ಹೊನ್ನಾವರ:
ಕೊಂಕಣ ಸಾಹಿತ್ಯ ಅಕಾಡೆಮಿ ಸರಿಸುಮಾರು 27-28 ವರ್ಷಗಳ ಹಿಂದೆ ರಚನೆಗೊಂಡಿತಷ್ಟೆ. ಆದರೆ ಈ ಅಕಾಡೆಮಿ ರಾಜ್ಯದ 25 ಲಕ್ಷ ಕೊಂಕಣಿಗಳನ್ನು ಪ್ರತಿನಿಧಿಸಬೇಕೆಂಬುದು ಎಲ್ಲರ ಅಕಾಂಕ್ಷೆ ಆಗಿತ್ತು. ಆದರೆ ಈ ಅಕಾಡೆಮಿ ಮಂಗಳೂರು ಜಿಲ್ಲೆಗೆ ಮಾತ್ರ ಸೀಮಿತವಾಗಿ ಬಿಟ್ಟಿತು. ಇದುವರೆಗೆ ಬಂದ ಅಧ್ಯಕ್ಷರು ಅವಿಭಜಿತ ದಕ್ಷಿಣ ಕನ್ನಡಕ್ಕೆ ಮೀಸಲಾಗಿದ್ದರು. ಈ ಬಾರಿ ಪ್ರಪ್ರಥಮವಾಗಿ ಉತ್ತರ ಕನ್ನಡ ಜಿಲ್ಲೆಗೆ ಅಧ್ಯಕ್ಷಸ್ಥಾನ ಪ್ರಾಪ್ತವಾಗಿದೆ. ದಾಂಡೇಲಿಯ ರವೀಂದ್ರನಾಥ ಪಿ. ನಾಯ್ಕ ಇವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದರಿಂದ ಉತ್ತರ ಕನ್ನಡ ಜಿಲ್ಲೆಯ ಕೊಂಕಣಿಗರು ಹೆಮ್ಮೆಪಡುವಂತಾಗಿದೆ.
ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ಅಧ್ಯಕ್ಷರು ಕೊಂಕಣಿಪರ ಕಾರ್ಯ ಚಟುವಟಿಕೆಯನ್ನು ಆರಂಭಿಸಿದ್ದಾರೆ. ಬಹು ಅರ್ಥಪೂರ್ಣವಾಗಿ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ನಡೆಸುತ್ತಿದ್ದಾರೆ. ಇದೇ ಬರುವ 24-09-2017 ರ ರವಿವಾರ ಜಿಲ್ಲೆಯ ಯುವಕ / ಯುವತಿಯರಿಗಾಗಿ 1 ದಿನದ ಕಾರ್ಯಗಾರ ಏರ್ಪಡಿಸಿದ್ದಾರೆ. ಇದರಲ್ಲಿ ತಜ್ಞರಿಂದ ಕೊಂಕಣಿ ಭಾಷೆ ಮತ್ತು ಸಾಹಿತ್ಯದ ಪರಿಚಯ ಮಾಡಿಕೊಡುವ ಏರ್ಪಾಡು ನಡೆಸಿದ್ದಾರೆ. ಹೀಗೆ ಕೊಂಕಣ ಅಕಾಡೆಮಿ ಹೊಸ ದಾರಿ ಹಿಡಿದಿರುವುದು ಕೊಂಕಣಿಯ ಭವಿಷ್ಯದ ದೃಷ್ಠಿಯಿಂದ ಉತ್ತಮವಾಗಿವೆ.
Leave a Comment