ಹೊನ್ನಾವರ:ತಾಲೂಕಿನ ಖರ್ವಾ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಸುಮಾರು 30 ಮೀಟರ್ ಉದ್ದದ ಕಂಪೌಂಡ್ ತಡೆಗೋಡೆಯನ್ನು ವ್ಯಕ್ತಿಯೊಬ್ಬ ಧ್ವಂಸಗೊಳಿಸಿ ಗ್ರಾ.ಪಂ. ಅಧಿಕಾರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಬಗ್ಗೆ ಹೊನ್ನಾವರ ಠಾಣೆಯಲ್ಲಿ ದೂರು ದಾಖಲಾಗಿದೆ. ಖರ್ವಾ ಗ್ರಾಮ ಪಂಚಾಯತ ವ್ಯಾಪ್ತಿಯ ಕೊಳಗದ್ದೆ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯದರ್ಶಿ ಮೋಹನ ಸುಬ್ರಾಯ ನಾಯ್ಕ ಎಂಬುವವನು ಈ ಕೃತ್ಯವೆಸಗಿದ್ದಾನೆ. ಗ್ರಾ.ಪಂ.ಗೆ ಸಂಬಂಧಪಟ್ಟ ಸರ್ಕಾರದ ಆಸ್ತಿಪಾಸ್ತಿ … [Read more...] about ಪಂಚಾಯಿತಿಗೆ ಸಂಬಂಧಿಸಿದ ಕಂಪೌಂಡ್ ಧ್ವಂಸ
ವ್ಯಕ್ತಿ
ಬಿಜೆಪಿ ಮಂಡಳದ ವತಿಯಿಂದ ಸಂಭ್ರಮಾಚರಣೆ
ಕುಮಟಾ: ರಾಮನಾಥ ಕೋವಿಂದ ಅವರು 14 ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದು ಕುಮಟಾದ ಬಿಜೆಪಿ ಮಂಡಳದ ವತಿಯಿಂದ ಸಂಭ್ರಮಾಚರಣೆ ಜರುಗಿತು. 65% ಕ್ಕಿಂತ ಹೆಚ್ಚು ಮತಗಳನ್ನು ಗಳಿಸುವುದರ ಮೂಲಕ ಸುಮಾರು 3 ಲಕ್ಷ 35 ಸಾವಿರದಷ್ಟು ಮತಗಳ ಅಂತರದಿಂದ ರಾಮನಾಥ ಕೋವಿಂದ ಅವರು ಆಯ್ಕೆಯಾಗಿದ್ದು ಈ ಮೂಲಕ ಒಬ್ಬ ದಲಿತ ಸಮಾಜದ ಸಾಮಾನ್ಯ ವ್ಯಕ್ತಿಯೂ ಕೂಡಾ ರಾಷ್ಟ್ರಪತಿಯಾಗಬಹುದು ಎಂಬುದನ್ನು ಬಿಜೆಪಿ ಇನ್ನೊಮ್ಮೆ ಸಾಬೀತುಪಡಿಸಿದೆ. ಈ ಸಂದರ್ಭದಲ್ಲಿ ಮಂಡಳದ ಅಧ್ಯಕ್ಷರಾದ ಕುಮಾರ … [Read more...] about ಬಿಜೆಪಿ ಮಂಡಳದ ವತಿಯಿಂದ ಸಂಭ್ರಮಾಚರಣೆ
ರೈಲು ಬಡಿದು ವ್ಯಕ್ತಿ ಸಾವು
ಹೊನ್ನಾವರ :ತಾಲೂಕಿನ ಮಾವಿನಕುರ್ವಾ ಕೊಂಕಣ ರೈಲ್ವೆ ಬಿಡ್ಜ ಬಳಿ ರೈಲ್ವೆ ಟ್ರಾಕ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬ ರೈಲು ಬಡಿದು ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿ ತಾರಿಬಾಗಿಲಿನ ಚರ್ಚರೋಡಿನ ನಿವಾಸಿಯಾದ ವೆಂಕಟೇಶ ರಾಮ ತಾಂಡೇಲ(68). ಮೃತ ವ್ಯಕ್ತಿ ಕಳೆದ 2 ವರ್ಷಗಳಿಂದ ಬಿ.ಪಿ.ಕಾಯಿಲೆಯಿಂದ ಬಳಲುತ್ತಿದ್ದು ರೈಲು ಟ್ರಾಕ್ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ಬರುತ್ತಿದ್ದ ರೈಲಿಗೆ ಅಪ್ಪಳಿಸಿ ಅಪಘಾತ ಸಂಭವಿಸಿದೆ. ಹೊಟ್ಟೆ … [Read more...] about ರೈಲು ಬಡಿದು ವ್ಯಕ್ತಿ ಸಾವು
ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ
ಹೊನ್ನಾವರ : ತನ್ನ ಮನೆಯ ಮುಂದಿನ ಮರವೊಂದಕ್ಕೆ ಸೀರೆಯಿಂದ ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕಮಟೆಹಿತ್ಲದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಕಮಟೆಹಿತ್ಲದ ವೆಂಕಟೇಶ ವಿಠೋಬ ಮೇಸ್ತ (45) ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೃತನ ಪತ್ನಿ ಇಲ್ಲಿನ ಪೋಲಿಸರಿಗೆ ದೂರು ನೀಡಿದ್ದಾರೆ. ಟೆಂಪೋ ಚಾಲಕ ವೃತ್ತಿಯಲ್ಲಿದ್ದ ವೆಂಕಟೇಶ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ … [Read more...] about ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ
ಸೈಕಲ್ ಮೇಲೆ ಪ್ರವಾಸ ಕೈಗೊಂಡಿರುವ ಅಜೀತ ಸತರಾ
ಕಾರವಾರ:ಕಲ್ಕತ್ತಾ ಮೂಲದ ವ್ಯಕ್ತಿಯೊಬ್ಬರು ಸೈಕಲ್ ಮೂಲಕ ಪ್ರವಾಸ ನಡೆಸುತ್ತಿದ್ದು, ಗುರುವಾರ ಕಾರವಾರ ಪ್ರವೇಶಿಸಿದರು. ಅಜೀತ ಸತರಾ ಸೈಕಲ್ ಪ್ರವಾಸ ಕೈಗೊಂಡವರು. ಈಗಾಗಲೇ ಐದು ರಾಜ್ಯಗಳನ್ನು ಸುತ್ತಿದ ಇವರು ಮುಂದೆ ಗೋವಾ ಹಾಗೂ ಮಹಾರಾಷ್ಟ್ರ ಸಂಚರಿಸಲಿದ್ದಾರೆ. ಭೇಟಿ ನೀಡಿದ ತಾಣಗಳ ಫೋಟೋ ಸಂಗ್ರಹಿಸಿ, ಈ ಬಗ್ಗೆ ಅದ್ಯಯನ ನಡೆಸುವ ಕೆಲಸದಲ್ಲಿ ಅಜೀತ ನಿರತರಾಗಿದ್ದಾರೆ. ಮೂರು ತಿಂಗಳ ಹಿಂದೆ ಇವರ ಪ್ರವಾಸ ಆರಂಭವಾಗಿದ್ದು, ಇದು ಅಂತ್ಯಗೊಂಡ ನಂತರ ಈ ಬಗ್ಗೆ ಪುಸ್ತಕ … [Read more...] about ಸೈಕಲ್ ಮೇಲೆ ಪ್ರವಾಸ ಕೈಗೊಂಡಿರುವ ಅಜೀತ ಸತರಾ