ಕಾರವಾರ: ಕೇರಳ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಅಸ್ಪುಸ್ರ್ಯತೆ ತಾಂಡವಾಡುತ್ತಿದ್ದ ಸಮಯದಲ್ಲಿ ದೇವಾಲಯ ಪ್ರವೇಶ ಚಳುವಳಿ ಮೂಲಕ ಅಸ್ಪುಸ್ರ್ಯತೆ ನಿವಾರಿಸುವಲ್ಲಿ ನಾಂದಿ ಹಾಡಿರುವ ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ನಾವಿಂದು ನೆನೆಯಬೇಕಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅಭಿಪ್ರಾಯ ಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಕೆಳವರ್ಗದವರನ್ನು ಮೇಲೆತ್ತಲು ನಾರಾಯಣ ಗುರು ಸಾಮಾಜಿಕ ಕ್ರಾಂತಿಯನ್ನು ಮಾಡಿದವರು. ಅವರ ಸಾಮಾಜಿಕ ಕಳಕಳಿಯನ್ನು ಮನಗಂಡು ರಾಷ್ಟ್ರಪಿತ ಮಹಾತ್ಮಾ ಗಾಂಧಿಜಿಯವರೂ ಕೂಡಾ ತಮ್ಮ ಅನೇಕ ಕೃತಿಗಳಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅವರ ಬಗ್ಗೆ ಪ್ರಸ್ತಾಪಿಸಿ ಸಮಾಜಿಕ ಬದಲಾವಣೆ ಸಮಾನತೆಯ ತತ್ವಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಉಲ್ಲೇಖಿಸಿದ್ದಾರೆ. ಸಮಾಜ ಚಿಂತಕರಾದ ನಾರಾಯಣಗುರು ಅವರ ವಿಚಾರಧಾರೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು. ಶ್ರೀಬ್ರಹ್ಮಶ್ರೀ ನಾರಾಯಣ ಗುರು ಕುರಿತು ಉಪನ್ಯಾಸ ನೀಡಿದ ಸರ್ಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಿ.ಕೆ.ನಾಯ್ಕ ಮಾತನಾಡಿ, ನಾರಾಯಣ ಗುರು ಅವರು ಸಮಾಜದ ಉದ್ದಾರಕ್ಕಾಗಿ ಮತ್ತು ಸಮಾಜದಲ್ಲಿದ್ದಂತಹ ತಾರತನ್ಯಗಳನ್ನು ಹೋಗಲಾಡಿಸಲು ಶ್ರಮಿಸಿದವರು. ಕೆಳಸಮುದಾಯದವರಿಗೂ ಶಿಕ್ಷಣ ಸಿಗಲಿ ಎಂಬ ಉದ್ದೇಶಕ್ಕಾಗಿ ಶಾಲೆಗಳನ್ನು ಪ್ರಾರಂಬಿಸಿದವರು.ಶೋಷಣೆಗೊಳಗಾದವರನ್ನು ಮೇಲೆತ್ತಲು ಪ್ರಯತ್ನಿಸಿ ಸಂಸ್ಕøತದೊಂದಿಗೆ ವಿವಿಧ ಭಾಷೆಗಳನ್ನು ಅಧ್ಯನ ಮಾಡುವದರೊಂದಿಗೆ ಧರ್ಮ ಸ್ಥಾಪನೆ ಮಾಡಿ ಎಲ್ಲರೊಂದಿಗೆ ತಾವೂ ಕೂಡಾ ಬೆರೆತಂತವರು. ನಾರಾಯಣ ಗುರು ಅವರು ಮಾಡಿದಂತಹ ಜ್ಞಾನೋದಯ ಕಾರ್ಯಗಳು ಎಲ್ಲ ಸಮುದಾಯದವರಿಗೆ ತಲುಪಬೇಕು. ಮುಕ್ತವಾದ ಸಮಾಜ ನಿರ್ಮಾಣವಾಗಬೇಕೆರಂದರೆ ಎಲ್ಲರೂ ಒಂದಾಗಬೇಕಿದೆ ಎಂದು ಹೇಳಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಲ್.ಚಂದ್ರಶೇಖರ ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಮಾಜಿಕ ಅಸಮಾನತೆ ಇದ್ದಂತಹ ಸಮಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅವರು ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆ. ಅವರನ್ನು ಇಂದು ಜಂಯಂತೋತ್ಸವ ಮೂಲಕ ಸ್ಮರಿಸಿ ಸಮಾನತೆಯ ಸಮಾಜದೆಡೆಗೆ ಸಾಗೋಣ ಎಂದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ(ಪ್ರಭಾರ) ರಾಮಕೃಷ್ಣ ನಾಯ್ಕ ಸ್ವಾಗತಿಸಿದರು. ಎ.ಸಿ ಶಿವಾನಂದ ಕರಾಳೆ, ನಾಮಧಾರಿ ಸಮುದಾಯದ ಅಧ್ಯಕ್ಷ ವಿಜಯಕುಮಾರ ನಾಯ್ಕ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Leave a Comment