ಹೊನ್ನಾವರ :-
ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇವರಿಂದ ಏರ್ಪಡಿಸಲ್ಪಟ್ಟ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿ ವರ್ಷಾ ಗಣೇಶ ಹೆಗಡೆ ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಇವಳನ್ನು ಶಾಲಾ ಮುಖ್ಯೋಪಾಧ್ಯಾಯರಾದ ಎನ್. ಯು. ಭಟ್ಟ, ಶಿಕ್ಷಕರಾದ ಎಮ್.ಎಸ್. ಹೆಗಡೆ, ಪಾರ್ವತಿ ಹೆಗಡೆ, ಸಾವಿತ್ರಿ ದೇವಾಡಿಗ ಎಸ್.ಡಿ.ಎಮ್.ಸಿ. ಅಧ್ಯಕ್ಷ ಕೃಷ್ಣ ಆಚಾರಿ, ಉಪಾಧ್ಯಕ್ಷೆ ಮಮತಾ ಹೆಗಡೆ ಮುಂತಾದವರು ಅಭಿನಂದಿಸಿದ್ದಾರೆ,
Leave a Comment