ಹೊನ್ನಾವರ ; ಯಕ್ಷಗಾನ ಒಂದು ಪರಿಪೂರ್ಣ ಕಲೆ, ಈ ಪರಿಪೂರ್ಣವಾದ ಕಲೆಯಲ್ಲಿ ಚಿಟ್ಟಾಣಿಯವರಂತಹ ಪಾತ್ರಧಾರಿಗಳು ಪ್ರೇಕ್ಷಕರನ್ನು ಪ್ರೇರಣೆಗೋಳಿಸುತ್ತಿದ್ದರು, ಇಂತಹ ಪರಿಪೂರ್ಣವಾದ ಕಲೆಗೆ ಇನ್ನಷ್ಟು ಹೆಚ್ಚು ಶಕ್ತಿ ಕೊಟ್ಟು ಆ ಕಲೆಯನ್ನು ಸಮೃದ್ಧಿಗೊಳಿಸುವ ಪ್ರಯತ್ನವನ್ನು ಮಾಡಿರುವುದು ಪರಿಪೂರ್ಣವಾದ ಕಲಾವಿದರಾದ ಚಿಟ್ಟಾಣಿಯವರು ಎಂದು. ಮಾಜಿ ಶಿಕ್ಷಣ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ದಿ. ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ವೈಕುಂಠ ಸಮಾರಾಧನೆಯ ಪ್ರಯುಕ್ತ ಬಂಗಾರಮಕ್ಕಿ ವೀರಾಂಜನೇಯ ಮಹಾಸಂಸ್ಥಾನಮ್ ಹೇಮಪುರ ಮಹಾಪೀಠಮ್, ಮಾರುತೀ ಗುರೂಜಿಯವರ ಸಾನಿಧ್ಯದಲ್ಲಿ, ನಡೆದ ‘ಚಿಟ್ಟಾಣಿ ನುಡಿನಮನ’ “ ಚಿಟ್ಟಾಣಿ ವ್ಯಾಖ್ಯಾನ-ಆಖ್ಯಾನ” ಕಾರ್ಯಕ್ರಮದಲ್ಲಿ ಅವರು ಮಾಜಿ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದರು.
À ಭಟ್ಕಳ, ಹಾಗೂ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಮಂಕಾಳು ಎಸ್. ವೈದ್ಯ ಮಾತನಾಡಿ, ಚಿಟ್ಟಾಣಿಯವರು ನಮ್ಮನ್ನು ಅಗಲಿರುವುದು ಬಹಳ ದುಖಃಕರ ವಿಷಯವಾಗಿದೆ, ಅವರ ನೆನಪು ಚಿರವಾಗಿರಲಿ ಎಂದು ಹೊನ್ನಾವರ ಸರ್ಕಲ್ ಅನ್ನು ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಸರ್ಕಲ್ ಎಂದು ಮಾಡಲು ಪಟ್ಟಣ ಪಂಚಾಯತಿಗೆ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದರು ಹಾಗೂ ವರ್ಷಕ್ಕೊಮ್ಮೆ ಯಕ್ಷಗಾನ ಕಲಾವಿದರಿಗೆ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಸಿಗುವ ಹಾಗೆ ಪ್ರಯತ್ನ ನಡೆಸುವುದಾಗಿ ತಿಳಿಸಿದರು.
. ಚಿಟ್ಟಾಣಿಯವರ ಪುತ್ರ ಸುಬ್ರಹ್ಮಣ್ಯ ಚಿಟ್ಟಾಣಿಯವರು ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಭಟ್ಕಳ, ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಮಂಕಾಳು ಎಸ್. ವೈದ್ಯರವರು ಮಾತನಾಡಿ, ಚಿಟ್ಟಾಣಿಯವರು ನಮ್ಮನ್ನು ಅಗಲಿರುವುದು ಬಹಳ ದುಖಃಕರ ವಿಷಯವಾಗಿದೆ, ಅವರ ನೆನಪು ಚಿರವಾಗಿರಲಿ ಎಂದು ಹೊನ್ನಾವರ ಸರ್ಕಲ್ ಅನ್ನು ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಸರ್ಕಲ್ ಎಂದು ಮಾಡಲು ಪಟ್ಟಣ ಪಂಚಾಯತಿಗೆ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದರು ಹಾಗೂ ವರ್ಷಕ್ಕೊಮ್ಮೆ ಯಕ್ಷಗಾನ ಕಲಾವಿದರಿಗೆ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಸಿಗುವ ಹಾಗೆ ಪ್ರಯತ್ನ ನಡೆಸುವುದಾಗಿ ತಿಳಿಸಿದರು.
ಶ್ರೀಕ್ಷೇತ್ರದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಶ್ರೀ ಮಾರುತೀ ಗುರೂಜಿ ಮಾತನಾಡಿ, ಚಿಟ್ಟಾಣಿಯವರಿಗೆ ಸರಿಹೊಂದಿಸಲು ಬೇರೊಂದಿಲ್ಲ, ಚಿಟ್ಟಾಣಿಯವರಿಗೆ ಚಿಟ್ಟಾಣಿಯೇ ಸರಿ. ಹೊಸ ಕಲಾವಿದರನ್ನು, ಯುವಕರನ್ನು ಹುರಿದುಂಬಿಸಿ ಅವರಿಗೆ ಧೈರ್ಯ ನೀಡುತ್ತಿದ್ದ ಅಗ್ರ ಗಣ್ಯ ಕಲಾವಿದರು ಚಿಟ್ಟಾಣಿಯವರು. ಅವರು ಕಲಿತಿರುವುದು ಅಲ್ಪವಾದರೂ, ಅವರು ಕಲಿಸಿಕೊಟ್ಟಿರುವುದು ಅಮೋಘವಾದಂತದ್ದು ಎನ್ನತ್ತಾ ದಿವಂಗತ ಚಿಟ್ಟಾಣಿಯವರನ್ನು ನೆನೆದು ಭಾವೋದ್ವೇಗರಾದರು.
ಕಾರ್ಯಕ್ರಮದಲ್ಲಿ ಪ್ರಮೋದ ಹೆಗಡೆ ಯೆಲ್ಲಾಪುರ, ಹಿರಿಯ ಸಾಂಸ್ಕøತಿಕರು, ದತ್ತಮೂರ್ತ ಭಟ್ಟ್, ಯಕ್ಷಗಾನ ಅಕಡಾಮಿಯ, ಶಿವಾನಂದ ಹೆಗಡೆ ಕೆರೆಮನೆ, ನಿರ್ದೇಶಕರು, ಕಲಾಕೇಂದ್ರ ಗುಣವಂತೆ. ಶ್ರೀ ರಾಮಕೃಷ್ಣ ನಾಯಕ, ಕನ್ನಡ ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರು, ಭಿಮೇಶ್ವರ ಜೋಶಿ, ಧರ್ಮಕರ್ತರು, ಹೊರನಾಡ ಅನ್ನಪೂರ್ಣೇಶ್ವರಿ ಕ್ಷೇತ್ರ ಹಾಗೂ ಅನೇಕ ಗಣ್ಯಾತಿ ಗಣ್ಯರು ಮತ್ತು ಅನೇಕ ಯಕ್ಷಗಾನ ಕಲಾವಿದರು ಉಪಸ್ಥಿತರಿದ್ದರು.
ನಂತರದಲ್ಲಿ “ಗಧಾಯುದ್ಧ” ಎಂಬ ಯಕ್ಷಗಾನ ಪ್ರಸಂಗವು ಸುಬ್ರಹ್ಮಣ್ಯ ಚಿಟ್ಟಾಣಿ, ನರಸಿಂಹ ಚಿಟ್ಟಾಣಿ, ಕಾರ್ತಿಕ ಚಿಟ್ಟಾಣಿ, ದತ್ತಮೂರ್ತಿ ಭಟ್ಟ್ ಹಾಗೂ ಇತರ ಕಲಾವಿದರಿಂದ ಸುಂದರವಾಗಿ ಮೂಡಿಬಂದಿತು.
Leave a Comment