ಹೊನ್ನಾವರ:
ಲೇಖಕಿ, ಹೋರಾಟಗಾರ್ತಿ ಗೌರಿ ಲಂಕೇಶರ ಹತ್ಯೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ, ದುಷ್ಕರ್ಮಿಗಳ ಹಿಂದಿರುವ ಜಾಲವನ್ನು ಭೇದಿಸಿ ಪ್ರಜಾಪ್ರಭುತ್ವವನ್ನು ಉಳಿಸಬೇಕು ಎಂದು ದಿ. ಡಿ.ದೇವರಾಜ ಅರಸು ವಿಚಾರ ವೇದಿಕೆ ಮತ್ತು ಪ್ರಗತಿಪರ ಚಿಂತನ ಸಂಘಟನೆಯ ವತಿಯಿಂದ ತಹಸೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಬುಧವಾರ ಮನವಿ ಸಲ್ಲಿಸಲಾಯಿತು.
ಗೌರಿ ಲಂಕೇಶ ಅವರನ್ನು ಗುಂಡಿಕ್ಕಿ ಕೊಂದ ಹಂತಕರನ್ನು ಕೂಡಲೇ ಬಂಧಿಸಬೇಕು. ಈ ಕೃತ್ಯವನ್ನು ಪಕ್ಷಭೇದ ಮರೆತು ಎಲ್ಲಾ ರಾಜಕೀಯ ಪಕ್ಷದವರೂ ಖಂಡಿಸಬೇಕು. ರಾಜ್ಯ ಸರ್ಕಾರ ಕೂಡಲೇ ಹಂತಕರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವುದರ ಮೂಲಕ ರಾಜ್ಯದ ಜನತೆಯಲ್ಲಿ ಭರವಸೆ ಮೂಡಿಸಬೇಕು ಎಂದು ದಿ. ಡಿ.ದೇವರಾಜ ಅರಸು ವಿಚಾರ ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ, ಗೋವಿಂದ ನಾಯ್ಕ, ದೀಪಕ್ ಲೋಬೋ, ಕೇಶವ ನಾಯ್ಕ ಮಾಗೋಡ, ಪ್ರಗತಿಪರ ಚಿಂತನ ಸಂಘಟನೆಯ ಜಿ.ಎನ್.ಗೌಡ, ಉದಯ ನಾಯ್ಕ, ತುಳಸೀದಾಸ ಪಾವಸ್ಕರ್, ಎಂ.ಬಿ.ಗೌಡ, ಜಿ.ಕೆ.ಶೇಟ್, ಹುಸೇನ್ ಖಾದ್ರಿ, ಇಬ್ರಾಹಿಂ ಸಾಬ್ ಆಗ್ರಹಿಸಿದ್ದಾರೆ.
Leave a Comment