ಹಳಿಯಾಳ:
ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಈಚೆಗೆ ನೀಡುತ್ತಿರುವ ಹೇಳಿಕೆಗಳು ಹಾಗೂ ಅವರ ಒಟ್ಟಾರೆ ವರ್ತನೆ ಗಮನಿಸಿದರೆ, ಮಧ್ಯಂತರ ಚುನಾವಣೆ ನಡೆಯುವುದು ಖಚಿತವೆಂಬ ಸಂಕೇತ ದೊರಕುತ್ತಿವೆ, ಎಂದು ಬಿ.ಜೆ.ಪಿ. ಮುಖಂಡ ಹಾಗೂ ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದ್ದಾರೆ.
ಅವರು ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ, ರಾಜ್ಯ ಸರ್ಕಾರ ಸಂಪೂರ್ಣವಾಗಿ ದೀವಾಳಿಯಾಗಿದ್ದು, ಸರ್ಕಾರ ಸಾಲದ ಹೊರೆಯಲ್ಲಿ ಮುಳುಗಿದೆ ಎಂದು ಗಂಭೀರವಾಗಿ ಅಪಾದಿಸಿದರು. ಮುಖ್ಯಮಂತ್ರಿ ಜಾತಿಗಳ ಬಗ್ಗೆ ತಲೆಕೆಡಿಸಿಕೊಂಡು ತಾವು ಜಾತಿವಾದಿಯೆಂದು ಒಪ್ಪುತ್ತಿದ್ದಾರೆ, ಎಂದು ಅವರು ಲೇವಡಿ ಮಾಡಿದರು.
ಕಾಳಿನದಿ ಯೋಜನೆ ಟೇಂಡರ್- ಒಂದು ನಾಟಕ:- ಕಳೆದ 10-15 ವರ್ಷಗಳ ಹಿಂದೆಯೇ ಕಾಳಿನದಿ ಏತ ನೀರಾವರಿ ಯೋಜನೆಯ ಬಗ್ಗೆ ಯೋಚಿಸಿದ್ದರೆ, ಸಚೀವ ದೇಶಪಾಂಡೆ ಆ ಯೋಜನೆ ಇಷ್ಟೊತ್ತಿಗೆ ಅನುಷ್ಠನಗೊಳಿಸುತ್ತಿದ್ದರು. ಆದರೆ ಈಗ ಚುನಾವಣೆ ಸಮೀಪಸುತ್ತಿರುವಾಗ ತರಾತುರಿಯಲ್ಲಿ ಟೇಂಡರ್ ಘೋಸಿಸುವುದು ರಾಜಕೀಯ ಗಿಮಿಕ್ ಆಗಿದೆ ಎಂದ ಹೆಗಡೆ ಪತ್ರಿಕೆಗಳಲ್ಲಿ ಕರ್ನಾಟಕ ನೀರಾವರಿ ನಿಗಮ ಪ್ರಕಟಿಸಿದ ಟೇಂಡರ್ ಘೋಷಣೆಯಲ್ಲಿ ಯೋಜನೆಯ ಸರ್ವೇ ಕೂಡ ನಡೆಯಬೇಕಾಗಿದೆ ಎಂದು ಹೇಳಲಾಗಿದೆ. ಹಾಗಾದರೆ ಯೋಜನೆಯ ನಿಜವಾದ ಅನುಷ್ಠಾನ ಎಂದು ಆಗಬಹುದು ಎಂದು ಹಾಗೂ ತಾಲೂಕೀನ ರೈತರಿಗೆ ಇದರ ಲಾಭ ಯಾವಾಗ ದೊರಕಬಹುದು ಎಂಬುವುದು ಅಸ್ಪಷ್ಟವಾಗಿದ್ದ ಕಾರಣ ಇದು ದೇಶಪಾಂಡೆಯವರ ಇನ್ನೊಂದು ಚುನಾವಣಾ ಪೂರ್ವ ನಾಟಕ ಎಂದರು.
ಉಜ್ವಲಾ ಯೋಜನೆಯ ಸ್ಪಷ್ಟೀಕರಣ :- ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಲ್ಲಿ ಫಲಾನುಭವಿ ಮಹಿಳೆಯರು ಯೋಜನೆಯ ರೂ.1600 ಗಳಷ್ಟು ಹಣ ಸಾಲ ರೂಪದಲ್ಲಿ ಪಡೆಯಬೇಕಾಗುತ್ತದೆ ಎಂಬ ಕರಾರು ಇದ್ದ ಕಾರಣ ಇದು ಬಡ ಮಹಿಳೆಯರಿಗೆ ಎಸಗಲಾದ ಮೋಸ ಎಂದು ಸಚೀವ ದೇಶಪಾಂಡೆ ಮಾಡಿದ ಆರೋಪದ ಬಗ್ಗೆ ಮಾತನಾಡಿದ ಸುನೀಲ್, ಈ ವಿಷಯ ಎನ್.ಡಿ.ಎ. ಆಡಳಿತದ ಗಮನಕ್ಕೆ ಬಂದಿದ್ದು ಮುಂದಿನ ಕೆಲವೇ ತಿಂಗಳಲ್ಲಿ ಮಹಿಳೆಯರಿಗೆ ಆ ಸಾಲದ ಸಂಪೂರ್ಣ ಹಣ ವಾಪಸ್ ನೀಡಲಾಗುವುದೆಂದು ತಿಳಿಸಿದರು. ಈ ಯೋಜನೆಯ ಲಾಭ ಜನರಿಗೆ ದೊರಕಿಸಿ ಕೊಡಲು ಕಾಂಗ್ರೇಸ್ ಕಾರ್ಯಕರ್ತರು ಹಣ ಪಡೆಯುತ್ತಿದ್ದಾರೆ ಎಂದು ಸುನೀಲ್ ಗಂಬೀರವಾಗಿ ಆರೋಪಿಸಿದರು ಕೂಡ.
ಪತ್ರಿಕಾ ಗೋಷ್ಠಿಯಲ್ಲಿ, ತಾಲೂಕಾ ಬಿ.ಜೆ.ಪಿ. ಅಧ್ಯಕ್ಷ ಶಿವಾಜಿ ನರಸಾನಿ, ಜಿಲ್ಲಾ ರೈತ ಬಿ.ಜೆ.ಪಿ. ಅಧ್ಯಕ್ಷ ಗಣಪತಿ ಕರಂಜೆಕರ, ಎಸ್.ಎ. ಶಟವಣ್ಣನವರ, ನಾಗರಾಜ ಗೌಡ, ಅನೀಲ್ ಮುತ್ನಾಳ, ವಿ.ಎಮ್. ಪಾಟೀಲ, ಸೋನಪ್ಪ ಸುಣಕಾರ, ವಾಸುದೇವ ಪೂಜಾರಿ, ಮೋಹನ ಬೆಳಗಾಂವಕರ, ಮಾರುತಿ Áಲಗುಡಿ, ಗಿರೀಶ ಟೋಸುರ್, ತಯ್ಯಬ್ ಮುಲ್ಲಾ, ರಾಘು ನಾಯ್ಕ ಇತರರು ಇದ್ದರು.
Leave a Comment