ಕಾರವಾರ:
ನಗರದ ಲಂಡನ್ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಗುಡ್ಡದಿಂದ ಬಂಡೆಗಲ್ಲೊಂದು ಉರುಳಿ ಬಿದ್ದಿದೆ. ಈ ವೇಳೆ ರಸ್ತೆಯಲ್ಲಿ ಯಾವುದೇ ವಾಹನಗಳು ಸಂಚರಿಸದೇ ಇದ್ದ ಕಾರಣ ಅನಾಹುತವೊಂದು ತಪ್ಪಿದೆ.
ಚತುಷ್ಪಥ ಹೆದ್ದಾರಿ ಕಾಮಗಾರಿಗಾಗಿ ಈ ಗುಡ್ಡದೊಳಗಿಂದ ಸುರಂಗ ಮಾರ್ಗ ನಿರ್ಮಾಣಕ್ಕೆ ಕಾಮಗಾರಿಯು ನಡೆಯುತ್ತಿದೆ. ಈ ಸಂದರ್ಭದಲ್ಲಿ ನಡೆಯುವ ಸ್ಫೋಟಗಳಿಂದ ಗುಡ್ಡವು ಈ ಹಿಂದೆ ಅಲುಗಾಡಿರುವುದು ತಿಳಿದು ಬಂದಿತ್ತು. ಸ್ಫೋಟದಿಂದಾಗಿ ಇಂತಹ ಬಂಡೆಕಲ್ಲುಗಳು ತಮ್ಮ ಹಿಡಿತವನ್ನು ಕಳೆದುಕೊಂಡಿರುತ್ತವೆ. ಬಳಿಕ ಬಿದ್ದ ಬಂಡೆಕಲ್ಲನ್ನು ರಸ್ತೆಯ ಮೆಲಿಂದ ಪಕ್ಕಕ್ಕೆ ಸರಿಸಿಡಲಾಗಿದ್ದು ಈ ಸ್ಥಳದಲ್ಲಿ ಬ್ಯಾರಿಕೇಡನ್ನು ಹಾಕಲಾಗಿದೆ.
Leave a Comment