ಹೊನ್ನಾವರ:
ಶರಾವತಿ ನದಿಯ ಇಕ್ಕೆಲಗಳಲ್ಲಿ ರೇತಿ ಬಿಸಿನೆಸ್ ಭರದಿಂದ ಸಾಗಿದೆ. ಕಳೆದ ಸರಿ ಸುಮಾರು ಒಂದು ವರ್ಷದ ನಿಷೇದದ ನಂತರ ಅನುಮತಿ ದೊರೆತ ಮೇಲೆ ಇದೀಗ ಆರಂಭವಾದ ರೇತಿ ವ್ಯಾಪಾರ ಹೊಸ ಸಂಕಟಕ್ಕೆ ಒಳಗಾಗಿದೆ. ಈ ಸಂಕಟಕ್ಕೆ ಕಾರಣ ರೇತಿ ಸೈಟ್ ಓನರ್ ಗಳೆಂದು ಲಾರಿ ಮಾಲಿಕರು ದೂರುತಿದ್ದಾರೆ. ಯಾಕೆಂದರೆ ಸೈಟ್ ಹೊಂದಿರುವವರೇ ನೇರವಾಗಿ ರೇತಿಯನ್ನು ತಮ್ಮ ಲಾರಿಗಳಲ್ಲಿ ರೇತಿ ತುಂಬಿ ಗ್ರಾಹಕರಿಗೆ ತಲುಪಿಸುತ್ತಿದ್ದಾರೆ. ಇದು ಕೇವಲ 17 ಸಾವಿರ ಅಥವಾ 17,500 ಕ್ಕೆ ಮುಗಿಯುತ್ತದೆ.
ರೇತಿ ವ್ಯಾಪಾರದಲ್ಲಿ ಲಾಭ ಮಾಡಿಕೊಳ್ಳುವ ಉದ್ದೆಶದಿಂದ ಹಲವಾರು ಲಾರಿ ಕೊಂಡು ಪರ್ಮಿಟ್ ಪಡೆದಿದ್ದರು. ಅವರುಗಳು ಒಂದು ಲೋಡ್ ರೇತಿ ಡೆಲಿವರಿಗೆ 22 ಸಾವಿರದವರೆಗೆ ಪಡೆದುಕೊಂಡು ಸಾಕಷ್ಟು ಮಧ್ಯದಲ್ಲಿ ಹಂಚಿ,ಡ್ರೈವರ್,ಕ್ಲೀನರ್,ಕೆಲಸಗಾರರಿಗೆ ಹಂಚಿ ಸ್ವಲ್ಪ ಕಾಸು ಮಾಡಿಕೊಳ್ಳುತ್ತಿದ್ದರು. ಆದರೆ ಈಗ ಪರಿಸ್ಥಿತಿ ಘೋರವಾಗಿ ಬಿಟ್ಟಿದೆ. ಸೈಟ್ ಓನರ್ ಗಳೇ ಇನ್ನೊಂದು ಲಾರಿ ಪರ್ಮಿಟ್ ಮಾಡಿಕೊಂಡು ಬಿಟ್ಟಿದ್ದಾರೆ. ಇವರು ಅತೀ ಕಡಿಮೆ ದರಕ್ಕೆ ಕೊಡುತ್ತಿದ್ದಾರೆ. ರೇತಿಗೆ ಹೇಗಿದ್ದರೂ ಹಣವಿಲ್ಲ. ರೇತಿ ತಗೆಯುವ ಯುವಕರಿಗೆ ಹಣ ನೀಡಿದರಾಯಿತು. ಅಷ್ಟೇ ಉಳಿದಂತೆ ಬರುವ ಹಣವೆಲ್ಲಾ ಇವರದೇ ಪಾಲು.
ಹಿಂದೆ ಅನುಮತಿಗಾಗಿ ನಡೆದ ಹೋರಾಟದಲ್ಲಿ ಲಾರಿ ಮಾಲಿಕರೇ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಈಗ ಬದಲಾಗಿದೆ. ಸೈಟ್ ಮಾಲಿಕರ ದುರಾಸೆ ಇದಕ್ಕೆ ಕಾರಣ ಎಂದು ಲಾರಿ ಮಾಲಿಕರ ಆಪಾದನೆ. ಇಬ್ಬರೂ ಕುಳಿತು ಇದನ್ನು ಸೌಹಾರ್ದವಾಗಿ ಬಗೆಹರಿಸಿಕೊಳ್ಳದಿದ್ದರೆ ಇದೊಂದು ದೊಡ್ಡ ದುರಂತಕ್ಕೆ ಕಾರಣವಾಗಬಹುದು
Leave a Comment