ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಸುರಿದ ಬಾರಿ ಗಾಳಿ ಮಳೆಗೆ ಮೂರು ನೂರಕ್ಕೂ ಅಧಿಕ ಮರಗಳು ಧರೆಗಪ್ಪಳಿಸಿದ್ದು, ಐದು ಜಾನುವಾರು ಮೃತಪಟ್ಟು ಕೊಟ್ಟಿಗೆ, ತೋಟ ಹಾಗೂ ಕೆಲ ಮನೆಗಳು ದ್ವಂಸಗೊಂಡಿದೆ.
ಅರಣ್ಯ ಪ್ರದೇಶದಿಂದ ಕೂಡಿದ ಮಳಗಾಂ, ಸಾತನಬೈಲ್ ಮೊದಲಾದ ಕಡೆಗಳಲ್ಲಿ ಬುಧವಾರ ರಾತ್ರಿ ಬೀಕರ ಗಾಳಿ ಆವರಿಸಿದೆ. ಇದರ ಬೆನ್ನಲ್ಲೆ ಜೋರು ಮಳೆಯೂ ಸುರಿದಿದ್ದು, ಅರಣ್ಯದಲ್ಲಿನ ಮರಗಳು ನೆಲಕ್ಕೆ ಅಪ್ಪಳಿಸಿವೆ. ಸರಿ ಸುಮಾರು 5ಕಿ.ಮೀ ವಿಸ್ತಿರ್ಣದಲ್ಲಿನ ಮರಗಳು ಬಿದ್ದಿದ್ದರಿಂದ ಸಮೀಪದಲ್ಲಿದ್ದ ಕೊಟ್ಟಿಗೆ ನಾಶವಾಗಿದ್ದು, ಐದು ಜಾನುವಾರುಗಳು ಸಾವನಪ್ಪಿದೆ. ಸುತ್ತಲಿನ ಹಳ್ಳಿಗಳಲ್ಲಿ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಮಳಗಾಂ ನ ರಾಮ ಸಿದ್ದಿ ಎಂಬಾತರಿಗೆ ಸೇರಿದ ಮನೆ ಜಖಂ ಗೊಂಡಿದೆ. ಸಾನಬೈಲಿನ ಸವಿತಾ ಸುಬ್ರಾಯ ಸಿದ್ದಿ ಎಂಬುವವರಿಗೆ ಸೇರಿದ ಕೊಟ್ಟಿಗೆ ನಾಶಗೊಂಡಿದೆ. ಕೊಟ್ಟಿಗೆಯಲ್ಲಿ ಕಟ್ಟಿದ್ದ ಐದು ಜಾನುವಾರುಗಳು ಸ್ಥಳದಲ್ಲಿಯೇ ಸಾವು ಕಂಡಿವೆ. ಒಂದು ಆಕಳು ಗಾಯಗೊಂಡಿದ್ದು, ಉಳಿದ ಎರಡು ಜಾನುವಾರುಗಳು ಕಣ್ಮರೆಯಾಗಿದೆ. ಇದಲ್ಲದೇ ಮಳಗಾಂ ನ ನಾಗೇಂದ್ರರಾಮ ಸಿದ್ದಿಗೆ ಸೇರಿದ ಕೊಟ್ಟಿಗೆ, ಪುಟ್ಟಾ ಸಿದ್ದಿ ಮಳಗಾಂರ ಅಡಿಕೆತೋಟ, ಹೆಗ್ಗಾರ ಗ್ರಾಮದ ಸುಬಾಯ ಹುಲಿಯಾ ಸಿದ್ದಿಗೆ ಸೇರಿದ ಮನೆ ಗಾಳಿ ರಭಸಕ್ಕೆ ಸಿಲುಕಿ ಹಾನಿಯಾಗಿವೆ. ಹಳವಳ್ಳಿಯಿಂದ ಡೋಂಗ್ರಿ ತಲುಪುವ ರಸ್ತೆಗಳಲ್ಲಿ ನೂರಾರು ಮರ ಬಿದ್ದಿದ್ದು, ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಅರಣ್ಯ ಪ್ರದೇಶದಲ್ಲಿ ಆದ ಸಂಪೂರ್ಣ ಹಾನಿಗಳ ಬಗ್ಗೆ ಲೆಕ್ಕ ಸಿಕ್ಕಿಲ್ಲ. ಅರಣ್ಯ ಪ್ರದೇಶದಲ್ಲಿನ ಮರಗಳು ಬುಡ ಸಮೇತ ಕಿತ್ತಿದ್ದು, ಅಲ್ಲಲ್ಲಿ ಬೋಳು ಪ್ರದೇಶ ಕಾಣಿಸುತ್ತಿದೆ. ಹಳವಳ್ಳಿ ಮತ್ತು ಮಳಗಾಂ ಭಾಗದ ಸಿದ್ದಿ ಸಮುದಾಯದವರು ಗಾಳಿ ಮಳೆಗೆ ಅಂಚಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯತ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಪಿಡಿಒ ಗಿರೀಶ್ ನಾಯಕ್ ಹಾಗೂ ಕಂದಾಯ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Leave a Comment