ಕುಮಟಾ:
ರಾಮನಾಥ ಕೋವಿಂದ ಅವರು 14 ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದು ಕುಮಟಾದ ಬಿಜೆಪಿ ಮಂಡಳದ ವತಿಯಿಂದ ಸಂಭ್ರಮಾಚರಣೆ ಜರುಗಿತು.
65% ಕ್ಕಿಂತ ಹೆಚ್ಚು ಮತಗಳನ್ನು ಗಳಿಸುವುದರ ಮೂಲಕ ಸುಮಾರು 3 ಲಕ್ಷ 35 ಸಾವಿರದಷ್ಟು ಮತಗಳ ಅಂತರದಿಂದ ರಾಮನಾಥ ಕೋವಿಂದ ಅವರು ಆಯ್ಕೆಯಾಗಿದ್ದು ಈ ಮೂಲಕ ಒಬ್ಬ ದಲಿತ ಸಮಾಜದ ಸಾಮಾನ್ಯ ವ್ಯಕ್ತಿಯೂ ಕೂಡಾ ರಾಷ್ಟ್ರಪತಿಯಾಗಬಹುದು ಎಂಬುದನ್ನು ಬಿಜೆಪಿ ಇನ್ನೊಮ್ಮೆ ಸಾಬೀತುಪಡಿಸಿದೆ.
ಈ ಸಂದರ್ಭದಲ್ಲಿ ಮಂಡಳದ ಅಧ್ಯಕ್ಷರಾದ ಕುಮಾರ ಮಾರ್ಕಂಡೇಯ ಅವರು ಮಾತನಾಡಿ ಈ ದೇಶದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯನೂ ಕೂಡಾ ಬಿಜೆಪಿ ಪಕ್ಷದಲ್ಲಿ ಉನ್ನತ ಪದವಿಯನ್ನು ಗಳಿಸಬಹುದು ಎನ್ನುತ್ತ ಚುನಾಯಿತರಾದ ರಾಮನಾಥ ಕೋವಿಂದ ಅವರಿಗೆ ಶುಭ ಹಾರೈಸಿದರು.
ಬಿಜೆಪಿ ಪ್ರಮುಖರಾದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಈ ಹಿಂದೆ ಒಬ್ಬ ಚಾಯವಾಲ ಪ್ರಧಾನಮಂತ್ರಿಯಾಗಿ ಶ್ರದ್ಧೆ, ಅವಿರತ ಪ್ರಯತ್ನಗಳ ಮೂಲಕ ದೇಶವನ್ನು ವಿಶ್ವದ ಮುಂಚೂಣಿಯಲ್ಲಿ ಕೊಂಡೊಯ್ಯಲು ತನ್ನನ್ನು ತಾನೇ ಸಮರ್ಪಿಸಿಕೊಂಡ ಬಗೆಯನ್ನು ಸ್ಮರಿಸಿಕೊಂಡರು. ಹಾಗೂ 14 ನೇ ರಾಷ್ಟ್ರಪತಿಯಾಗಿ ದಲಿತ ಸಮಾಜದ ರಾಮನಾಥ ಕೋವಿಂದ ಅವರು ಆಯ್ಕೆಯಾಗಿದ್ದು ದೀನದಲಿತರ ಬಗ್ಗೆ ಬಿಜೆಪಿ ಪಕ್ಷಕ್ಕಿರುವ ವಿಶೇಷ ಕಾಳಜಿಯನ್ನು ತೋರುತ್ತಿದ್ದು ಇದು ದಲಿತರಿಗೆ ಸಂದ ಗೌರವವಾಗಿದೆ ಎಂದು ಒತ್ತಿ ಹೇಳಿದರು.
ಈ ಸಂದರ್ಭದಲ್ಲಿ ಅನೇಕ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Leave a Comment