ಹೊನ್ನಾವರ ; ತಾಲೂಕಿನ ಸರಳಗಿಯಲ್ಲಿ ಗ್ರಾಮ ಅರಣ್ಯ ಸಮಿತಿ ಸದಸ್ಯರಿಗೆ ಎಲ್.ಪಿ.ಜಿ ಗ್ಯಾಸ ವಿತರಣಾ ಕಾರ್ಯಕ್ರಮವನ್ನು ಶಾಸಕ ಮಂಕಾಳು ವೈದ್ಯ ನೆರವೇರಿಸಿದರು,
ನಂತರ ಮಾತನಾಡಿ ಅವರು ಅರಣ್ಯ ಸಮಿತಿ ರಚಿಸಿ ಕಾಡುಗಳ ರಕ್ಷಣೆಗೆ ಇಲಾಖೆಗೆ ಸಹಕಾರ ನೀಡಬೇಕು ನಮ್ಮ ಜಿಲ್ಲೆಯಲ್ಲಿರುವ ಅರಣ್ಯ ಪ್ರದೇಶ ಬೇರೆ ಯಾವ ಜಿಲ್ಲೆಯಲ್ಲಿಯೂ ಇಲ್ಲಾ, ಅಡುಗೆಗೆ ಉರುವಲು ಬಳಸುವುದನ್ನು ಕಡಿಮೆ ಮಾಡುವ ಸಲುವಾಗಿ ನಮ್ಮ ಸರ್ಕಾರ ಉಚಿತ ಗ್ಯಾಸ ವಿತರಣೆ
ಮಾಡುತ್ತಿದೆ ಕಾಡುಗಳ ರಕ್ಷಣೆ ಆಗುತ್ತದೆ ಇನ್ನು ಮುಂದೆ ಅರಣ್ಯ ಪ್ರದೇಶವನ್ನು ಅತಿಕ್ರಮಣ ಮಾಡಬಾರದು ಎಂದರು,
ಈ ಸಂದರ್ಭದಲ್ಲಿ ಉಲ್ಲಾಸ ನಾಯ್ಕ, ಪುಷ್ಪಾ ನಾಯ್ಕ, ಯೋಗೇಶ ರಾಯ್ಕರ್, ಸಂಗೀತಾ ಉಪ್ಪಾರ, ಗಣೇಶ್ ನಾಯ್ಕ, ಪ್ರಶಾಂತ ನಾಯ್ಕ, ಹುಸೇನ ಮೊದಲಾದ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
Leave a Comment