ಕಾರವಾರ:
ಭಾಷಾ ಸಾಮರಸ್ಯದ ಮೂಲಕ ಒಗ್ಗಟ್ಟು ಮೂಡಿಸುವ ಪ್ರಯತ್ನ ನಡೆಯಬೇಕಿದೆ ಎಂದು ಕಾರವಾರ ಆಕಾಶವಾಣಿ ನಿಲಯದ ಮುಖ್ಯಸ್ಥ ಎಚ್.ಬಿ.ರಾಮಡಗಿ ಹೇಳಿದರು.
ಆಕಾಶವಾಣಿ ಕೇಂದ್ರದಲ್ಲಿ ಭಾನುವಾರ ರಿಕ್ರಿಯೇಷನ್ ಕ್ಲಬ್ ವತಿಯಿಂದ ಜರುಗಿದ ಆಮ್ಗೇಲೆ ಫೆಸ್ತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಿಲಯದ ಸಿಬ್ಬಂದಿ ಪರಸ್ಪರ ಪ್ರೀತಿ, ವಿಶ್ವಾಸದಿಂದ ಸಹಬಾಳ್ವೆ ನಡೆಸುವುದರ ಮೂಲಕ ನಮ್ಮಲ್ಲಿನ ಭಿನ್ನಾಯಭಿಪ್ರಾಯ, ದು:ಖ, ನೋವು ಮರೆಯಲು ಉತ್ಸವಗಳ ಅಗತ್ಯವಿದೆ ಎಂದರು. ನಮ್ಮ ಸಂಸ್ಕøತಿ, ಆಚಾರ, ವಿಚಾರ, ಆಹಾರ, ಅಡುಗೆ, ಉಡುಗೆಗಳ ಬಗ್ಗೆ ಮುಂದಿನ ತಲೆಮಾರಿಗೆ ಪರಿಚಯಿಸಬೇಕು. ಈ ಹಿನ್ನೆಲೆಯಲ್ಲಿ ಕಾರವಾರ ಆಕಾಶವಾಣಿ ಕೇಂದ್ರವು ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಕಾರ್ಯಕ್ರಮ ನಿರ್ವಾಹಕಿ ಫೆÇ್ಲೀರಿನ್ ರೋಶ್ ಮಾತನಾಡಿ, ಕರಾವಳಿಯ ಪ್ರಮುಖ ಆಹಾರ ಪದ್ಧತಿ, ಅಡುಗೆ, ಉಡುಗೆ-ತೊಡುಗೆಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿ ವೇದಿಕೆಯಲ್ಲಿ ಪ್ರಸ್ತುತ ಪಡಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು. ಚಂದ್ರಕಾಂತ್ ಶೇಟ್ ಇದ್ದರು. ರಿಕ್ರಿಯೇಷನ್ ಕ್ಲಬ್ ಸಹಯೋಗದಲ್ಲಿ ತಾತ್ಕಾಲಿಕ ಉದ್ಘೋಷಕರ ಸ್ನೇಹ ಬಳಗವು ವಿವಿಧ ರೀತಿಯ ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟಿತು. ಬಳಗವು ಪ್ರಸ್ತುತ ಪಡಿಸಿದ ರಸಮಂಜರಿ ಕಾರ್ಯಕ್ರಮ ಗಮನ ಸೆಳೆಯಿತು. ಬಳಗದ ಸದಸ್ಯರು ಕನ್ನಡ ಹಾಗೂ ಹಿಂದಿ ಗೀತೆಗಳನ್ನು ಹಾಡಿದರು. ಈ ಕಾರ್ಯಕ್ರಮಕ್ಕೆ ನಾಗರಾಜ ನಾಯಕ ಮತ್ತು ಕೃಷ್ಣಾನಂದ ನಾಯ್ಕ ಹಿನ್ನೆಲೆ ಸಂಗೀತ ಒದಗಿಸಿದರು. ಅಂಕೋಲಾದ ಮಹಾದೇವ್ ಮಿಮಿಕ್ರಿ ನಡೆಸಿಕೊಟ್ಟರು. ಬಳಿಕ ತಾತ್ಕಾಲಿಕ ಮಹಿಳಾ ಉದ್ಘೋಷಕಿಯರು ಸೇರಿದಂತೆ ರಿಕ್ರಿಯೇಷನ್ ಕ್ಲಬ್ನ ಸದಸ್ಯೆಯರು ಸಾಂಪ್ರದಾಯಿಕ ಉಡುಗೆ ಧರಿಸಿ ಫ್ಯಾಷನ್ ಶೋ ನಡೆಸಿಕೊಟ್ಟರು.
ಕರಾವಳಿಯ ವೈವಿಧ್ಯಮಯ ರುಚಿಕರವಾದ ಅಡುಗೆಯನ್ನು ಪ್ರದರ್ಶಿಸಲಾಯಿತು. ಕರಾವಳಿಯ ಬಂಗುಡೆ ಮೀನಿನ ಸಾರು, ಚಿಪ್ಪೆಕಲ್ಲಿನ ಸುಕ್ಕಾ,ಶೆಟ್ಲೆ ಮೀನಿನ ಬಿರ್ಯಾನಿ, ಅಲ್ಲದೇ ವಿವಿಧ ರೀತಿಯ ಶುದ್ಧ ಶಾಖಾಹಾರಿ ಅಡುಗೆಗಳನ್ನು ಸಹ ಪ್ರದರ್ಶಿಸಿ ಉಣ ಬಡಿಸಲಾಯಿತು. ರಿಕ್ರಿಯೇಷನ್ ಕ್ಲಬ್ನ ಸಂಚಾಲಕ ಶ್ಯಾಮ್ ಕದಂ ಪ್ರಾಸ್ತಾವಿಕ ಮಾತನಾಡಿದರು. ಉದ್ಘೋಷಕಿ ಅನ್ನಪೂರ್ಣ ಹೂಗಾರ್ ವಂದಿಸಿದರು. ತಾತ್ಕಾಲಿಕ ಉದ್ಘೋಷಕ ಸುಮಂಗಲ್ಕುಮಾರ್ ನಾಯ್ಕ ನಿರ್ವಹಿಸಿದರು.
Leave a Comment