‘ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಬೊಂಬೆಯಾಟ ಟ್ರಸ್ಟ್ (ರಿ).’ ಇದರ 22 ನೇ ವರ್ಷದ ಸಂಭ್ರಮಾಚರಣೆಯಲ್ಲಿ ‘ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ’ ಮತ್ತು ‘ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ, ಉಪ್ಪಿನಕುದ್ರು’’ ಇದರ ಜಂಟಿ ಆಶ್ರಯದಲ್ಲಿ “ಶಾಲೆಯೆಡೆಗೆ ಗೊಂಬೆ ನಡಿಗೆ”” ಎಂಬ ವಿಶೇಷ ಗೊಂಬೆಯಾಟ ಪ್ರದರ್ಶನವನ್ನು ‘ಶ್ರೀ ಮಾರುತಿ ರೆಸಿಡೆನ್ಶಿಯಲ್ ಸ್ಕೂಲ್, ಶ್ರೀಕ್ಷೇತ್ರ ಬಂಗಾರಮಕ್ಕಿ, ಗೇರಸೊಪ್ಪಾ’’ ದಲ್ಲಿ ದಿನಾಂಕ 04/09/2017 ರ ಮದ್ಯಾಹ್ನ 3:00 ಗಂಟೆಗೆ ಪ್ರದರ್ಶಿಸಿದರು.
ಗುರುವಂದನೆಯ ಸಾಂಕೇತವಾಗಿ ‘ಶ್ರೀ ಮಾರುತಿ ರೆಸಿಡೆನ್ಶಿಯಲ್ ಸ್ಕೂಲ್ ನ ಆಡಳಿತ ನಿರ್ದೇಶಕರಾಗಿರುವ ಶ್ರೀ ಜಿ. ಟಿ. ಹೆಗಡೆಯವರಿಗೆ ಹಾಗೂ ಶ್ರೀಮತಿ ಪಾರ್ವತಿ ಶಾನ್ಭಾಗ್ ರವರಿಗೆ ಸನ್ಮಾನಿಸುವುದರ ಮೂಲಕ ಗೌರವವನ್ನು ನೀಡಲಾಯಿತು.
ನಂತರದಲ್ಲಿ ಶ್ರೀ ವಿ. ಜಿ. ಹೆಗಡೆ ಗುಡ್ಗೆ ರವರು ಮಾತನಾಡಿ ಅಳಿವಿನ ಅಂಚಿನಲ್ಲಿರುವ ಜಾನಪದ ಕಲೆಗಳಲ್ಲಿ ಒಂದಾದ ಗೊಂಬೆಯಾಟ ಕಲೆಯನ್ನು ಉಳಿಸಿ, ಬೆಳೆಸುವ ಪ್ರಯತ್ನ ಮಾಡುತ್ತಿರುವ ಗೊಂಬೆಯಾಟದ ಈ ಜಂಟಿ ತಂಡಕ್ಕೆ ಶುಭ ಹಾರೈಸಿದರು.
ಶ್ರೀಕ್ಷೇತ್ರದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರ ಸಮ್ಮುಖದಲ್ಲಿ ನಡೆದ ಈ ಪ್ರದರ್ಶನವು ಶ್ರೀ ಮಾರುತಿ ರೆಸಿಡೆನ್ಶಿಯಲ್ ಸ್ಕೂಲ್ ನ ನೂರಾರು ವಿದ್ಯಾರ್ಥಿಗಳ ಹಾಗೂ ಅನೇಕ ಜನರ ಕಣ್ಮನ ಸೆಳೆಯಿತು.
Leave a Comment