ಹೊನ್ನಾವರ;ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಶ್ರೀ ನಾಗಜಟಕೇಶ್ವರ ಎಂಬ ಟ್ರೋಲರ್ ಬೋಟ್ ಸಮುದ್ರದ ಮಧ್ಯೆ ಮುಳುಗಿದೆ.ಮೀನುಗಾರಿಕೆ ನಡೆಸುತ್ತಿದ್ದ ವೇಳೆ ತಾಂತ್ರಿಕ ದೋಷದಿಂದ ಯಂತ್ರ ಸ್ಥಗಿತಗೊಂಡು ಕಡಲ ಅಲೆಯ ಹೊಡೆತಕ್ಕೆ ಬೋಟ್ ಮುಳುಗಿರುವದಾಗಿ ಹೇಳಲಾಗಿದೆ. ಬೋಟ್ನಲ್ಲಿದ್ದ ಎಲ್ಲಾ 7 ಮೀನುಗಾರರನ್ನು ಇನ್ನಿತರ ಬೋಟ್ನಲ್ಲಿದ್ದ ಮೀನುಗಾರರ ನೆರವಿನಿಂದ ರಕ್ಷಿಸಲಾಗಿದೆ. ಈ ಅವಘಡದಿಂದ ಮೀನುಗಾರಿಕೆ ಬಲೆ ಬೋಟ್ ಹಾನಿ ಸೇರಿ ಸುಮಾರು 15 ಲಕ್ಷ ರೂ.ನಷ್ಟವಾಗಿದೆ … [Read more...] about ಬೋಟ್ ಮುಳುಗಡೆ
ಬೋಟ್
ಸೀಮೆಎಣ್ಣೆ ಬೋಟ್ ಬಳಸಿ ಮೀನುಗಾರಿಕೆ ಮಾಡುತ್ತಿರುವ ಎಲ್ಲಾ ದೋಣಿಗಳನ್ನು ಜಿಲ್ಲೆಯಾಂದ್ಯಂತ ತಪಾಸಣೆ
ಕಾರವಾರ: ಜಿಲ್ಲೆಯಲ್ಲಿ ಸೀಮೆಎಣ್ಣೆ ಬೋಟ್ ಬಳಸಿ ಮೀನುಗಾರಿಕೆ ಮಾಡುತ್ತಿರುವ ಎಲ್ಲಾ ದೋಣಿಗಳನ್ನು ಜಿಲ್ಲೆಯಾಂದ್ಯಂತ ಒಂದೇ ಹಂತದಲ್ಲಿ ತಪಾಸಣೆ ಕೈಗೊಳ್ಳಲಾಗುವುದು. ಕಾರವಾರ ತಾಲೂಕು ವ್ಯಾಪ್ತಿಯಲ್ಲಿ ಮೀನುಗಾರಿಕೆ ಉಪನಿದೇಶಕರು ಕಾರವಾರ ಕಚೇರಿ ಎದುರುಗಡೆ ಬೀಚ್, ಮಾಜಾಳಿ ಬೀಚ್ (ಗೋಟ್ನಿಭಾಗ), ಮುದಗಾ ಬೀಚ್, ಅಂಕೋಲಾ ತಾಲೂಕು ವ್ಯಾಪ್ತಿಯಲ್ಲಿ ಹಾರವಾಡ (ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಎದುರುಗಡೆ ಬೀಚ್), ಕುಮಟಾ ತಾಲೂಕು ವ್ಯಾಪ್ತಿಯಲ್ಲಿ ವನಳ್ಳಿ, ಬೀಚ್, ತದಡಿ … [Read more...] about ಸೀಮೆಎಣ್ಣೆ ಬೋಟ್ ಬಳಸಿ ಮೀನುಗಾರಿಕೆ ಮಾಡುತ್ತಿರುವ ಎಲ್ಲಾ ದೋಣಿಗಳನ್ನು ಜಿಲ್ಲೆಯಾಂದ್ಯಂತ ತಪಾಸಣೆ
ಲಂಗರು ಹಾಕಿದ ಮೀನುಗಾರಿಕಾ ಬೋಟ್ಗಳು
ಕಾರವಾರ:ಜೂನ್ 1ರಿಂದ ಕರಾವಳಿಯಲ್ಲಿ ಯಾಂತ್ರಿಕ ಮೀನುಗಾರಿಕೆ ನಿಷೇಧಿಸಲಾಗಿದ್ದು, ಮೇ ಅಂತ್ಯದಲ್ಲಿ ಮೀನುಗಾರಿಕಾ ಬೋಟ್ಗಳು ದಡದಲ್ಲಿ ಲಂಗರು ಹಾಕಿವೆ. ಸರಕಾರದ ಆದೇಶದಂತೆ ಕರಾವಳಿ ತೀರದುದ್ದಕ್ಕೂ ಮಳೆಗಾಲದ ಜೂನ್ 1 ರಿಂದ ಜುಲೈ 31ರವರೆಗೆ ಮೀನುಗಾರಿಕೆಗೆ ನಿಷೇಧ ಹೇರಿದೆ. ಜಿಲ್ಲೆ ಸೇರಿದಂತೆ ಹೊರ ರಾಜ್ಯಗಳಲ್ಲಿಯ ಮೀನುಗಾರರು ತಮ್ಮ ಬೋಟ್ಗಳನ್ನು ಲಂಗರು ಹಾಕತೊಡಗಿವೆ. ಇನ್ನು ಕೆಲವು ಮೀನುಗಾರರು ಅವಧಿ ಮೀರುವ ಮುನ್ನ ದೋಣಿಗಳನ್ನು ಸುರಕ್ಷಿತ ಪ್ರದೇಶಗಳಲ್ಲಿ … [Read more...] about ಲಂಗರು ಹಾಕಿದ ಮೀನುಗಾರಿಕಾ ಬೋಟ್ಗಳು
ಇನ್ನೊಂದು ಅಳಿವೆ ದುರಂತ: ಮೀನುಗಾರರು ಪಾರು
ಹೊನ್ನಾವರ:ಮೀನುಗಾರಿಕೆ ಮುಗಿಸಿ ಬರುತ್ತಿದ್ದ ಮೀನುಗಾರಿಕಾ ಬೋಟ್ ಕ್ರಿಸ್ತರಾಯ ಅಳಿವೆ ಪ್ರವೇಶಿಸುತ್ತಿದ್ದಂತೆ ನೀರಿನಡಿ ಹೊಯ್ಗೆ ದಿಬ್ಬಕ್ಕೆ ಡಿಕ್ಕಿ ಹೊಡೆದು ಅಲ್ಲಿಯೇ ಸಿಕ್ಕಿಹಾಕಿಕೊಂಡಿದೆ. ಮೀನುಗಾರರು ಈಜಿ ಪಾರಾಗಿದ್ದಾರೆ. ಇಂದು ಮಧ್ಯಾಹ್ನದವರೆಗೆ ಇನ್ನೆರಡು ಬೋಟ್ಗಳು ಪ್ರಯತ್ನಿಸಿದರೂ ಬೋಟನ್ನು ಎಳೆದು ತರಲು ಸಾಧ್ಯವಾಗಿಲ್ಲ. ಪೀಟರ್ ಫರ್ನಾಂಡೀಸ್ ಎಂಬುವರ ಈ ಬೋಟ್ ಅಪಘಾತದಿಂದ 20 ಲಕ್ಷ ರೂಪಾಯಿ ಹಾನಿಯಾಗಿದೆ. ಈ ಮೀನುಗಾರಿಕಾ ಸೀಜನ್ನಿನ ಎರಡನೇ ಅಪಘಾತ … [Read more...] about ಇನ್ನೊಂದು ಅಳಿವೆ ದುರಂತ: ಮೀನುಗಾರರು ಪಾರು
ಅಳಿವೆಯಲ್ಲಿ ತುಂಬಿದ ಹೂಳು,ಮೀನುಗಾರರಿಗೆ ಸಂಕಷ್ಟ
ಹೊನ್ನಾವರ: ಹೊನ್ನಾವರದ ಮೀನುಗಾರಿಕಾ ಪ್ರದೇಶದ ಅಳಿವೆಯಲ್ಲಿ ಹೂಳುತುಂಬಿದ ಪರಿಣಾಮ ಮೀನುಗಾರರು ಸಂಕಷ್ಟ ಪಡುವಂತಾಗಿದೆ. ನಗರದ ಬಂದರು ಪ್ರದೇಶದಲ್ಲಿ ಕಳೆದ ಹಲವಾರು ವರ್ಷಗಳಿಂದ ಹೂಳು ತೆಗೆಯದ ಪರಿಣಾಮ ವರ್ಷಕ್ಕೆ ನಾಲ್ಕೈದು ಮೀನುಗಾರಿಕಾ ಬೋಟ್ ಗಳು ದಡಕ್ಕೆ ಅಪ್ಪಳಿಸಿ ಹಾನಿಗಿಡಾಗುತಿದೆ ಎಂದು ಮೀನುಗಾರರು ಆರೋಪಿಸಿದ್ದಾರೆ. ಕಳೆದ ನಾಲ್ಕೈದು ದಿನಗಳಹಿಂದೆ ಸ್ಥಳೀಯ ಮೀನುಗಾರರೊಬ್ಬರಿಗೆ ಸೇರಿದ ಬೋಟ್ ಒಂದು ಅಳಿವೆಯಲ್ಲಿ ತುಂಬಿದ್ದ ಹೂಳಿಗೆ ಸಿಕ್ಕಿ ಹಾನಿಗೊಳಗಾಗಿದ್ದು … [Read more...] about ಅಳಿವೆಯಲ್ಲಿ ತುಂಬಿದ ಹೂಳು,ಮೀನುಗಾರರಿಗೆ ಸಂಕಷ್ಟ