ತೊರ್ಕೆಗ್ರಾಮಪಂಚಾಯತ ವ್ಯಾಪ್ತಿಯ ಹಿಂದುಳಿದ ಬಡ ಹಾಲಕ್ಕಿ ಗೌಡರೇ ಹೆಚ್ಚಾಗಿರುವ ಮೂಲೆಕೇರಿಯಲ್ಲಿ ಕೇಂದ್ರದಉಜ್ವಲ ಯೋಜನೆಯಡಿಉಚಿತಗ್ಯಾಸ್ಕಿಟ್ ವಿತರಿಸಲಾಯಿತು.
ಹಿಂದುಳಿದ ಬಡ ಫಲಾನುಭವಿಗಳು ಸಮಯ, ಹಣ ವ್ಯಯಿಸದೆಅಲೆದಾಟವಿಲ್ಲದೆ ಸುಲಭವಾಗಿಅವರ ಮನೆ ಬಾಗಿಲಲ್ಲೆ ಈ ಯೋಜನೆಯಅನುಕೂಲತೆ ಪಡೆದುಕೊಳ್ಳಬೇಕೆಂಬ ಸದುದ್ದೇಶದಿಂದ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ಅಧ್ಯಕ್ಷರಾದ ನಾಗರಾಜ ನಾಯಕತೊರ್ಕೆಅವರುತಮ್ಮ ಸಿಬ್ಬಂದಿಗಳೊಂದಿಗೆ ಕಾರ್ಯ ಪ್ರವೃತ್ತರಾಗಿದ್ದಾರೆ.ತಾಯಂದಿರ ಸ್ವಾಸ್ಥ್ಯ ಮತ್ತು ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿಜಾರಿಯಾದ ಈ ಯೋಜನೆಯ ಫಲ ಅರ್ಹ ಫಲಾನುಭವಿಗಳಿಗೆ ತಲುಪಬೇಕು ಆ ಮೂಲಕ ಕೇಂದ್ರದ ಹೊಗೆ ಮುಕ್ತ ಮನೆ ನಿರ್ಮಾಣದಗುರಿಈಡೇರಬೇಕೆಂಬ ನಿಟ್ಟಿನಲ್ಲಿಇವರುಶ್ರಮಿಸುತ್ತಿದ್ದಾರೆ.
ಗಿರಿಜಾಎಸ್.ಗೌಡ, ದುರ್ಗಿಗೌಡ, ದುರ್ಗಿ.ಆರ್.ಗೌಡ, ವೆಂಕಮ್ಮ ಪಿ.ಗೌಡ, ದೇವಿ ಗೌಡ, ಬೇಬಿ ಗೌಡ, ನಾಗಮ್ಮಗೌಡ, ದುರ್ಗಿ ತುಳಸು ಗೌಡ, ಸೋಮಿ ಗೌಡ, ಪರಮೇಶ್ವರಿಗೌಡ, ದೇವಿ ಗೌಡ, ನಾಗವೇಣಿಗೌಡ, ನಾಗಮ್ಮಗೌಡ, ಕಮಲಾ ಗೌಡ, ಮುಂತಾದ ಫಲಾನುಭವಿಗಳು ಗ್ಯಾಸ್ ಸಂಪರ್ಕದೊಂದಿಗೆಟ್ರಸ್ಟ್ ವತಿಯಿಂದ ಲೈಟರನ್ನು ಸಹ ಉಚಿತವಾಗಿ ಪಡೆದುಕೊಂಡರು. ಎಲ್ಲಾ ಫಲಾನುಭವಿಗಳು ಹಾಗೂ ಊರ ಪ್ರಮುಖರು ನಾಗರಾಜ ನಾಯಕತೊರ್ಕೆಅವರಕಾರ್ಯವನ್ನು ಶ್ಲಾಘಿಸಿದರು.ಈ ಸಂಧರ್ಭದಲ್ಲಿಊರ ಮುಖ್ಯಗೌಡರು, ಗುರುಗೌಡ, ರಾಮು ಕೆಂಚನ, ಟ್ರಸ್ಟ ಕಾರ್ಯದರ್ಶಿ ಅರುಣಕವರಿ, ಶ್ರೀನಿವಾಸ ನಾಯಕ, ಮಿರ್ಜಾನ ಶಕ್ತಿ ಕೇಂದ್ರದಅಧ್ಯಕ್ಷರಾದ ವೆಂಕಟ್ರಮಣಕವರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Leave a Comment