ಕಾರವಾರ:
ಕಲ್ಕತ್ತಾ ಮೂಲದ ವ್ಯಕ್ತಿಯೊಬ್ಬರು ಸೈಕಲ್ ಮೂಲಕ ಪ್ರವಾಸ ನಡೆಸುತ್ತಿದ್ದು, ಗುರುವಾರ ಕಾರವಾರ ಪ್ರವೇಶಿಸಿದರು.
ಅಜೀತ ಸತರಾ ಸೈಕಲ್ ಪ್ರವಾಸ ಕೈಗೊಂಡವರು. ಈಗಾಗಲೇ ಐದು ರಾಜ್ಯಗಳನ್ನು ಸುತ್ತಿದ ಇವರು ಮುಂದೆ ಗೋವಾ ಹಾಗೂ ಮಹಾರಾಷ್ಟ್ರ ಸಂಚರಿಸಲಿದ್ದಾರೆ. ಭೇಟಿ ನೀಡಿದ ತಾಣಗಳ ಫೋಟೋ ಸಂಗ್ರಹಿಸಿ, ಈ ಬಗ್ಗೆ ಅದ್ಯಯನ ನಡೆಸುವ ಕೆಲಸದಲ್ಲಿ ಅಜೀತ ನಿರತರಾಗಿದ್ದಾರೆ. ಮೂರು ತಿಂಗಳ ಹಿಂದೆ ಇವರ ಪ್ರವಾಸ ಆರಂಭವಾಗಿದ್ದು, ಇದು ಅಂತ್ಯಗೊಂಡ ನಂತರ ಈ ಬಗ್ಗೆ ಪುಸ್ತಕ ಪ್ರಕಟಿಸುವದಾಗಿ ಹೇಳಿದ್ದಾರೆ. ದಿನಕ್ಕೆ 150ಕಿಮೀ ವರೆಗೆ ಸೈಕಲ್ ಮೂಲಕ ಸಂಚರಿಸುವ ಇವರು ದೇವಾಲಯ, ವಸತಿ ಗೃಹ ಹಾಗೂ ಇನ್ನಿತರ ಕಡೆಗಳಲ್ಲಿ ರಾತ್ರಿ ತಂಗುತ್ತಾರೆ. ಆಹಾರ ಸ್ವಂತ ತಯಾರಿಸಿಕೊಳ್ಳುತ್ತಿದ್ದಾರೆ. ಆರಂಭದಲ್ಲಿ ಇವರ ಪುತ್ರ ಕೂಡ ಸೈಕಲ್ ಯಾತ್ರೆಗೆ ಜೊತೆಯಾಗಿದ್ದು, ದಾರಿಮದ್ಯೆ ಆರೋಗ್ಯ ಸಮಸ್ಯೆಯಾದ ಕಾರಣ ಊರಿಗೆ ಹಿಂತಿರುಗಿದರು. ಹೀಗಾಗಿ ಈ ಪ್ರವಾಸ ಮುಗಿದ ಮೇಲೆ ಪುತ್ರನೊಡನೆ ಇನ್ನೊಮ್ಮೆ ಇದೇ ಮಾರ್ಗದಲ್ಲಿ ಪ್ರವಾಸ ನಡೆಸುವದಾಗಿ ಅಜೀತ ಸತರಾ ತಿಳಿಸಿದರು.
Leave a Comment