ತಿಳಿಸಿದಾಗ ಸ್ಥಳಕ್ಕಾಗಮಿಸಿದ ಅವರು ಅದನ್ನು ಹಿಡಿದರು. ಹಟ್ಟಿಕೇರಿ ಅರಣ್ಯ ವಲಯದ ಅಧಿಕಾರಿ ಸಂತೋಷ ಪವಾರ್ ಹಾವುಗಳನ್ನು ಕಾಡಿಗೆ ಬಿಟ್ಟರು.
Leave a Comment