ಹೊನ್ನಾವರ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಸದಸ್ಯರು ಹಾಗೂ ನಾಗರಿಕರು ದೇಶ ಉಳಿಸಿ, ದ್ವೇಷ ಅಳಿಸಿ ಘೋಷಣೆಯೊಂದಿಗೆ ಆಕರ್ಷಕ ಕಾಲ್ನಡಿಗೆ ಆಝಾಧಿ ಜಾಥಾ ನಡೆಸಿ ತಾಲೂಕಾ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಕಾಸರಕೋಡಿನ ಮೈದೀನ್ ಜಾಮಿಯಾ ಮಸೀದಿಯಿಂದ ಹೊರಟ ಆಝಾಧಿ ಜಾಥಾ ನಾಲ್ಕು ಕಿ.ಮೀ. ದೂರದ ಹೊನ್ನಾವರ ತಹಶೀಲ್ದಾರ ಕಚೇರಿಯವರೆಗೆ ನಡೆಯಿತು. ಶರಾವತಿ ಸೇತುವೆಯ ಮೇಲೆ ಶಿಸ್ತಿನಿಂದ ಹೊರಟ ಜಾಥಾ ಜನರನ್ನು ಸೆಳೆಯಿತು.
ಆಝಾಧಿ ಜಾಥಾದಲ್ಲಿ ಮೈಧೀನ್ ಪಳ್ಳಿ ಜಾಮಿಯಾ ಮಸೀದಿಯ ಪದಾಧೀಕಾರಿಗಳು, ಮೌಲಾನಗಳು, ಮದರಸಾದ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪಾಲಕರು ಭಾಗವಹಿಸಿದರು.
Leave a Comment