ಹೊನ್ನಾವರ:”ಕರಾವಳಿ ಭಾಗದಲ್ಲಿ ನಿಸರ್ಗ ಸಂಪತ್ತು ಸಾಕಷ್ಟು ಇದೆಯಾದರೂ ಕೇವಲ ಮನುಷ್ಯ ಮಾತ್ರ ಈ ಸಂಪತ್ತಿನ ವಾರಸುದಾರನಲ್ಲ ಎನ್ನುವ ಅರಿವು ನಮಗಾಗಬೇಕಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಕೆ.ವಿ.ಅಭಿಪ್ರಾಯಪಟ್ಟರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜು ಹಾಗೂ ಅರಣ್ಯ ಇಲಾಖೆ ಇವುಗಳ ಆಶ್ರಯದಲ್ಲಿ ಇಲ್ಲಿನ ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ನಿಸರ್ಗ ಸಂಪತ್ತು ಸಾರ್ವಕಾಲಿಕವಾಗಿದ್ದು ಪ್ರಕೃತಿಯಲ್ಲಿರುವ ಎಲ್ಲ ಜೀವಿಗಳಿಗೆ ಸೇರಿದ್ದಾಗಿದೆ’ಎಂದು ಹೇಳಿದರು.
ಕೃಷಿ,ಕಾವ್ಯ,ಕಲೆ ಮೊದಲಾದವುಗಳೆಲ್ಲ ಅರಣ್ಯವೇ ಸ್ಪೂರ್ತಿ.ಅರಣ್ಯ ನಾಶದಿಂದ ಉಸಿರಾಡುವ ಗಾಳಿಗೆ ತತ್ವಾರ ಉಂಟಾಗುವ ಸ್ಥಿತಿ ನಿರ್ಮಾಣವಾಗುತ್ತಿದೆ.ಗಿಡ ನೆಡುವುದಕ್ಕಿಂತ ಇರುವ ಅರಣ್ಯ ರಕ್ಷಣೆಗೆ ಹೆಚ್ಚಿನ ಗಮನ ಕೊಡಬೇಕಿದೆ.
ಪರಿಸರ ಮತ್ತು ಮನುಷ್ಯನ ನಡುವಿನ ಅನ್ಯೋನ್ಯ ಸಂಬಂಧ ಕಾಲಕ್ರಮೇಣ ನಶಿಸುತ್ತ ಸಾಗಿದ್ದು ಅರಣ್ಯ ಉತ್ಪನ್ನಗಳಿಗಾಗಿ ವನ್ಯಜೀವಿಗಳು ಹಾಗೂ ಮನುಷ್ಯನ ನಡುವೆ ಸಂಘರ್ಷ ನಿರ್ಮಾಣವಾಗಿದೆ. ಪ್ರಕೃತಿ ನಾಶ ಹೀಗೆ ಮುಂದುವರಿದರೆ ನದಿ,ಅರಣ್ಯ,ನೀರು ಇಲ್ಲದ ಕಾಲ ದೂರವಿರಲಾರದು ಎಂದು ಅವರು ಎಚ್ಚರಿಸಿದರು.
ಪಶ್ಚಿಮ ಘಟ್ಟದ ಸೆರಗಿನ ಹೊನ್ನಾವರ ಅರಣ್ಯ ಪ್ರದೇಶದ ವೈಶಿಷ್ಟ್ಯತೆ ಹಾಗೂ ಅರಣ್ಯ ಇಲಾಖೆ ಅಭಿವೃದ್ಧಿಪಡಿಸಿದ ಪರಿಸರ ಪ್ರವಾಸಿ ತಾಣಗಳನ್ನು ವಿಡಿಯೋ ಪ್ರದರ್ಶನದೊಂದಿಗೆ ವಿವರಿಸಿದ ಅವರು,ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಪ್ರೊ.ಎಸ್.ಎಸ್.ಹೆಗಡೆ ಮಾತನಾಡಿ,ವಿದ್ಯಾರ್ಥಿಗಳು ತಮ್ಮ ಸಾಮಾಜಿಕ ಹೊಣೆಗಾರಿಕೆ ಅರಿತು ಉತ್ತಮ ನಾಗರಿಕರಾಗಬೇಕು’ಎಂದು ಹೇಳಿದರು.
ಎಂ.ಪಿ.ಇ. ಸೊಸೈಟಿಯ ಅಧ್ಯಕ್ಷ ಡಾ.ಎಂ.ಪಿ.ಕರ್ಕಿ ಗಿಡ ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು.ಪ್ರೊ.ಎಂ.ಜಿ.ಹೆಗಡೆ ವಂದಿಸಿದರು.
ಕಾಲೇಜಿನ ಆZವಾರದಲ್ಲಿ ನಡೆದ ಸ್ವಚ್ಛತೆ ಹಾಗೂ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಉತ್ಸಾಹದಿಂದ ಪಾಲ್ಗೊಂಡರು.
Leave a Comment