ಕಾರವಾರ: ನಾಗರಮುಡಿ ಜಲಪಾತದಲ್ಲಿನ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದ ಗೋವಾದ ಆರು ಜನರ ಪೈಕಿ ಸೋಮವಾರ ಮೂವರ ಮೃತದೇಹ ಪತ್ತೆಯಾಗಿದೆ.
ಸರ್ವಿ ಗಾವುಡೆ, ಸಿದ್ದು ಚಾರಿ ಹಾಗೂ ಮರ್ಸಲಿನ್ ಎಂಬಾತರ ಮೃತ ದೇಹವನ್ನು ಸ್ಥಳೀಯರು ಹೊರ ತೆಗೆದರು. ವಾರಾಂತ್ಯದ ಮೋಜಿಗಾಗಿ ಭಾನುವಾರ ಚೆಂಡಿಯಾದ ನಾಗರಮುಡಿ ಜಲಪಾತಕ್ಕೆ ಆಗಮಿಸಿದ್ದ ಗೋವಾ ಪ್ರವಾಸಿಗರು ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದರು. ವಿವಿಧ ದೋಣಿಗಳ ಮೂಲಕ ಹುಡುಕಾಟ ನಡೆಸಿದಾಗ ಮೊದಲ ದಿನ ಇಬ್ಬರು ಮಹಿಳೆಯರ ಮೃತದೇಹ ಕಂಡು ಬಂದಿತ್ತು. ರೇಣುಕಾ ಎಂಬಾತರ ಕುರಿತು ಇನ್ನು ಯಾವದೇ ಸುಳಿವು ಸಿಕ್ಕಿಲ್ಲ. ಕರಾವಳಿ ಜಲ ಸಾಹಸ ಕೇಂದ್ರ ಈಜು ತಜ್ಞರಾದ ಪ್ರಕಾಶ ಹರಿಕಂತ್ರ, ಚಂದ್ರಕಾಂತ ಹರಿಕಂತ್ರ, ಪವನ್, ಗೌರೀಶ್ ಇತರರು ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಕಾಣೆಯಾದವರ ಹುಡುಕಾಟ ಮುಂದುವರೆಸಿದ್ದಾರೆ.
Leave a Comment