ಕಾರವಾರ: ಜಿಲ್ಲೆಯಲ್ಲಿ ಸೀಮೆಎಣ್ಣೆ ಬೋಟ್ ಬಳಸಿ ಮೀನುಗಾರಿಕೆ ಮಾಡುತ್ತಿರುವ ಎಲ್ಲಾ ದೋಣಿಗಳನ್ನು ಜಿಲ್ಲೆಯಾಂದ್ಯಂತ ಒಂದೇ ಹಂತದಲ್ಲಿ ತಪಾಸಣೆ ಕೈಗೊಳ್ಳಲಾಗುವುದು.
ಕಾರವಾರ ತಾಲೂಕು ವ್ಯಾಪ್ತಿಯಲ್ಲಿ ಮೀನುಗಾರಿಕೆ ಉಪನಿದೇಶಕರು ಕಾರವಾರ ಕಚೇರಿ ಎದುರುಗಡೆ ಬೀಚ್, ಮಾಜಾಳಿ ಬೀಚ್ (ಗೋಟ್ನಿಭಾಗ), ಮುದಗಾ ಬೀಚ್, ಅಂಕೋಲಾ ತಾಲೂಕು ವ್ಯಾಪ್ತಿಯಲ್ಲಿ ಹಾರವಾಡ (ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಎದುರುಗಡೆ ಬೀಚ್), ಕುಮಟಾ ತಾಲೂಕು ವ್ಯಾಪ್ತಿಯಲ್ಲಿ ವನಳ್ಳಿ, ಬೀಚ್, ತದಡಿ ಬಂದರು, ಅಳ್ವೆದಂಡೆ, ಶಸಿಹಿತ್ತಲು, ಹೊನ್ನಾವರ ತಾಲೂಕು ವ್ಯಾಪ್ತಿಯಲ್ಲಿ ಟೊಂಕಾ ಕಾಸರಕೋಡ(ಬಂದರು), ಮಂಕಿ(ಕೋಡಿ/ಬೀಚ್), ಭಟ್ಕಳ ತಾಲೂಕು ವ್ಯಾಪ್ತಿಯಲ್ಲಿ ಮುಂಡಳ್ಳಿ ಬೆಲೆ(ಬೀಚ್), ತೆಂಗಿನಗುಂಡಿ ಬಂದರು, ಮುರ್ಡೇಶ್ವರ ಬೀಚ್ಗಳನ್ನು ದೋಣಿ ಪರಿಶೀಲನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಆಗಸ್ಟ 9 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸೀಮೆಎಣ್ಣೆ ಬಳಸಿ ಔಟ್ಬೋರ್ಡ ಇಂಜಿನ್ ಮೂಲಕ ಮೀನುಗಾರಿಕೆ ಮಾಡುತ್ತಿರುವ ದೋಣಿಯ ಮಾಲೀಕರು ತಮ್ಮ ಮಾಲಿಕತ್ವದ ಮೋಟಾರಿಕೃತ ಮೀನುಗಾರಿಕಾ ದೋಣಿಯನ್ನು (ಇಂಜಿನೊಂದಿಗೆ) ದೋಣಿ ನೊಂದಣಿ, ಸೀಮೆಎಣ್ಣೆ ಪರ್ಮಿಟ್, ಆಧಾರಕಾರ್ಡ ಮತ್ತು ಬ್ಯಾಂಕ ಪಾಸುಪುಸ್ತಕದ ಝರಾಕ್ಸ ಪ್ರತಿ ದಾಖಲೆಗಳೊಂದಿಗೆ ಹಾಜರು ಪಡಿಸಬೇಕು. ತಮ್ಮ ಮೀನುಗಾರಿಕಾ ದೋಣಿ ಮತ್ತು ದೋಣಿಯ ಇಂಜಿನ್ ಸುಸ್ಥಿತಿಯಲ್ಲಿದೆ ಎಂಬುದನ್ನು ತಪಾಸಣಾ ತಂಡಕ್ಕೆ ಖಾತ್ರಿಪಡಿಸತಕ್ಕದ್ದು, ತಪಾಸಣೆಗೆ ಒಳಪಡಿಸದ, ಸುಸ್ಥಿತಿಯಲ್ಲಿಲ್ಲದ ದೋಣಿಗಳ ನೊಂದಣಿಯನ್ನು ಹಾಗೂ ನಿಯಂತ್ರಿತ ದರದ ಸೀಮೆಎಣ್ಣೆ ಅನುಮತಿ (ಪರ್ಮಿಟ್)ನ್ನು ರದ್ದುಪಡಿಸಲಾಗುವುದು ಎಂದು ಜಿಲ್ಲಾ ಮೀನುಗಾರಿಕಾ ಇಲಾಖೆ ಉಪನಿರ್ದೇಶಕರು ತಿಳಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಉಪನಿರ್ದೇಶಕರು ಕಾರವಾರ ಹಾಗೂ ಆಯಾ ತಾಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರನ್ನು ಸಂರ್ಪಕಿಸಬಹುದಾಗಿದೆ.
Leave a Comment