ಜನತಾ ವಿದ್ಯಾಲಯ ಎಂಬ ಹೆಸರಿನ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಹಳ್ಳಿಯ ವಿದ್ಯಾರ್ಥಿಗಳಿಗೆ ಶಿಕ್ಷಣದ ರೊಟ್ಟಿ ಬಡಿಸಿದ ದಿ.ಡಾ.ದಿನಕರ ದೇಸಾಯಿಯವರ ಜನ್ಮ ದಿನಚರಣೆಯ ಅಂಗವಾಗಿ ಜನತಾ ವಿದ್ಯಾಯ ಕಾಸರಕೋಡಿನಲ್ಲಿ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶ್ರೀ ವಾಲಜಿ ಪಟೇಲ್, ಸದಸ್ಯರು ಶಾಲಾಬಿವೃದ್ಧಿ ಸಮಿತಿ ಕಾಸರಕೋಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಾಗೂ ಉದ್ಘಾಟಕರಾಗಿ ಇದೇ ಶಾಲೆಯಲ್ಲಿ ಬಹುವರ್ಷ ಶಿಕ್ಷಕಿಯಾಗಿ, ಮುಖ್ಯಾಧ್ಯಾಪಕಿಯಾಗಿ ಕಾರ್ಯನಿರ್ವಹಿಸಿ ನಿವೃತ್ತರಾದ ಶ್ರೀಮತಿ ಡಿ.ಕೆ.ಜೋಶಿಯವರು ಆಗಮಿಸಿ ದೀಪ ಬೆಳಗಿ, ಡಾ.ದಿನಕರ ದೇಸಾಯಿಯವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಡಾ.ದಿನಕರ ದೇಸಾಯಿಯವರ ಕುರಿತು ಮಾತನಾಡಿ ವಿದ್ಯಾರ್ಥಿಗಳಿಗೆ ಹಿತವಚನವನ್ನು, ಆದರ್ಶಗಳನ್ನು ತಿಳಿಹೇಳಿದರು. ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ರವೀಂದ್ರ ಶೆಟ್, ದೇವಗೌಡ, ತಿಮ್ಮಪ್ಪ ಗೌಡ, ಪುರಾಣಿಕರವರು ಆಗಮಿಸಿ ಕಾರ್ಯಕ್ರಮವನ್ನು ಚಂದಗಾಣಿಸಿ ಕೊಟ್ಟರು.
ಪ್ರಾಥಮಿಕ ಶಾಲಾ ವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಧನ್ಯ ಟಿ. ಗೌಡ ಹಾಗೂ ಪ್ರಜ್ಞಾ ತಿಮ್ಮಪ್ಪ ಗೌಡ ಹಿರಿಯ ಪ್ರಾಥಮಿಕ ಶಾಲೆ ಅಪ್ಸರಕೊಂಡ ಪ್ರಥಮ ಸ್ಥಾನವನ್ನು ಗಳಿಸಿದರು ಹಾಗೂ ಭಾವಗೀತೆಯಲ್ಲಿ ರಮ್ಯಾ ರಮೇಶ ಮೇಸ್ತ, ಹಿರಿಯ ಪ್ರಾಥಮಿಕ ಶಾಲೆ ಮಲಬಾರಕೇರಿ ಪ್ರಥಮ ಸ್ಥಾನ, ಪ್ರತಿಕ್ಷಾ ವಿಷ್ಣು ಖಾರ್ವಿ, ಹಿರಿಯ ಪ್ರಾಥಮಿಕ ಶಾಲೆ ಅಪ್ಸರಕೊಂಡ ದ್ವಿತೀಯ ಸ್ಥಾನ ಹಾಗೂ ಮೇಘನಾ ಹನುಮಂತ ಗೌಡ, ಹಿರಿಯ ಪ್ರಾಥಮಿಕ ಶಾಲೆ ಕಳಸನಮೋಟೆ ತೃತೀಯ ಸ್ಥಾನವನ್ನು ಪಡೆದರು. ಬಹುಮಾನ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಸಭಿಕರು ಪ್ರಶಸ್ತಿ ಪತ್ರ, ದಿನಕರ ದೇಸಾಯಿಯವರ ಪುಸ್ತಕದೊಂದಿಗೆ ನಗದು ಬಹುಮಾನವನ್ನು ವಿತರಿಸಿದರು. ಶಾಲಾ ಮಕ್ಕಳಿಗಾಗಿ ಆಯೋಜಿಸಿದ ಚುಟುಕು ವಾಚನ ಸ್ಪರ್ಧೆಯಲ್ಲಿ ವಿಜೇತರಾದವರಿಗೂ ಸಹ ಬಹುಮಾನ ವಿತರಿಸಲಾಯಿತು. ಶಾಲಾ ಮುಖ್ಯಾಧ್ಯಾಪಕರಾದ ಶ್ರೀಮತಿ ಫಿಲೋಮಿನಾ ಎಸ್. ರೋಡ್ರಗೀಸ್ರವರು ಅತಿಥಿಗಳನ್ನು ಪರಿಚಯದೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ಹಾಡಿದರು. ಶಿಕ್ಷಕಿಯರಾದ ಶ್ರೀಮತಿ ಪ್ರೀತಿ ನಾಯ್ಕರವರು ವಂದಿಸಿದರೆ ಜಿ.ಎಸ್.ಭಟ್ಟ ಕಾರ್ಯಕ್ರಮ ನಿರೂಪಿಸಿ. ಕೊನೆಯದಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.
Leave a Comment