ಹೊನ್ನಾವರ: ಶಿಕ್ಷಕ ವೃತ್ತಿ ಪವಿತ್ರವಾದುದು ನಮ್ಮ ತಂದೆತಾಯಿಯವರ ಪುಣ್ಯದ ಫಲದಿಂದ ನಾವು ಈ ವೃತ್ತಿಯಲ್ಲಿದ್ದೇವೆ. ಯಾವುದೇ ಹೊಸ ಯೋಜನೆಯ ಕುರಿತು ನಕಾರಾತ್ಮಕವಾಗಿ ಭಾವಿಸದೇ ಸಕಾರಾತ್ಮಕವಾಗಿ ಯೋಚಿಸಿದರೆ ಯಶಸ್ಸು ಸಾಧಿಸಲು ಸಾಧ್ಯ ಎಂದು ರಾಜ್ಯ ಪ್ರಶಸ್ತಿ ಪುರಸ್ಕøತ ನಿವೃತ್ತ ಶಿಕ್ಷಕ ಥಾಮಸ್ ಹೊರ್ಟಾ ಹೇಳಿದರು.
ಅವರು ಬಣಸಾಲೆ ಕ್ಲಸ್ಟರ್ ಶಿಕ್ಷಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಬಣಸಾಲೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಥಾಮಸ್ ಹೊರ್ಟಾ ಹಾಗೂ ಡಿ.ಆರ್.ನಾಯ್ಕ ಇವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿಕ್ಷಣ ಸಂಯೋಜಕಿ ಶುಭವತಿ ಮಾತನಾಡಿ ಸೇವಾ ನಿವೃತ್ತಿ ಹೊಂದಿದ ಶಿಕ್ಷಕರನ್ನು ಗೌರವ ಪೂರ್ವಕವಾಗಿ ಬೀಳ್ಕೊಡುವ ಪರಿಪಾಠ ಹಾಕಿಕೊಂಡಿರುವ ಬಣಸಾಲೆ ಕ್ಲಸ್ಟರ್ ಶಿಕ್ಷಕರನ್ನು ಅಭಿನಂಧಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಎಸ್.ನಾಯ್ಕ ಮಾತನಾಡಿ ಥಾಮಸ್ ಟಿ. ಹೊರ್ಟಾ ಅವರು ತಮ್ಮ ವಿಶಿಷ್ಠ ಕಾರ್ಯಶೈಲಿಂದ ಗುರುತಿಸಿಕೊಂಡು ಇಲಾಖೆಯ ಗೌರವಕ್ಕೆ ಪಾತ್ರರಾಗಿದ್ದಾರೆ. ಸ್ವಯಂ ನಿವೃತ್ತಿ ಪಡೆದ ಶಿಕ್ಷ ಡಿ.ಆರ್.ನಾಯ್ಕ ಕೇವಲ ತರಗತಿ ಕೋಣೆಗಷ್ಟೇ ಅಲ್ಲದೇ ಸಾಮಾಜಿಕ ರಂಗದಲ್ಲೂ ತೊಡಗಿಸಿಕೊಂಡವರು. ಇಬ್ಬರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಬಿಆರ್ಪಿ ಶೀಥಲ್ ನಾಯಕ, ಸಿಆರ್ಪಿ ಮಧುಕರ ಜೋಶಿ, ಶಿಕ್ಷಕ ಮೋಹನ ನಾಯ್ಕ, ಉದಯ ನಾಯ್ಕ, ಎಸ್.ಎಂ.ಗೊಂಡ ಇತರರು ಉಪಸ್ಥಿತರಿದ್ದರು. ಉದಯ ವಿ ನಾಯ್ಕ ಸ್ವಾಗತಿಸಿದರು. ವಿ.ಡಿ.ನಾಯ್ಕ ವಂದಿಸಿದರು. ರಮೇಶ ನಾಯ್ಕ ನಿರ್ವಹಿಸಿದರು.
Leave a Comment