ಹೊನ್ನಾವರ. ತಾಲೂಕಿನ ಶ್ರೀ ವೀರಾಂಜನೇಯ ದೇವಸ್ಥಾನ, ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ಚಾತುರ್ಮಾಸ್ಯದ ಪ್ರಯುಕ್ತ ಭಾದ್ರಪದ ಶುದ್ಧ ಏಕಾದಶಿಯ ಶನಿವಾರದಂದು “ನೈಮಿಷಾರಣ್ಯ” ಎಂಬ ಸುಂದರ ಯಕ್ಷಗಾನ ಪ್ರಸಂಗವನ್ನು ‘ಶ್ರೀ ರಾಮಲಿಂಗೇಶ್ವರ ಮಕ್ಕಳ ಯಕ್ಷಗಾನ ಮಂಡಳಿ ನಿಟ್ಟೂರು, ಹೊಸನಗರ’ ಎಂಬ ಪ್ರಸಿದ್ಧ ತಂಡದ ಕಲಾವಿದರು ಪ್ರದರ್ಶನವನ್ನು ನೀಡಿದರು.
ಬಾಲ ಕಲಾವಿದರಿಂದ ಕೂಡಿದ ಈ ಯಕ್ಷಗಾನ ಮಂಡಳಿಯ ಕಲಾವಿದರು ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರ ಸಮ್ಮುಖದಲ್ಲಿ ತಮ್ಮ ಅದ್ಭುತ ಪ್ರದರ್ಶನವನ್ನು ನೀಡಿದರು. ಅಧಿಕ ಸಂಖ್ಯೆಯ ಭಕ್ತಾದಿಗಳ ಉಪಸ್ಥಿತಿಯು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸುವುದರ ಜೊತೆಗೆ ಯಶಸ್ವಿಗೂ ಕಾರಣವಾಯಿತು
Leave a Comment