ಕಾರವಾರ:
ಸರ್ವೋದಯನಗರದ ಸರಕಾರಿ ಭೂಮಿಯನನು ಅತಿಕ್ರಮಣ ಮಾಡಿದ ಗುಡಿಸಲು ನಿರ್ಮಿಸಿಕೊಂಡವರನ್ನು ತೆರೆವು ಮಾಡಿ ಎಂದು ಜಿಲ್ಲಾಡಳಿತ ನೋಟಿಸಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕರ್ನಾಟಕ ರಾಜ್ಯ ಮೀನುಗಾರಿಕಾ ಅಭಿವೃದ್ಧಿಯ ನಿಗಮದ ಅಧ್ಯಕ್ಷ ರಾಜೇಂದ್ರ ನಾಯ್ಕ ಭೇಟಿ ನೀಡಿ ಅಲ್ಲಿನ ಮೀನುಗಾರ ಮಹಿಳೆಯರು ತಮ್ಮ ಅಳಲು ತೋಡಿಕೊಂಡರು.
ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಈಗಾಗಲೇ ಅದು ಕಾನೂನು ಚೌಕಟ್ಟಿನಲ್ಲಿ ಇವರುವದ್ದರಿಂದ ಅದಕ್ಕೆ ಕಾನೂನು ಅಡಿಯಲ್ಲಿ ಹೋರಾಟ ಮಾಡಬೇಕು. ಇದರ ಬಗ್ಗೆ ಹೈ ಕೋಟ್ಗೆ ಹಾಕಿ ಅದಕ್ಕೆ ನನ್ನ ಸಹಕಾರ ಯಾವಾಗಲೂ ಇದೆ ಎಂದು ಹೇಳಿದರು. ಸಚಿವ ಆರ್.ವಿ.ದೇಶಪಾಂಡೆವರ ಮನವಿ ಮಾಡಿ ನಾನು ಇದರ ಬಗ್ಗೆ ಸಚಿವರ ಜೊತೆ ಹೇಳುತ್ತನೆ ಎಂದು ಮೀನುಗಾರ ಮಹಿಳೆಯರಿಗೆ ಧೈರ್ಯ ತುಂಬಿದರು.
ಈ ವೇಳೆ ನಗರಸಭಾ ಸದ್ಯಸ ದೇವಿದಾಸ ನಾಯ್ಕ, ಮಾಜಿ ನಗರಸಭಾ ಸದ್ಯಸೆ ದಿವ್ಯಾ ದೇವಿದಾಸ ನಾಯ್ಕ, ಜಿಲ್ಲಾ ಕಾಂಗ್ರೇಸ್ ಹಿಂದುಳಿದ ವರ್ಗದ ಜಿಲ್ಲಾ ಉಪಾಧ್ಯಕ್ಷ ಘನಶಾಮ್ಯ ಬಾಂದೇಕರ, ಗೌರೀಶ ನಾಯ್ಕ, ಜ್ಞಾನೇಶ್ವರ ನಾಯ್ಕ, ಹಾಗೂ ಇನ್ನಿತರರು ಇದ್ದರು.
Leave a Comment