ಕಾರವಾರ:
ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಡ ರೋಗಿಗಗಳಿಗೆ ಜನಶಕ್ತಿ ವೇದಿಕೆಯವರು ರವಿವಾರ ಉಚಿತ ಕ್ಷೌರ ಮಾಡಿಸಿ, ಹೊಸ ಬಟ್ಟೆ ವಿತರಿಸಿದರು.
ಕಳೆದ ಎರಡು ವರ್ಷದಿಂದ ಗಾಂಧಿ ಜಯಂತಿ ಮುನ್ನಾ ದಿನ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯ ನಡೆಸಲಾಗುತ್ತಿದೆ. ಪ್ರಸ್ತುತ 7 ಮಂದಿ ಬಡ ರೋಗಿಗಳಿಗೆ ಕ್ಷೌರ ಮಾಡಿಸಿದರು. ಕಳೆದ ಹಲವಾರು ದಿನಗಳಿಂದ ದಾಖಲಾಗಿ ಗಡ್ಡ, ಕೂದಲು ಬಿಟ್ಟು ವೈಯಕ್ತಿಕ ಸ್ವಚ್ಛತೆ ಮರೆತಂತಿದ್ದ ರೋಗಿಗಳಿಗೆ ಮುಂಜಾನೆ ಆಸ್ಪತ್ರೆಗೆ ಕ್ಷೌರಿಕನನ್ನು ಕರೆತಂದು ಕ್ಷೌರ ಮಾಡಿಸಿ, ಹೊಸ ಬಟ್ಟೆ ತೊಡಿಸಿ, ಗಾಂಧಿ ಜಯಂತಿಗೂ ಮುನ್ನಾದಿನ ಸ್ವಚ್ಛತೆಯ ಬಗ್ಗೆ ಹೊಸ ಸಂದೇಶವನ್ನು ಸಾರಲಾಯಿತು.
ಫಕೀರಪ್ಪ ಭಂಡಾರಿ, ಖೈರುನ್ನೀಸಾ ಶೇಖ್, ಸುರೇಶ ನಾಯ್ಕ, ರಾಜೀವ ನಾಯ್ಕ, ಚಂದ್ರಕಾಂತ ನಾಯ್ಕ, ಕಂದಸ್ವಾಮಿ, ಗುರುಪ್ರಸಾದ ನಾಯ್ಕ, ನಾಗೇಶ ನಾಯ್ಕ, ಮಾಧವ ನಾಯಕ, ಮಧುರಾ ನಾಯಕ ಮತ್ತು ಯಶಸ್ವಿನಿ ನಾಯಕ ಉಪಸ್ಥಿತರಿದ್ದರು.
Leave a Comment