ಕಾರವಾರ:
ಕೆನರಾ ವೆಲ್ಫೆರ್ ಟ್ರಸ್ಟ್ನ ದಿನಕರ ಕಲಾನಿಕೇತನ ಸಂಗೀತ ವಿದ್ಯಾಲಯದಲ್ಲಿ ಈಚೆಗೆ ಶಾರದಾ ಪೂಜೆ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ನಡೆಯಿತು. ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಪ್ರಾರ್ಥನೆ, ಶ್ಲೋಕ, ಭಜನೆಗಳ ತತ್ಸಂಗ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬಂತು. ಸಂವಾದಿನಿಯಲ್ಲಿ ಸಂಗೀತ ಶಿಕ್ಷಕ ಮಾರುತಿ ನಾಯ್ಕ ಹಾಗೂ ತಬಲಾ ಶಿಕ್ಷಕ ಗಣಪತಿ ಹೆಗಡೆ ತಬಲಾದಲ್ಲಿ ಸಾಥ್ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ದಿವೇಕರ ಕಾಲೇಜಿನ ಪ್ರಾಚಾರ್ಯ ಬಿ.ಎಚ್.ನಾಯಕ ಮಾತನಾಡಿ, ಸಂಗೀತ ಇದೊಂದು ಭಾವನಾತ್ಮಕ ಸಂಸ್ಕøತಿ. ಇದರಲ್ಲಿನ ಸಾಹಿತ್ಯ ನಮ್ಮ ಬದುಕಿಗೆ ಚೈತನ್ಯ ನೀಡುತ್ತದೆ. ಸಂಗೀತ ವಿದ್ಯಾಲಯದಲ್ಲಿ ವಿದ್ಯಾಧಿದೇವತೆ ಸರಸ್ವತಿಯನ್ನು ಆರಾಧಿಸುವುದು ಪವಿತ್ರ ಕಾರ್ಯ ಎಂದರು.
ಪ್ರಮುಖರಾದ ಅನಿರುದ್ಧ ಹಳದಿಪುರಕg, ಸಂತೋಷ ಶೇಟ್, ಶಮೀಂದರ್ ಮೊದಲಾದವರು ಪಾಲ್ಗೊಂಡಿದ್ದರು.
Leave a Comment