ಹೊನ್ನಾವರ :
ಶರಾವತಿ ಬಲದಂಡೆಯಿಂದ ಮತ್ತು ಮಂಕಿ ಭಾಗದಿಂದ ಬರುವ ವಿದ್ಯಾರ್ಥಿಗಳು ಬಸ್ ಪಾಸ್ ಪಡೆದಿರುತ್ತಾರೆ, ಇವರನ್ನು ಶರಾವತಿ ಸರ್ಕಲ್ ಬಳಿ ಇಳಿಸಿ ಹೋಗಲಾಗುತ್ತದೆ. ಎರಡು ಕಿ.ಮೀ ದೂರ ಇರುವ ಕಾಲೇಜಿಗೆ ಹೋಗುವಾಗ ಇನೊಂದು ಬಸ್ಸಿನವರು ವಿದ್ಯಾರ್ಥಿಗಳನ್ನು ಬಸ್ ಹತ್ತಿಸಿಕೊಳ್ಳುತ್ತಿರಲಿಲ್ಲ. ಟಿಕೇಟ್ ಮಾಡಲು ಹೇಳುತ್ತಿದ್ದರು. ಇದನ್ನು ವಿದ್ಯಾರ್ಥಿಗಳು ಪ್ರತಿಭಟಿಸಿದಾಗ ಶಾಸಕ ಮಂಕಾಳ ವೈದ್ಯ ಬಸ್ ಸ್ಟ್ಯಾಂಡಿಗೆ ಬಂದು ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಶರಾವತಿ ಸರ್ಕಲ್ನಿಂದ ಗೇರಸೊಪ್ಪಾ ಕಡೆ ಹೋಗುವ ಬಸ್ಸುಗಳು ವಿದ್ಯಾರ್ಥಿಗಳನ್ನು ಕಾಲೇಜು ಎದುರು ಇಳಿಸಿ ಹೋಗಲು ಒಪ್ಪಸಿದ್ದಾರೆ.
ಇದೇ ರೀತಿ ಕುಮಟಾ ಕಡೆಯಿಂದ ಬರುವ ವಿದ್ಯಾರ್ಥಿಗಳು ಕಾಲೇಜ್ ಸರ್ಕಲ್ ಬಳಿ ಇಳಿದು ಗೆರಸೊಪ್ಪಾ ಕಡೆ ಹೋಗುವ ಬಸ್ಸಿನಲ್ಲಿ ಹೋಗಿ, ಕಾಲೇಜು ಎದುರು ಇಳಿಯಬೇಕು ಎಂದು ತಾಲೂಕು ಪ್ರಗತಿ ಸಮೀಕ್ಷಾ ಸಭೆಯಲ್ಲಿ ತಿರ್ಮಾನವಾಗಿತ್ತು. ಸರ್ಕಾರಿ ಕಾಲೇಜು ಎದುರು ನಿಂತ ವಿದ್ಯಾರ್ಥಿಗಳನ್ನು ಬಸ್ ಹತ್ತಿಸಿಕೊಳ್ಳದೆ ಬರುತ್ತಿದ್ದರು. ಈ ಕುರಿತು ಶಾಸಕಿ ಶಾರದಾ ಶೆಟ್ಟಿ ಅಧಿಕಾರಿಗಳಿಗೆ ಅಲ್ಲಿ ನಿಲುಗಡೆ ಕೊಡುವಂತೆ ಹೇಳಿದ್ದರು. ಬಸ್ ಚಾಲಕರು ಕೆಲವೊಮ್ಮೆ ನಿಲ್ಲಿಸದೆ ನೇರ ಬರುವ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸಲು ಶಾಸಕರು ಬರಬೇಕಾಯಿತು. ವಿದ್ಯಾರ್ಥಿಗಳು ಶಾಸಕರಿಗೆ ಕೃತಜ್ಞತೆ ಹೇಳಿದರು.
Leave a Comment