ಕಾರವಾರ: ಎಚ್ಐವಿ ಸೋಂಕಿತ ಹಾಗೂ ಲೈಂಗಿಕ ವೃತ್ತಿ ನಿರತ ಮಹಿಳೆಯರ ಒಳಿತಿಗಾಗಿ ಶ್ರಮಿಸುತ್ತಿರುವ ಸಂರಕ್ಷ ಸಂಸ್ಥೆಗೆ ಕೆಸಾಪ್ಸ್ ಉಪ ಎಆರ್ಟಿ ಕೇಂದ್ರವನ್ನು ನಡೆಸಲು ನೀಡಲಾಗಿದ್ದು, ಅದನ್ನು ಅದನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುವ ವಿಶ್ವಾಸವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅಶೋಕ್ ಕುಮಾರ್ ಹೇಳಿದರು.
ಅವರು ರಾಜ್ಯ ಏಡ್ಸ್ ಪ್ರಿವೆನ್ಷನ್ ಸೂಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಹಾಗೂ ಸಂರಕ್ಷ ಸಂಸ್ಥೆ, ಕಾರವಾರ, ಉ.ಕ. ಸಹಯೋಗದಲ್ಲಿ ಕಾರವಾರದ ಸಂರಕ್ಷ ಆರೈಕೆ ಬೆಂಬಲ ಕೇಂದ್ರದಲ್ಲಿ ನೂತನ ಉಪ ಎ.ಆರ್.ಟಿ. ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಸಂರಕ್ಷ ಸಂಸ್ಥೆ ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಎಚ್ಐವಿ ಸೋಂಕಿತರ ಲೈಂಗಿಕ ವೃತ್ತಿ ನಿರತ ಮಹಿಳೆಯರಿಗಾಗಿ ಸಾಕಷ್ಟು ಕೆಲಸಗಳನ್ನು ಮಾಡುತ್ತಿದೆ. ಇನ್ನು ಹೆಚ್ಚಿನ ಜಾಗೃತಿ ಕಾರ್ಯಗಳೊಂದಿಗೆ ಸಮಾಜದಲ್ಲಿ ನೆಮ್ಮದಿ ಮೂಡಿಸಬೇಕು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜೇಂದ್ರ ಬೇಕಲ್ ಮಾತನಾಡಿ ಸರಕಾರ ನೀಡಿದ ಈ ಸೌಲಭ್ಯವನ್ನು ಫಲಾನುಭವಿಗಳು ಪಡೆಯುವಂತಾಗಬೇಕು. ಸಂರಕ್ಷ ಸಂಸ್ಥೆ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿದೆ ಮತ್ತು ನಮ್ಮ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಕೂಡಲೇ ಒದಗಿಸಿಕೊಡುವ ವ್ಯವಸ್ಥೆ ಮಾಡಲಾಗುವುದು ಎಂದರು.
ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಅಧಿಕಾರಿಗಳಾದ ಡಾ. ವiಹಾಬಲೇಶ್ವರ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂರಕ್ಷ ಸಂಸ್ಥೆಯ ಜಿಲ್ಲಾ ಸಂಯೋಕರಾದ ಮಹೇಶ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಎಆರ್ಟಿ ಫಲಾನುಭವಿಗಳು, ಕೌನ್ಸೆಲರ್ ನೀಲೇಶ್, ಸುನೀಲ್, ಮಹಿಳಾಕ್ರಾಂತಿಯ ದೇವರಾಜ್ ಹಲಸಿನಮಕ್ಕಿ, ಸಿಎಸ್ಸಿ ಸಿಬ್ಬಂದಿಗಳು ಮುಂತಾದವರು ಉಪಸ್ಥಿತರಿದ್ದರು. ಸಿಎಸ್ಸಿ ಪ್ರಾಜೆಕ್ಟ್ ಕೋ ಆರ್ಡಿನೇಟರ್ ಜಯಶ್ರೀ ಆಚಾರಿ ಸ್ವಾಗತಿಸಿದರು. ಡ್ಯಾಪ್ಕೋ ಸುಪ್ರವೈಸರ್ ಮನೋಜ್ ನಾಯಕ್ ವಂದಿಸಿದರು.
Leave a Comment