ಹಳಿಯಾಳ:
ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಗೆ ಮೊಸ, ವಂಚನೆ ಹಾಗೂ ಜಾತಿ ನಿಂದನೆ, ಜೀವ ಬೇದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಳಿಯಾಳ ಪುರಸಭೆ ಸದಸ್ಯ ಫಯಾಜ ಶೇಖ ಹಾಗೂ ಇತರ ನಾಲ್ವರ ಮೇಲೆ ಹಳಿಯಾಳ ಪೋಲಿಸ್ ಠಾಣೆಯಲ್ಲಿ ಕ್ರಮಿನಲ್ ಪ್ರಕರಣ ದಾಖಲಾಗಿದ್ದು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ಭಾರತೀಯ ದಂಡ ಸಂಹಿತೆ 3(1)(ಆರ್)ಎಸ್), ಎಸ್ಸಿಎಸ್ಟಿ (ಪಿಓಎ) ಅಮೆಂಡಮೆಂಟ್ ಕಲಂ 2015 ಮತ್ತು 420,504,506. ಆರ್/ಡಬ್ಲೂ 149 ಐಪಿಸಿ ಅನ್ವಯ ಹಳಿಯಾಳದ ಪುರಸಭೆಯ ಆಡಳಿತಾರೂಢ ಸದಸ್ಯ ಫಯಾಜ ಶೇಖ, ಬೆಳಗಾವಿಯ ಇಮಾಮಸಾಬ ಬಾಬುಸಾಬ ಕೊರವಿನಕೊಪ್ಪ, ರಿಯಾಜಮ್ಮದ ಎಮ್ ಬಾಗೇವಾಡಿ, ಇಮ್ರಾನ್ ಬಾಗೇವಾಡಿ ಹಾಗೂ ಸಲ್ಮಾನ್ ಬಾಗೇವಾಡಿ ವಿರುದ್ದ ಹಳಿಯಾಳ ಠಾಣೆಯಲ್ಲಿ ಪಟ್ಟಣದ ರಹವಾಸಿ ದಲಿತ ಸಮುದಾಯಕ್ಕೆ ಸೇರಿದ ಶಂಕರ ಅಮರಾಪುರಕರ ಪ್ರಕರಣ ದಾಖಲಿಸಿದ್ದಾರೆ.
ಹಿನ್ನೆಲೆ:- ಆರೋಪಿತರು ಹಳಿಯಾಳ ಗುಡ್ನಾಪುರ ಗ್ರಾಮದ ಬ್ಲಾಕ್ ನಂ 43ಮತ್ತು 43/ಅ ಜಮೀನನ್ನು ಬಿನ್ ಶೇತ್ಕಿ ಮಾಡಿ ಪ್ಲಾಟ್ ಕೊಡುವುದಾಗಿ ಶಂಕರ ಅವರಿಂದ 7-1-2014ರಲ್ಲಿ 3,10,592/-ರೂ. ಹಣ ಪಡೆದು 2 ವರ್ಷ ಕಳೆದರು ಪ್ಲಾಟ್ ನಿಡದೆ ಮೊಸ ವೆಸಗಿದ್ದು ಈ ಬಗ್ಗೆ ಆರೋಪಿತರಲ್ಲಿ ಕೆಳಿದಾಗ ಹಣ ಮರು ಪಾವತಿ ಮಾಡಲಾಗುವುದಿಲ್ಲ ಈ ಬಗ್ಗೆ ಮಾತನಾಡಿದರೇ ಕೊಲೆ ಮಾಡುವುದಾಗಿ ಜೀವ ಬೇದರಿಕೆ ಹಾಕಿ ಜಾತಿ ನಿಂದನೆ ಮಾಡಿದ್ದು ತಮಗೆ ಮೊಸ ಮಾಡಿದ್ದಾರೆಂದು ಆರೋಪಿಸಿ ಶಂಕರ ಹಳಿಯಾಳ ಠಾಣೆಯಲ್ಲಿ ದೂರು ನೀಡಿದ್ದಾರೆ.
ತಮಗಾದ ಅನ್ಯಾಯದ ಕುರಿತು ದಲಿತ ದಲಿತ ಸಂಘಟನೆಗಳ ಒಕ್ಕೂಟಕ್ಕೆ ಮನವಿ ಸಲ್ಲಿಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿರುವ ಶಂಕರ ಅವರ ಮನವಿಗೆ ಸ್ಪಂದಿಸಿರುವ 10ಕ್ಕೂ ಹೆಚ್ಚು ದಲಿತ ಸಂಘಟನೆಗಳುಳ್ಳ ಒಕ್ಕೂಟದ ಅಧ್ಯಕ್ಷ ಚಂದ್ರಕಾಂತ ಕಾದ್ರೋಳ್ಳಿ ಕಾನೂನು ಬಾಹಿರವಾಗಿ ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿರುವ ಬೆಳಗಾವಿ ಮೂಲದ ಬಾಗೇವಾಡಿ ಸಹೋದರರು ಮತ್ತು ಅವರಿಗೆ ಬೆಂಬಲ ನೀಡುತ್ತಿರುವ ಹಳಿಯಾಳ ಪುರಸಭೆ ಸದಸ್ಯ ಫಯಾಜ್ ಶೇಖ ಅವರ ಮೇಲೆ ಹಳಿಯಾಳ ಠಾಣೆಯಲ್ಲಿ ಈಗಾಗಲೇ ದೂರನ್ನು ಸಲ್ಲಿಸಲಾಗಿದ್ದು ತಕ್ಷಣ ಇವರನ್ನು ಬಂಧಿಸಬೇಕು ಇಲ್ಲದಿದ್ದರೇ ಮುಂದಿನ ಕೆಲವೆ ದಿನಗಳಲ್ಲಿ ಹಳಿಯಾಳ ಪೋಲಿಸ್ ಠಾಣೆ ಹಾಗೂ ಕಾರವಾರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಊಗ್ರ ಪ್ರತಿಭಟನೆ ನಡೆಸಲಾಗವುದೆಂದು ಮಾಧ್ಯಮಕ್ಕೆ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
Leave a Comment