ಕಾರವಾರ: ಮಾನಸಿಕ ಆರೋಗ್ಯ ಕಾನೂನುಗಳ ಸಮರ್ಪಕ ಅನುಷ್ಠಾನ ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ನ್ಯಾಯಿಕ ದಂಡಾಧಿಕಾರಿ ಶಿವಕುಮಾರ ಬಿ. ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಂiÀiವಾದಿಗಳ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಟರಿ ಕ್ಲಬ್, ಬಾಪೂಜಿ ನರ್ಸಿಂಗ್ ವಿದ್ಯಾಲಯ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ವಿವಿಧ ಸ್ವಯಂಸೇವಾ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಕಾರವಾರದಲ್ಲಿ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಮಾನಸಿಕ ಆರೋಗ್ಯ ಕಾಯ್ದೆ ಇದ್ದರೂ ಕಾನೂನುಗಳ ಸಮರ್ಪಕ ಅನುಷ್ಠಾನ ಆಗುತ್ತಿಲ್ಲ. ಆದ್ದರಿಂದ ಕಾನೂನುಗಳ ಸಮರ್ಪಕ ಅನುಷ್ಠಾನ ಮಾಡುವ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಬೇಕಿದೆ ಎಂದರು.
ಮಾನಸಿಕ ಅಸ್ವಸ್ಥರಿಗೆ ಸಮರ್ಪಕ ಚಿಕಿತ್ಸೆ ಕೊಡಿಸಬೇಕು. ಚಿಕಿತ್ಸೆ ನಂತರವೂ ಪೂರ್ಣ ಗುಣಮುಖರಾಗುವವರೆಗೆ ಚಿಕಿತ್ಸೆಯಲ್ಲಿರಬೇಕಾಗುತ್ತದೆ. ಅದು ಕಾನೂನು ವ್ಯಾಪ್ತಿಯಲ್ಲಿದೆ ಎಂದು ಅವರು ಹೇಳಿದೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆದ ಹಿರಿಯ ನ್ಯಾಯಾಧೀಶ ಟಿ.ಗೋವಿಂದಯ್ಯ ಅವರು, ಮಾನಸಿಕ ಅಸ್ವಸ್ಥತೆಗೆ ಒತ್ತಡವೇ ಪ್ರಮುಖ ಕಾರಣ. ಆದ್ದರಿಂದ ದೈನಂದಿನ ಬದುಕಿನಲ್ಲಿ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು. ಯಾವುದೇ ಕೆಲಸಗಳನ್ನು ಮುಂದೂಡದೆ ಆಯಾ ಕೆಲಸಗಳನ್ನು ಅಂದೇ ಮಾಡುವುದು ಆರೋಗ್ಯಕರ ಎಂದರು.
ಮಾನಸಿಕ ರೋಗ ತಜ್ಞ ಡಾ. ಸರ್ವೇಶಕುಮಾರ ಅವರು, ವ್ಯಕ್ತಿಯು ಪ್ರತಿನಿತ್ಯ ಪರಿತಪಿಸುವ ತೊಂದರೆಗಳು, ಅನಾವಶ್ಯಕ ವಿಚಾರ, ಮಾನಸಿಕ ಒತ್ತಡಗಳಿಂದ ತನ್ನಿಂದ ಪರಿಹಾರ ಕಂಡುಕೊಳ್ಳುವ ವಿಷಯಗಳ ಉಪನ್ಯಾಸ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಜಿ.ಎನ್. ಅಶೋಕಕುಮಾರ ಪ್ರಾಸ್ತವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯಾವಾದಿ ಸಂಘದ ಅಧ್ಯಕ್ಷ ಉದಯ ಎನ್ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಸಿವಿಲ್ ನ್ಯಾಯಾಧೀಶ ಮಹೇಶ ಚಂದ್ರಕಾಂತ, ರೋಟರಿ ಕ್ಲಬ್ನ ಅಧ್ಯಕ್ಷ ರಾಜೇಶ ವರ್ಣೇಕರ್, ಸಿ.ಎಚ್. ನಾಯ್ಕ ಮತ್ತಿತರು ಭಾಗವಹಿಸಿದ್ದರು.
Leave a Comment