ಹೊನ್ನಾವರ:
ತಾಲೂಕಿನ ಖರ್ವಾ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಸುಮಾರು 30 ಮೀಟರ್ ಉದ್ದದ ಕಂಪೌಂಡ್ ತಡೆಗೋಡೆಯನ್ನು ವ್ಯಕ್ತಿಯೊಬ್ಬ ಧ್ವಂಸಗೊಳಿಸಿ ಗ್ರಾ.ಪಂ. ಅಧಿಕಾರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಬಗ್ಗೆ ಹೊನ್ನಾವರ ಠಾಣೆಯಲ್ಲಿ ದೂರು ದಾಖಲಾಗಿದೆ.
ಖರ್ವಾ ಗ್ರಾಮ ಪಂಚಾಯತ ವ್ಯಾಪ್ತಿಯ ಕೊಳಗದ್ದೆ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯದರ್ಶಿ ಮೋಹನ ಸುಬ್ರಾಯ ನಾಯ್ಕ ಎಂಬುವವನು ಈ ಕೃತ್ಯವೆಸಗಿದ್ದಾನೆ. ಗ್ರಾ.ಪಂ.ಗೆ ಸಂಬಂಧಪಟ್ಟ ಸರ್ಕಾರದ ಆಸ್ತಿಪಾಸ್ತಿ ಸೇರಿ 1.30 ಲಕ್ಷ ರೂ. ಮೌಲ್ಯದ ಸ್ವತ್ತನ್ನು ಹಾನಿಮಾಡಿದ್ದಾರೆ ಎನ್ನಲಾಗಿದೆ. ಕಂಪೌಂಡ್ ಗೋಡೆಯನ್ನು ಖುಲ್ಲಾ ಪಡಿಸುತ್ತಿರುವ ಶಬ್ಧ ಕೇಳಿ ಗ್ರಾ.ಪಂ. ಅಧಿಕಾರಿ ಉದಯ ಖಾರ್ವಿ ಅವರು ಶನಿವಾರ ಗ್ರಾಮ ಪಂಚಾಯಿತಿ ಬಳಿ ಬರುತ್ತಿದ್ದಂತೆ ಕಂಪೌಡ್ ಗೋಡೆಯನ್ನು ಕೆಡವಿರುವುದು ಬೆಳಕಿಗೆ ಬಂದಿದೆ. ಇದನ್ನು ಪ್ರಶ್ನಿಸಲು ಹೋದ ಗ್ರಾ.ಪಂ ಅಧಿಕಾರಿಗೆ ಅವಾಚ್ಯ ಶಬ್ಧಗಳಿಂದ ಬೈದು ಪರಾರಿಯಾಗಿರುವುದಾಗಿ ಗ್ರಾ.ಪಂ ಅಧಿಕಾರಿ ಉದಯ ಖಾರ್ವಿ ಹೊನ್ನಾವರ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Leave a Comment